ಕನ್ನಡಪ್ರಭ ವಾರ್ತೆ ಹನೂರು
ರೈಲ್ವೆ ಮತ್ತು ಬಸ್ ನಿಲ್ದಾಣಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಹಾಗೂ ಕೆಲಸಕ್ಕಾಗಿ ಅಲೆದಾಡುತ್ತಿದ್ದ 32 ಜನರನ್ನು ರಕ್ಷಿಸಲಾಗಿದೆ. ತಮಿಳುನಾಡು ಮೂಲದ ಷಣ್ಮುಖ ಎಂಬಾತ ತಮಿಳುನಾಡು, ಆಂಧ್ರಪ್ರದೇಶದ ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಸುತ್ತಾಡಿ ನಿಮಗೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಕರೆತಂದು, ಗಂಗನದೊಡ್ಡಿಯ ನಿರ್ಜನ ಪ್ರದೇಶದಲ್ಲಿ ಅಕ್ರಮವಾಗಿ ಬಂಧಿಸಿ ಬೆದರಿಸಿ ಕೂಲಿ ಕೆಲಸ ಮಾಡಿಸುತ್ತಿದ್ದರು ಎಂದು ಕೂಲಿ ಕಾರ್ಮಿಕರು ಆರೋಪಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸರು ಮತ್ತು ರೈತ ಸಂಘದ ಮುಖಂಡರು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಿದ್ದಾರೆ. ರಕ್ಷಿಸಲ್ಪಟ್ಟವರು ತಮಿಳುನಾಡಿನ ವಿಲ್ಲುಪುರಂನ ರಾಮಲಿಂಗಂ, ಚಿದಂಬರಂನ ವಿಜಯ್, ದಿಂಡಿಗಲ್ನ ಮೀನಾ, ಚೆಂಗಲ್ಪಟ್ಟುವಿನ ಕನ್ನಿಯಮ್ಮ, ವೃದ್ಧಾಚಲಂನ ಸೆಲ್ವಿ, ಪೆರಂಬಲೂರಿನ ಪೆರಿಯಸಾಮಿ, ಕಳ್ಳಕುರಿಚಿಯ ಪಳನಿ, ಶ್ರೀರಂಗಂನ ಬಾಬು, ತೇಣಿಯ ಕಾರ್ತಿಕ್, ಕಳ್ಳಕುರಿಚಿಯ ಕುಮಾರ್, ತಿರುಚ್ಚಿಯ ರಾಜಕುಮಾರ್, ತೆಂಕಾಶಿಯ ಆರುಮುಗಂ, ದಿಂಡಿಗಲ್ನ ಮಾರಿಮುತ್ತು, ವೆಲ್ಲೂರಿನ ಮಂಜುನಾಥ್, ತಿರುವಣ್ಣಾಮಲೈನ ಜಾನ್, ಚಿರಾಳದ ಮೋಹನರಾಜು, ಕಳ್ಳಕುರಿಚಿಯ ಮುರುಗನ್, ತಂಜಾವೂರಿನ ಪ್ರತೀಶ್ ಕುಮಾರ್, ತಿರುಚಿಯ ಮಹಾಲಕ್ಷ್ಮಿ, ಪಾಂಡಿಚೇರಿಯ ರಾಜು, ಅರುಣಾಗಿರಿಯ ರಾಮಮೂರ್ತಿ, ನಾಮಕಲ್ಲುವಿನ ಕಾಮರಾಜು, ತಿರುವಣ್ಣಾಮಲೈನ ಮುರುಗನ್, ಸಿರ್ಕಾಳಿಯ ತಿರುಮುರುಗನ್ ಮತ್ತು ಬಿಹಾರದ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ.ಕೂಲಿಯೂ ಇಲ್ಲ, ವಸತಿಯೂ ಇಲ್ಲ, ಪ್ರಾಣಿಗಳಂತೆ ಹಿಂಸೆ:
6 ಮಂದಿ ವಿರುದ್ಧ ಎಫ್ಐಆರ್:
ಈ ಪ್ರಕರಣದ ಪ್ರಮುಖ ಆರೋಪಿ ಷಣ್ಮುಗಂ ಆಗಿದ್ದು, ಆತನ ಸಹಚರರಾದ ರೂಬಿ (39), ರಂಜಿತಾ (29), ಸರವಣನ್ (37), ಕಾರ್ತಿಕ್ (35), ಅಪರಿಚಿತನ ವಿರುದ್ಧ ಪ್ರಕರಣ ದಾಖಲಾಗಿದೆ.
ಕಬ್ಬು ಕಟಾವು ಮಾಡುವ ಸಲುವಾಗಿ ತಮಿಳುನಾಡಿನ 30 ಜನ, ಆಂಧ್ರಪ್ರದೇಶದ ಒಬ್ಬರು ಮತ್ತು ಬಿಹಾರ ರಾಜ್ಯದ ಒಬ್ಬರು ಸೇರಿ ಒಟ್ಟು 32 ಜನರನ್ನು ಷಣ್ಮುಗಂ ತಮಿಳುನಾಡಿನ ವಿವಿಧ ಗ್ರಾಮಗಳಿಂದ ಕರೆತಂದು ಕೂಲಿ ಕೆಲಸಕ್ಕೆ ನಿಯೋಜಿಸಿದ್ದನು.
ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಈ ರೀತಿ ದುಡಿಸಿಕೊಳ್ಳುವುದು ಅಪರಾಧವಾಗಿದ್ದು ಈ ಬಗ್ಗೆ ತಾಲೂಕು ಆಡಳಿತ ಜಾಗೃತಿ ಮೂಡಿಸಲಿದೆ ಎಂದು ಹನೂರು ತಹಸೀಲ್ದಾರ್ ಚೈತ್ರಾ ಮಾಹಿತಿ ನೀಡಿದ್ದಾರೆ.