ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕೆಟಿಜೆ ನಗರದಲ್ಲಿ ಹಿಂದು ಜಾಗರಣಾ ವೇದಿಕೆ ಪ್ರಾಂತ್ಯ ಸಂಚಾಲಕ ಸತೀಶ ಪೂಜಾರಿ ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದ ಹಿನ್ನೆಲೆ ಸೋಮವಾರ ರಾತ್ರಿ ಪೂಜಾರಿ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಭಯೋತ್ಪಾದಕರ ಸರ್ಕಾರವಿದ್ದು, ಇನ್ನೂ ಎಷ್ಟು ದಿನ ಈ ಸರ್ಕಾರ ಇರುತ್ತದೆ. ನಾವ್ಯಾರೂ ಕೇಸ್ ಹಿಂಪಡೆಯುವಂತೆ ಅರ್ಜಿಯನ್ನೇನು ಹಾಕಿಲ್ಲ. ನಮ್ಮ ರಕ್ತದ ಕಣಕಣದಲ್ಲೂ ಹಿಂದುತ್ವ ಹರಿಯುತ್ತಿದೆ. ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಬಹುದೇ ಹೊರತು, ನಮ್ಮ ಹೃದಯದಲ್ಲಿರುವ ಹಿಂದುತ್ವವನ್ನು ಬಂಧಿಸಲಾಗದು. ಸತೀಶ ಪೂಜಾರಿ ಬಂಧನದಲ್ಲಿದ್ದಾಗ ಪೂಜಾರಿ ಕುಟುಂಬಕ್ಕೆ ಅನಗತ್ಯವಾಗಿ ತೊಂದರೆ ಕೊಡಲು ಮುಂದಾಗಿದ್ದರು. ಆಗ ನಾವು ಸತೀಶ ಪೂಜಾರಿ ಕುಟುಂಬ ಪರ ನಿಂತೆವು. ಇಂದು, ನಾಳೆ, ಮುಂತೆಯೂ ನಾವು ಇದ್ದೇ ಇರುತ್ತೇವೆ ಎಂದು ತಿಳಿಸಿದರು.ಹಿಂದುತ್ವವೇ ನಮ್ಮ ಜೀವನವೂ ಆಗಿದೆ. ಹಿಂದುಗಳಿಗೆ ಅಪಮಾನ, ಅಗೌರವ ತೋರಿಸುವಂತಹವರ ವಿರುದ್ಧ ನಾವು ಇರುತ್ತೇವೆ. ಸತೀಶ ಪೂಜಾರಿ ಇತರರನ್ನು ಕೇಸ್ ಹಾಕಿ, ಬಂಧಿಸಿ ಜೈಲಿಗೆ ಹಾಕುತ್ತೀರಲ್ಲ ನಿಮಗೆ ತಾಕತ್ತಿದ್ದರೆ ಎಷ್ಟು ಜನರನ್ನು ಜೈಲಿಗೆ ಹಾಕುತ್ತೀರಿ? ಎಷ್ಟು ಹಿಂದುಗಳನ್ನು ಬಂಧಿಸುತ್ತೀರಿ? ತಾಕತ್ತಿದೆಯಾ ಎಲ್ಲಾ ಹಿಂದುಗಳನ್ನು ಬಂಧಿಸಲು? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.