ಹುಲಿ ಉಗುರು: ಐವರ ಬಂಧನ

KannadaprabhaNewsNetwork |  
Published : Nov 12, 2023, 01:00 AM ISTUpdated : Nov 12, 2023, 01:01 AM IST
ಆರೋಪಿಗಳು  | Kannada Prabha

ಸಾರಾಂಶ

ಚಿರತೆ ಉಗುರು 7, ಉಡದ ಚರ್ಮ 1, ಕಿಂಗ್ ಫಿಶರ್ ಪಕ್ಷಿ ಕೊಕ್ಕು, 1 ನಾಡ ಬಂದೂಕು, 1 ಗಂಧದ ಉತ್ಪನ್ನ, 0.500 ಗ್ರಾಂ ಪಕ್ಷಿ ಬಲೆ ವಶ.

ಜೋಯಿಡಾ:

ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಐವರನ್ನು ಬಂಧಿಸಿದೆ. ಗುಂದ ವನ್ಯಜೀವಿ ವಲಯದ ಶಿವಪುರದಲ್ಲಿ ಅರಣ್ಯ ಇಲಾಖೆಯ ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ ನೇತೃತ್ವದಲ್ಲಿ ದಾಳಿ ನಡೆಸಿ ನಾರಾಯಣ ತಿಮ್ಮಣ್ಣ ಮಹಾಲೆ, ರಘುನಾಥ ಮಹಾಲೆ, ಸುಧಾಕರ ವಾಡ್ಡೋ ಮಹಾಲೆ, ಮಾರುತಿ ಕೃಷ್ಣಮೂರ್ತಿ ಲಕ್ಕೊಳ್ಳಿ ಶಶಾಂಕ, ನಾರಾಯಣ ಮಹಾಲೆ ಅವರನ್ನು ಬಂಧಿಸಿ ಇವರಿಂದ ಚಿರತೆ ಉಗುರು 7, ಉಡದ ಚರ್ಮ 1, ಕಿಂಗ್ ಫಿಶರ್ ಪಕ್ಷಿ ಕೊಕ್ಕು, 1 ನಾಡ ಬಂದೂಕು, 1 ಗಂಧದ ಉತ್ಪನ್ನ, 0.500 ಗ್ರಾಂ ಪಕ್ಷಿ ಬಲೆ, ಮದ್ದು ಹಾಗೂ ಹುಸಿ ಬಾಂಬ್ ಮತ್ತು ಕಡವೆ ಮಾಂಸ ವಶಪಡಿಸಿಕೊಳ್ಳಲಾಗಿದೆ. ಅಪರಾಧಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!