ರಾಶ್ಚೇರುವು ಗ್ರಾಪಂ ವ್ಯಾಪ್ತಿಯಲ್ಲಿ ‘ಜಲಜೀವನ್’ ಕಾಮಗಾರಿ ಅಧ್ವಾನ

KannadaprabhaNewsNetwork |  
Published : Feb 18, 2025, 12:35 AM IST
ರಾಶ್ಚೇರುವು ಗ್ರಾಮದಲ್ಲೆ ಸಾರ್ವಜನಿಕ ನಳ್ಳಿಗೆ ಅಳವಡಿಸಿರುವ ಪೈಪ್ ಮೇಲೆಯೆ ಜಲಜೀವನ್ ಮೀಷನ್ ಯೋಜನೆಯ ಪೈಪ ಅಳವಡಿಸಿರುವುದು. | Kannada Prabha

ಸಾರಾಂಶ

ಜಲ ಜೀವನ್ ಯೋಜನೆಯ ಕಾಮಗಾರಿ ನೆಪದಲ್ಲಿ ಗಡ್ಡಂಪಲ್ಲಿ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಕಳೆದ ಎರಡು ವರ್ಷದ ಹಿಂದೆ ಈ ಯೋಜನೆಯನ್ನು ಜಾರಿಗೊಳಿಸಲು ಗ್ರಾಮದ ಮುಖ್ಯರಸ್ತೆಗಳನ್ನು ಅಗೆದು ಹಾಗೆ ಬಿಟ್ಟಿದ್ದಾರೆ. ಮನೆಗಳ ಮುಂದೆ ಪೈಪ್ ಅಳವಡಿಕೆಗೆ ತೆಗೆದಿರುವ ಕಾಲುವೆ ಗುಂಡಿಯನ್ನು ತಾವೇ ಮಣ್ಣಿನಿಂದ ಮುಚ್ಚಿ ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ಚೇಳೂರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ ನಿರೀಕ್ಷೆಯಂತೆ ರಾಶ್ಚೇರುವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾರಿಯಾಗುತ್ತಿಲ್ಲ ಎಂಬುದು ಇಲ್ಲಿಯ ಜನತೆಯ ಆರೋಪವಾಗಿದೆ.

ತಾಲೂಕಿನ ರಾಶ್ಚೇರುವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಲವು ಹಳ್ಳಿಗಳಲ್ಲಿ ಜಲ ಜೀವನ್ ಯೋಜನೆಯ ಕಾಮಗಾರಿ ನೆಪದಲ್ಲಿ ಗಡ್ಡಂಪಲ್ಲಿ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿನ ಕಳೆದ ಎರಡು ವರ್ಷದ ಹಿಂದೆ ಈ ಯೋಜನೆಯನ್ನು ಜಾರಿಗೊಳಿಸಲು ಗ್ರಾಮದ ಮುಖ್ಯರಸ್ತೆಗಳನ್ನು ಅಗೆದು ಹಾಗೆ ಬಿಟ್ಟಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ

ಇದರಿಂದಾಗಿ ವೃದ್ಧರು, ಕುರಿ ಮೇಕೆ, ದನಕರುಗಳನ್ನು, ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಅನಾನುಕೂಲವಾಗಿದ್ದು, ಅಧಿಕಾರಿಗಳು ಕೂಡಲೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಸೂಚನೆ ನೀಡಬೇಕು. ಈ ಕುರಿತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಿಗೆ ವಿವರಿಸಿ ಪೈಪ್ ಹಾಕಲು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ದೂರಿದ್ದಾರೆ.

ಇದರಿಂದ ಮನೆಗಳ ಮುಂದೆ ಪೈಪ್ ಅಳವಡಿಕೆಗೆ ತೆಗೆದಿರುವ ಕಾಲುವೆ ಗುಂಡಿಯನ್ನು ತಾವೇ ಮಣ್ಣಿನಿಂದ ಮುಚ್ಚಿ ಹಾಕಿದ್ದೆವೆ ಎನ್ನುತ್ತಾರೆ ಗ್ರಾಮದ ಮಹಿಳೆಯರು. ಗುತ್ತಿಗೆದಾರರ ನಿರ್ಲಕ್ಷ್ಯವೋ, ಅಧಿಕಾರಿಗಳ ಬೇಜವಾಬ್ದಾರಿಯಿಂದಲೋ ಮನೆಗಳ ಮುಂದೆ ಇರುವ ಕಾಲುವೆಯನ್ನು ಮುಚ್ಚಿದ್ದು ಈಗಲೂ ಮೊಣಕಾಲುದ್ಧ ಗುಂಡಿಗಳು ಬಿದ್ದಿವೆ ಇದರಿಂದ ನಳಗಳ ನೀರು ಮನೆಯವರು ಉಪಯೋಗಿಸುವ ನೀರು ಗುಂಡಿಗಳಲ್ಲಿ ನಿಂತು ಅದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,

ಗ್ರಾಮಕ್ಕೆ ಭೇಟಿ ನೀಡಿ

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಾಶ್ಚೇರುವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಭೇಟಿ ಕೊಟ್ಟು ಜಲಜೀವನ್ ಮೀಷನ್ ಅರೆಬರೆ ಕಾಮಗಾರಿಯಿಂದ ಜನತೆಗೆ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂಬುದು ಸ್ಥಳೀಯರ ಮನವಿಯಾಗಿದೆ.ಕೋಟ್....

ರಾಶ್ಚೇರುವು ಗ್ರಾಪಂ ವ್ಯಾಪ್ತಿಯಲ್ಲಿ ಜಲಜೀವನ್ ಮೀಷನ್ ಕಾಮಗಾರಿ ನಡೆಯುತ್ತಿರುವುದನ್ನು ತಮ್ಮ ಗಮಕ್ಕೆ ತಂದಿಲ್ಲ. ಈ ಕುರಿತು ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ.- ರೆವತಾ ಶ್ರೀನಿವಾಸ್. ರಾಶ್ಚೇರುವು ಗ್ರಾಂ.ಪ.ಅದ್ಯಕ್ಷ್ಯ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ