ಇಡೀ ವಿಶ್ವವೇ ಬುದ್ಧನತ್ತ ಮುಖ ಮಾಡಿದೆ

KannadaprabhaNewsNetwork |  
Published : May 24, 2024, 12:58 AM IST
ಇಡೀ ವಿಶ್ವವೇ ಬುದ್ದನತ್ತ ಮುಖ ಮಾಡಿದೆ : ಮನೋರಖ್ಖಿತ ಬಂತೇಜಿ | Kannada Prabha

ಸಾರಾಂಶ

ವಿಶ್ವದ ಜ್ವಲಂತ ಸಮಸ್ಯೆಗಳಿಗೆ ಗೌತಮ ಬುದ್ಧ ವೈದ್ಯರಾಗಿದ್ದು, ಇಡೀ ವಿಶ್ವವೇ ಬುದ್ಧನತ್ತ ಮುಖ ಮಾಡಿದೆ ಎಂದು ಕೊಳ್ಳೇಗಾಲ ಜೇತವನ ಬೌದ್ಧ ವಿಹಾರದ ಬಿಕ್ಕು ಮನೋರಖ್ಖಿತ ಬಂತೇಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವಿಶ್ವದ ಜ್ವಲಂತ ಸಮಸ್ಯೆಗಳಿಗೆ ಗೌತಮ ಬುದ್ಧ ವೈದ್ಯರಾಗಿದ್ದು, ಇಡೀ ವಿಶ್ವವೇ ಬುದ್ಧನತ್ತ ಮುಖ ಮಾಡಿದೆ ಎಂದು ಕೊಳ್ಳೇಗಾಲ ಜೇತವನ ಬೌದ್ಧ ವಿಹಾರದ ಬಿಕ್ಕು ಮನೋರಖ್ಖಿತ ಬಂತೇಜಿ ಹೇಳಿದರು.ನಗರದ ಸಾರನಾಥ ಬೌದ್ದ ವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾ ತಾಲೂಕು ವಿಭಾಗ ಆಯೋಜಿಸಿದ ವೈಶಾಖ ಬುದ್ಧ ಪೂರ್ಣಿಮೆ ೨೫೬೮ನೇ ಪವಿತ್ರ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ, ಪಠಣ ಮತ್ತು ಉಪದೇಶ ಹಾಗೂ ದೀಕಾ ಕಾರ್ಯಕ್ರಮ ನಡೆಸಿಕೊಟ್ಟು, ಸಾಮೂಹಿಕ ಬುದ್ಧವಂದನೆ ಸಲ್ಲಿಸಿ ಮಾತನಾಡಿದರು. ವೈಶಾಖ ಬುದ್ಧ ಪೂರ್ಣಿಮೆಯನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ. ಏಷ್ಯಾ ಖಂಡದ ಬೌದ್ಧ ರಾಷ್ಟ್ರಗಳು, ಯುರೋಪ್, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬುದ್ದ ಪೂರ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ ಎಂದರು.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ ಅವರು ಬೌದ್ಧ ಧಮ್ಮ ಸ್ವೀಕರಿಸಿದ ಮೇಲೆ ಭಾರತದಲ್ಲಿ ಬೌದ್ಧ ಧಮ್ಮ ಕ್ರಾಂತಿ ಉಂಟು ಮಾಡಿದೆ. ರಾಜ್ಯದ ೧೨೭ ಬೌದ್ಧ ವಿಹಾರಗಳು ಹಾಗೂ ಅನೇಕ ಸಂಘಟನೆಗಳು ಬುದ್ಧ ಜಯಂತಿ ಆಚರಿಸುತ್ತಾರೆ. ವಿಶ್ವದ ಬೆಳಕು, ಪ್ರೀತಿ, ಕರುಣೆ, ಮೈತ್ರಿ ಭೋಧಿಸಿ ವಿಶ್ವಕ್ಕೆ ಮಾದರಿಯಾದವರು ಬುದ್ಧ. ದೇಶದ ಶೋಷಿತ ಸಮುದಾಯಗಳ ಮಾನಸಿಕ ವಿಮೋಚನೆಗೆ ಧಮ್ಮ ಮಾರ್ಗವಾಗಿದೆ ಎಂದರು. ಭಾರತೀಯ ಬೌದ್ಧ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ಸಿದ್ದರಾಜು ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡಿದರು. ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾ ಖಜಾಂಚಿ ಡಿ.ಸೋಮಣ್ಣ ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಸವರಾಜು, ಸಂಸ್ಕಾರ ವಿಭಾಗದ ಉಪಾಧ್ಯಕ್ಷ ಪುಟ್ಟಸ್ವಾಮಿ, ಪ್ರವಾಸ ಮತ್ತು ಪ್ರಚಾರ ಸಮಿತಿ ಉಪಾಧ್ಯಕ್ಷ ಉಮೇಶ್ ಕುದರ್, ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗಶಿಲ್ಪ, ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಎ.ಶಿವಣ್ಣ, ಸಿದ್ದಾರ್ಥ ಪರಿಶಿಷ್ಠ ಜಾತಿ ಸರ್ಕಾರಿ ನೌಕರರ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಸಿದ್ದರಾಜು, ರಮಾಬಾಯಿ ಸಂಘ ಅಧ್ಯಕ್ಷ ಪುಷ್ಪಮರಿಸ್ವಾಮಿ, ಬುದ್ಧ ನಗರ ನಾಗರೀಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಹದೇವಯ್ಯ, ಕೆಇಬಿ ಸಹಾಯಕ ಇಂಜಿನಿಯರ್ ಸಿದ್ದರಾಜಪ್ಪ, ವಕೀಲರಾದ ನಾಗರಾಜು, ನಾಗಣ್ಣ, ಯಜಮಾನ ಬಸವಣ್ಣ ಹಾಗೂ ಬುದ್ಧನ ಉಪಾಸಕರು, ಅನುಯಾಯಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!