ಧಾರ್ಮಿಕ ದತ್ತಿ ಇಲಾಖೆಯ ಅರ್ಜಿಗೆ ಪಟ್ಟದ ಚಿನ್ಮಯ ಶ್ರೀಗಳು ಆಕ್ಷೇಪ
ಬಿ.ರಾಮಪ್ರಸಾದ್ ಗಾಂಧಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿತಾಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ಪಂಚಗಣಾಧೀಶರಲ್ಲಿ ಒಬ್ಬರಾದ ಮದ್ದಾನೇಶ್ವರರ ಪುತ್ರ, ಪವಾಡ ಪುರುಷ ಗೋಣಿಬಸವೇಶ್ವರ ದೇವಸ್ಥಾನವಿದ್ದು, ಈಚೆಗಂತು ಇಲ್ಲಿಗೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.
ಪ್ರತಿ ಅಮಾವಾಸ್ಯೆಗೆ ಗೋಣಿಬಸವೇಶ್ವರ ದೇವರ ದರ್ಶನಕ್ಕೆ ಸುಮಾರು 8ರಿಂದ 10 ಸಾವಿರ ಭಕ್ತರು ಆಗಮಿಸುತ್ತಾರೆ. ದಾಸೋಹ ಸ್ವೀಕರಿಸುವಾಗ ನೆಮ್ಮದಿಯಿಂದ ಕುಳಿತು ಊಟ ಮಾಡಲೆಂದು ಧಾರ್ಮಿಕ ದತ್ತಿ ಇಲಾಖೆಯವರು ದಾಸೋಹ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ಸದ್ಯ ತಾತ್ಕಾಲಿಕವಾಗಿ ಶೆಡ್ ಹಾಕಿ ಇಕ್ಕಟ್ಟಿನ ಜಾಗದಲ್ಲಿ ಅನ್ನ, ಸಾಂಬರು ಬಡಿಸಲಾಗುತ್ತಿದೆ. ಭಕ್ತರು ಸರತಿ ಸಾಲು ಆದರೂ ನೂಕು ನುಗ್ಗಲಿನಿಂದ ತಟ್ಟೆಯಲ್ಲಿ ಹಾಕಿಸಿಕೊಂಡು ಎಲ್ಲೆಂದರೆಲ್ಲಿ ಕುಳಿತು ಪ್ರಸಾದ ಸೇವಿಸುತ್ತಾರೆ.
ಅರ್ಜಿ ಸಲ್ಲಿಸಿ 3-4 ತಿಂಗಳು ಕಳೆದರೂ ಗ್ರಾಪಂಯವರು ಈ ಸ್ವತ್ತು ಕೊಟ್ಟಿಲ್ಲ, ಕಾರಣ ಈ ದೇವಸ್ಥಾನದ ಪಟ್ಟದ ಚಿನ್ಮಯ ಸ್ವಾಮೀಜಿಯವರು ಈ ಸ್ವತ್ತು ನೀಡಲು ಆಕ್ಷೇಪ ವ್ಯಕ್ತಪಡಿಸಿ ಗ್ರಾಪಂಗೆ ಪತ್ರ ನೀಡಿದ್ದಾರೆ.
ದಾಸೋಹ ಭವನ ಕಟ್ಟಿದರೆ ಭಕ್ತರಿಗೆ ನೆಮ್ಮದಿಯಿಂದ ನೆರಳಲ್ಲಿ ಕುಳಿತು ಪ್ರಸಾದ ಸೇವನೆಗೆ ಅನುಕೂಲವಾಗುತ್ತದೆ ಎಂಬುದು ಧಾರ್ಮಿಕ ದತ್ತಿ ಇಲಾಖೆಯವರ ಉದ್ದೇಶವಾಗಿದೆ.
ಈ ವಿಚಾರ ಶಾಸಕಿ ಎಂ.ಪಿ. ಲತಾ ರವರ ಗಮನಕ್ಕೂ ಬಂದಿದೆ, ಒಟ್ಟಿನಲ್ಲಿ ಹಣವಿದ್ದರೂ ದಾಸೋಹ ಭವನ ನಿರ್ಮಾಣಕ್ಕೆ ವಿಘ್ನ ಎದುರಾಗಿದೆ, ಶಾಸಕರು, ಗ್ರಾಪಂಯವರು, ಧಾರ್ಮಿಕ ದತ್ತಿ ಇಲಾಖೆಯವರು, ಪಟ್ಟದ ಚಿನ್ಮಯ ಸ್ವಾಮೀಜಿ , ಗ್ರಾಮದ ಹಿರಿಯರು ಸಮಾಲೋಚಿಸಿ ಚರ್ಚಿಸಿ ಸುಸಜ್ಜಿತವಾದ ದಾಸೋಹ ಭವನ ಕಟ್ಟಿದರೆ ಬರುವ ಭಕ್ತರಿಗೆ ಅನುಕೂಲವಾಗುವುದಂತು ಸತ್ಯ.