ಕನ್ನಡಪ್ರಭ ವಾರ್ತೆ ಹಿರಿಯೂರು
ಪಟ್ಟಣದ ವೇದಾವತಿ ನಗರದ ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ ಹಾಗೂ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ
ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಜಾಗತೀಕರಣ ಆಧುನಿಕರಣ ನಗರೀಕರಣದಿಂದ ದೇಶಿಯ ಕಲೆಗೆ ಪೆಟ್ಟು ಬಿದ್ದಿದ್ದು ರಂಗಭೂಮಿ ಮಾತ್ರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ನಾಟಕಗಳನ್ನು ಅಭಿನಯಿಸುತ್ತಿರುವುದರಿಂದ ತನ್ನ ಜೀವಂತಿಕೆಯನ್ನು ಉಳಿಸಿಕೊಂಡಿದೆ. ಕಲಾವಿದರು ತಮ್ಮಲ್ಲಿ ನೋವು ಸಂಕಟ ವೇದನೆ ದುಃಖ ಇದ್ದರೂ ಸಹ ಪಾತ್ರಗಳಿಗೆ ಜೀವತುಂಬಿ ಅಭಿನಯಿಸುವ ಮೂಲಕ ನಾಡಿನ ರಂಗಭೂಮಿ ಕಲೆಯನ್ನು ಶ್ರೀಮಂತಿಕೆಗೊಳಿಸಿದ್ದಾರೆ ಎಂದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ರಂಗಭೂಮಿ ಎಂಬುದು ವಿಶಿಷ್ಟ ಸಂಸ್ಕೃತಿಯ ಪ್ರತೀಕ. ಕಲಾವಿದರು ತನ್ನಲ್ಲಿ ಎಷ್ಟೇ ನೋವಿರಲಿ, ಸಂಕಟವಿರಲಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿ ನಾಡಿನ ರಂಗ ಕಲೆಯ ಉಳಿವಿಗೆ ಶ್ರಮಿಸಿದ್ದಾರೆ.
ನಿವೃತ್ತ ಪ್ರಾಂಶುಪಾಲ ಕಾಮಣ್ಣ ಮಾತನಾಡಿ, ರಂಗಭೂಮಿಗೆ ಡಾ.ರಾಜಕುಮಾರ್, ಕಲ್ಪನಾ, ನರಸಿಂಹರಾಜ್, ಬಾಲಕೃಷ್ಣ, ಗುಬ್ಬಿ ವೀರಣ್ಣ, ಚಿಂದೋಡಿ ಲೀಲಾ, ಬಿ.ಜಯಶ್ರೀ, ಮಂಡ್ಯ ರಮೇಶ್ ರಂತಹ ಹಲವಾರು ಕಲಾವಿದರು ಕೊಡುಗೆ ನೀಡಿದ್ದಾರೆ. ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕು ಕಲಾವಿದರ ಬೀಡಾಗಿದ್ದು ಬಹಳಷ್ಟು ನಾಟಕಗಳನ್ನು ಅಭಿನಯಿಸಿ ರಂಗ ಕಲೆಯನ್ನ ಜೀವಂತಗೊಳಿಸಿದ್ದಾರೆ ಎಂದರು.
ರಂಗಭೂಮಿ ಕಲಾವಿದರಾದ ಎನ್.ಚಿತ್ರಚಿತ್ ಯಾದವ್, ಕಳವಿಭಾಗಿ ಆರ್.ರಂಗನಾಥ್, ಪಿ.ತಿಮ್ಮಯ್ಯ ಬ್ಯಾಡರಹಳ್ಳಿ, ಸಿ.ಪರಮೇಶ್ವರಪ್ಪ ಮಸ್ಕಲ್, ಡಿ.ನಟರಾಜು ಮದ್ದನಕುಂಟೆ, ಟಿ.ಪಾಂಡುರಂಗಪ್ಪ, ಹರಿಯಬ್ಬೆ ಆನಂದಪ್ಪ, ರಾಜಪ್ಪ ಮಸ್ಕಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ.ನಿಜಲಿಂಗಪ್ಪ, ಕಾರ್ಯದರ್ಶಿ ಬಿ.ಟಿ.ಶಂಕರ್ ಲಿಂಗಯ್ಯ, ಹಾರ್ಮೋನಿಯಂ ವಾದಕ ಎಸ್. ಶಿವಲಿಂಗಪ್ಪ, ತಬಲ ವಾದಕರಾದ ವೈ .ಶಿವಲಿಂಗಪ್ಪ, ಸಿ .ಶ್ರೀನಿವಾಸ್, ಬಿ.ಟಿ ಕುಮಾರಪ್ಪ,ಎಸ್. ರುದ್ರಯ್ಯ, ಡಿ.ದಾಸಪ್ಪ, ಪುಟ್ಟೀರಜ್ಜ,ಲಕ್ಷ್ಮಿಕಾಂತ್ ಮುಂತಾದವರು ಉಪಸ್ಥಿತರಿದ್ದರು.