ದೇವಾಲಯದಲ್ಲಿನ ಬೆಳ್ಳಿ ಆಭರಣ ದೋಚಿದ ಕಳ್ಳರು

KannadaprabhaNewsNetwork |  
Published : Jan 06, 2025, 01:03 AM IST
ಮಠದಲ್ಲಿ ತಪಾಸಣೆ ನಡೆಸಿದ ಸ್ವಾನದಳ | Kannada Prabha

ಸಾರಾಂಶ

ಬೈಲಹೊಂಗಲ ಸಮೀಪದ ತಿಗಡಿ ಗ್ರಾಮದ ಹಿರೇಮಠದ ಶಿವಬಸಪ್ಪ ಅಜ್ಜನವರ ಮಠ (ಗದ್ದಗಿ ಅಜ್ಜ ಮಠ)ದ ಬಾಗಿಲದ ಕೊಂಡಿ ಮುರಿದು ಅಂದಾಜು ₹16 ಲಕ್ಷ ಮೌಲ್ಯದ 30 ಕೆಜಿಯ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಸಮೀಪದ ತಿಗಡಿ ಗ್ರಾಮದ ಹಿರೇಮಠದ ಶಿವಬಸಪ್ಪ ಅಜ್ಜನವರ ಮಠ (ಗದ್ದಗಿ ಅಜ್ಜ ಮಠ)ದ ಬಾಗಿಲದ ಕೊಂಡಿ ಮುರಿದು ಅಂದಾಜು ₹16 ಲಕ್ಷ ಮೌಲ್ಯದ 30 ಕೆಜಿಯ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ದೇವಾಲಯದಲ್ಲಿನ ಬೆಳ್ಳಿಯ ಮೂರ್ತಿ, ನಂದಿ ಚಿತ್ರ, ಪಾದುಕೆ, ಗುಂಡಗಡಗಿ ಸೇರಿದಂತೆ ಬೆಳ್ಳಿಯ ಆಭರಣ ಕದ್ದು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಬೆರಳುಚ್ಚು ತಜ್ಞರ ತಂಡ, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದವು.ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ