ಕಳ್ಳತನದ ಯತ್ನ ವಿಫಲ: ಸ್ಥಳದಲ್ಲಿಯೇ ಬೈಕ್ ಬಿಟ್ಟು ಪರಾರಿಯಾದ ಕದೀಮ

KannadaprabhaNewsNetwork |  
Published : Dec 15, 2023, 01:30 AM IST
ಕೆ ಕೆ ಪಿ ಸುದ್ದಿ 03 | Kannada Prabha

ಸಾರಾಂಶ

ನಕಪುರ:ಕಳ್ಳತನ ಮಾಡಲು ನಡೆಸಿದ ಯತ್ನ ವಿಫಲವಾಗಿ ಕದೀಮ ಸ್ಥಳದಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ನಡೆದಿದೆ.ವಿವೇಕಾನಂದ ನಗರದ ನಾಲ್ಕನೇ ರಸ್ತೆಯ ನಿವಾಸಿ ಕಲೀಲ್ ಎಂಬುವರ ಮನೆಯಲ್ಲಿ ಬುಧವಾರ ಕಳ್ಳತನದ ವಿಫಲ ಯತ್ನ ನಡೆದಿದೆ, ರಾತ್ರಿ ಸುಮಾರು12 ರ ಸಮಯದಲ್ಲಿ ಕದೀಮನು, ಕಲೀಲ್ ಅವರ ಮನೆಯ ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನುನಿಲ್ಲಿಸಿ ಮೊದಲನೇ ಮಹಡಿ ಮೇಲಿರುವ ಕಲೀಲ್ ಅವರ ಮನೆಗೆ ಕಳ್ಳತನ ಮಾಡುವ ಯತ್ನದಲ್ಲಿದ್ದ, ಅದೇ ಸಮಯಕ್ಕೆ ಕಲೀಲ್ ಅವರ ತಾಯಿ ಹೊರಗಡೆ ಬಂದಾಗ ಕಳ್ಳತನ ಮಾಡಲು ಬಂದಿದ್ದ ಖದೀಮ ಮೊದಲನೇ ಮಹಡಿ ಯಿಂದ ರಸ್ತೆಗೆ ಜಿಗಿದು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಕನಕಪುರ:ಕಳ್ಳತನ ಮಾಡಲು ನಡೆಸಿದ ಯತ್ನ ವಿಫಲವಾಗಿ ಕದೀಮ ಸ್ಥಳದಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ನಡೆದಿದೆ.

ವಿವೇಕಾನಂದ ನಗರದ ನಾಲ್ಕನೇ ರಸ್ತೆಯ ನಿವಾಸಿ ಕಲೀಲ್ ಎಂಬುವರ ಮನೆಯಲ್ಲಿ ಬುಧವಾರ ಕಳ್ಳತನದ ವಿಫಲ ಯತ್ನ ನಡೆದಿದೆ, ರಾತ್ರಿ ಸುಮಾರು12 ರ ಸಮಯದಲ್ಲಿ ಕದೀಮನು, ಕಲೀಲ್ ಅವರ ಮನೆಯ ಮುಂಭಾಗದಲ್ಲಿ ದ್ವಿಚಕ್ರ ವಾಹನವನ್ನುನಿಲ್ಲಿಸಿ ಮೊದಲನೇ ಮಹಡಿ ಮೇಲಿರುವ ಕಲೀಲ್ ಅವರ ಮನೆಗೆ ಕಳ್ಳತನ ಮಾಡುವ ಯತ್ನದಲ್ಲಿದ್ದ, ಅದೇ ಸಮಯಕ್ಕೆ ಕಲೀಲ್ ಅವರ ತಾಯಿ ಹೊರಗಡೆ ಬಂದಾಗ ಕಳ್ಳತನ ಮಾಡಲು ಬಂದಿದ್ದ ಖದೀಮ ಮೊದಲನೇ ಮಹಡಿ ಯಿಂದ ರಸ್ತೆಗೆ ಜಿಗಿದು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಕಳೆದ 8 ತಿಂಗಳ ಹಿಂದೆ ಇದೇ ಮನೆಯಲ್ಲಿ ಯಾರೂ ಇಲ್ಲದಿರುವಾಗ ಕಳ್ಳತನ ನಡೆದಿತ್ತು, ಕಲೀಲ್ ಅವರು ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಆದರೆ ಪೊಲೀಸರು ಕಳ್ಳತನ ಮಾಡಿದ ಕದೀಮನನ್ನು ಪತ್ತೆ ಹಚ್ಚಿರಲಿಲ್ಲ. ಈಗ ಮತ್ತೆ ಅದೇ ಮನೆಯಲ್ಲಿ ಕಳ್ಳತನ ಯತ್ನ ನಡೆದಿದ್ದು, 8 ತಿಂಗಳ ಹಿಂದೆ ಕಳ್ಳತನ ಮಾಡಿದ್ದ ಕದೀಮನೆ ಈಗಲೂ ಕಳ್ಳತನದ ಯತ್ನನಡೆಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬುಧವಾರ ರಾತ್ರಿ ಕಳ್ಳತನ ಮಾಡಲು ಬಂದಿದ್ದ ಕದೀಮ ಮೊದಲನೇ ಮಹಡಿಯಿಂದ ಕೆಳಗೆ ಜಿಗಿದು ದ್ವಿಚಕ್ರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದು, ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದರೂ ಸಹ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಲೀಲ್ ತಿಳಿಸಿದ್ದಾರೆ.

---

ಬುಧವಾರ ರಾತ್ರಿ ಕಳ್ಳತನದ ವಿಫಲ ಯತ್ನ ನಡೆದಿರುವ ವಿವೇಕಾನಂದ ನಗರದ ನಾಲ್ಕನೇ ರಸ್ತೆಯಲ್ಲಿರುವ ಕಲೀಲ್ ಅವರ ಮನೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ