ನಕಲಿ ಚಿನ್ನ ಮಾರಿ,ಅಸಲಿ ಚಿನ್ನ ಪಡೆದುಯಾಮಾರಿಸಿದರು!

KannadaprabhaNewsNetwork |  
Published : Jul 27, 2026, 01:45 AM IST
26ಕೆಡಿವಿಜಿ5, 6-ದಾವಣಗೆರೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಂಕಲ್ಪ-2 ಯೋಜನೆ ಕುರಿತಂತೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  | Kannada Prabha

ಸಾರಾಂಶ

ಹೊಳೆಹೊನ್ನೂರು: ಸಮೀಪದ ಆನವೇರಿ ಗ್ರಾಮದ ಬಂಗಾರದ ಅಂಗಡಿ ಮಾಲೀಕನ ಪತ್ನಿಗೆ ಕಡಿಮೆ ಬೆಲೆಗೆ ಹಳೆಯ ಬಂಗಾರ ಮಾರುವುದಾಗಿ ನಂಬಿಸಿದ ಅಪರಿಚಿತ ಮಹಿಳೆಯರು 35 ಗ್ರಾಂನಷ್ಟು ನಕಲಿ ಬಂಗಾರ ನೀಡಿ 1.60 ಲಕ್ಷ ರು. ಮೌಲ್ಯದ 11 ಗ್ರಾಂ ಅಸಲಿ ಚಿನ್ನಾಭರಣ ಪಡೆದು ಯಾಮಾರಿಸಿದ್ದಾರೆ.

ಹೊಳೆಹೊನ್ನೂರು: ಸಮೀಪದ ಆನವೇರಿ ಗ್ರಾಮದ ಬಂಗಾರದ ಅಂಗಡಿ ಮಾಲೀಕನ ಪತ್ನಿಗೆ ಕಡಿಮೆ ಬೆಲೆಗೆ ಹಳೆಯ ಬಂಗಾರ ಮಾರುವುದಾಗಿ ನಂಬಿಸಿದ ಅಪರಿಚಿತ ಮಹಿಳೆಯರು 35 ಗ್ರಾಂನಷ್ಟು ನಕಲಿ ಬಂಗಾರ ನೀಡಿ 1.60 ಲಕ್ಷ ರು. ಮೌಲ್ಯದ 11 ಗ್ರಾಂ ಅಸಲಿ ಚಿನ್ನಾಭರಣ ಪಡೆದು ಯಾಮಾರಿಸಿದ್ದಾರೆ. ಆನವೇರಿಯ ಪ್ರಕಾಶ್ ಜ್ಯುವೆಲ್ಲರ್ಸ್ ಮಾಲೀಕ ರಾಘವೇಂದ್ರ ಎಂ. ಶೆಟ್ಟ್ ಪತ್ನಿ ಶೋಭಾ ಒಬ್ಬರೆ ಅಂಗಡಿಯಲ್ಲಿದ್ದಾಗ ಅಂಗಡಿಗೆ ಬಂದ ಮಹಿಳೆಯೊಬ್ಬಳು ತನ್ನ ಬಳಿ ಇದ್ದ ಹಳೆಯ ಚಿನ್ನದ ಬಳೆಯನ್ನು ನೀಡಿ, ಅದರ ಬದಲಿಗೆ ಕಿವಿಯೋಲೆ ಹಾಗೂ ಇತರ ಚಿನ್ನಾಭರಣಗಳನ್ನು ಪಡೆದು ಹೋಗಿದ್ದಾಳೆ. ಬಳಿಕ ಇನ್ನಿಬ್ಬರು ಮಹಿಳೆಯರನ್ನು ತನ್ನೊಟ್ಟಿಗೆ ಕರೆತಂದ ಮಹಿಳೆ ಇವರ ಬಳಿಯು ಚಿನ್ನದ ಗುಂಡುಗಳಿವೆ ಎಂದು ನಕಲಿ ಚಿನ್ನದ ಗುಂಡುಗಳನ್ನು ನೀಡಿ, ಎರಡು ಬಂಗಾರದ ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸಂಜೆ ವೇಳೆಗೆ ಅಂಗಡಿಗೆ ಬಂದ ಮಾಲೀಕ ರಾಘವೇಂದ್ರ ಬಂಗಾರದ ಗುಂಡುಗಳನ್ನು ಪುಡಿ ಮಾಡಿ ಪರಿಶೀಲಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ.3ರಂದು ಸಂಕಲ್ಪ-2 ಸ್ಪರ್ಧಾತ್ಮಕ ತರಬೇತಿಗೆ ಪ್ರವೇಶ ಪರೀಕ್ಷೆ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೋರಾಟದಲ್ಲಿ ಕೈ ಪ್ರಮುಖ ಪಾತ್ರ - ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹೇಳಿಕೆ