ಕಂಬಳ ಫೆಡರೇಶನ್ ಆಫ್ ಇಂಡಿಯಾ ಎಂಬ ಸಂಸ್ಥೆ ಅಸ್ತಿತ್ವಕ್ಕೆ
ಕಂಬಳದ ಅನುದಾನದ ಸಂಹಿತೆಗೆ ಕಾನೂನು ರೂಪಿಸಲು ಪ್ರಾಧಿಕಾರವು ವಿಶೇಷವಾಗಿ ಬೈಲಾ ರಚಿಸಿ ಸರ್ಕಾರ ಮಾನ್ಯತೆ ನೀಡಿ ಕಂಬಳವನ್ನು ಗುರುತಿಸಿದೆ. ರಾಜ್ಯ ಸರ್ಕಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಾನ್ಯ ಮುಖ್ಯಮಂತ್ರಿಗಳ ಆದೇಶದಂತೆ ಪ್ರಾಧಿಕಾರದಲ್ಲಿ ಮಾನ್ಯತೆ ಪುರಸ್ಕರಿಸಿರುವುದು ಎಲ್ಲಾ ಕಂಬಳ ಅಭಿಮಾನಿಗಳಿಗೆ ಸಂತೋಷವನ್ನು ತಂದಿರುತ್ತದೆ ಎಂದರು.
ಮೂಡುಬಿದಿರೆ ತಾಲೂಕಿನ ಪಣಪಿಲ ಕಂಬಳ ನ.15, 22-ಕೊಡಂಗೆ, 29-ಕಕ್ಕೆಪದವು, ಡಿ.6-ಹೊಕ್ಕಾಡಿ, 7- ಬಳ್ಳಮಂಜ, 13-ಬಾರಾಡಿ, 20-ಮುಲ್ಕಿ, 27-ಮಂಗಳೂರು, ಜ.3-ಮಿಯ್ಯಾರು, 10-ನರಿಂಗಾಣ, 17-ಅಡ್ಡೆ, 24-ಮೂಡುಬಿದಿರೆ, 31-ಐಕಳ.ಫೆ.7-ಪುತ್ತೂರು, 14-ಜೆಪ್ಪು. 21-ವಾಮಂಜೂರು, 28-ಎರ್ಮಾಳು, ಮಾ.7 ಬಂಟ್ವಾಳ, 15-ಬಂಗಾಡಿ, 31-ವೇಣೂರು, 28-ಉಪ್ಪಿನಂಗಡಿ, ಏ.4 ಗುರುಪುರ, 11-ಬಳ್ಳುಂಜೆ, 18-ಹರೇಕಳ ಹಾಗೂ ಕೊನೆಯದಾಗಿ ಏ. 25ರಂದು ಬಡಗಬೆಟ್ಟು ಕಂಬಳ ನಡೆಯಲಿದೆ ಎಂದು ತಿಳಿಸಿದರು.ಜಿಲ್ಲಾ ಕಂಬಳ ಸಮಿತಿ ಉಪಾಧ್ಯಕ್ಷ ಶ್ರೀಕಾಂತ್ ಭಟ್, ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್, ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿಯ ಕೋಶಾಧಿಕಾರಿ ಚಂದ್ರಹಾಸ್ ಸಾಧು ಸನಿಲ್, ತೀರ್ಪುಗಾರರ ವಿಭಾಗದ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಪಿ.ಆರ್. ಶೆಟ್ಟಿ, ಶಾಂತರಾಮ್ ಶೆಟ್ಟಿ, ಜಿಲ್ಲಾ ಹಾಗೂ ಪದಾಧಿಕಾರಿಗಳು ಮತ್ತು ಎಲ್ಲಾ ಕಂಬಳದ ವ್ಯವಸ್ಥಾಪಕರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ನಿರೂಪಿಸಿದರು.