ಜನರ ಸಮಸ್ಯೆಗಳ ಕಾಲಾಮಿತಿಯಲ್ಲಿ ಪರಿಹಾರಕ್ಕೆ ಕ್ರಮ: ಜಿಪಂ ಸಿಇಒ ಡಾ.ಸುರೇಶ್ ಇಟ್ನಾಳ್

KannadaprabhaNewsNetwork |  
Published : Feb 16, 2024, 01:49 AM IST
15 ಜೆ.ಜಿ.ಎಲ್.1ಅ) ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಗುರುವಾರ ಜಿಪಂ, ತಾಪಂ ವತಿಯಿಂದ ಸಾರ್ವಜನಿಕರಿಂದ ದೂರು/ಮನವಿಗಳನ್ನು ಜಿಪಂ ಸಿಇಒ ಡಾ. ಸುರೇಶ್ ಬಿ. ಇಟ್ನಾಳ್ ಸ್ವೀಕರಿಸುತ್ತಿರುವುದು. | Kannada Prabha

ಸಾರಾಂಶ

ಸೊಕ್ಕೆ ಗ್ರಾಮದಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನು ಕೆಲವು ಸಮಸ್ಯೆಗಳಿಗೆ ಸ್ವಲ್ಪ ವಿಳಂಬವಾಗಬಹುದು. ಆದರೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳ ನಮ್ಮ ಮಿತಿಯೊಳಗೆ ಬಗೆಹರಿಸಲಾಗುವುದು. ಗ್ರಾಮದ ಕ್ಯಾಂಪ್ ಮತ್ತು ಚಿಕ್ಕಬಂಟನಹಳ್ಳಿಯಲ್ಲಿ ಸರ್ಕಾರಿ ಜಮೀನು ಇದ್ದು, ಆಶ್ರಯ ನಿವೇಶನ ಎಂದು ಕಂದಾಯ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಹಕ್ಕುಪತ್ರ ಮಾಡಿ ನಂತರ ಇ-ಸ್ವತ್ತು ವಿತರಿಸುವ ಕೆಲಸ ಆಗಬೇಕಿದೆ.

ಕನ್ನಡಪ್ರಭ ವಾರ್ತೆ ಜಗಳೂರು

ಸ್ವಾಮಿ, ನಮ್ಮ ಮನೆಗೆ ನೀರು ಬರುತ್ತಿಲ್ಲ ನಳ ಅಳವಡಿಸಿಕೊಡಿ, ಪಂಚಾಯಿತಿಯವರಿಗೆ ಹೇಳಿದರೂ ಮಾಡಿಲ್ಲ.. ಗ್ರಾಮದ ಚರಂಡಿಗಳಲ್ಲಿ ಕೊಳಚೆ ನೀರು ಕಟ್ಟಿ ಸೊಳ್ಳೆಗಳ ಕಾಟ ತಾಳಲಾಗುತ್ತಿಲ್ಲ, ಚಿಕ್ಕಬಂಟನಹಳ್ಳಿ ಮತ್ತು ಸೊಕ್ಕೆ ಗ್ರಾಮದಲ್ಲಿ ಸ್ಮಶನ ಒತ್ತುವರಿಯಾಗಿದೆ, ಗ್ರಾಮದ ಸುಮಾರು ೨ ಕಿಮೀ ಹಳ್ಳ ಕಬಳಿಕೆಯಾಗಿದೆ ಬಿಡಿಸಿಕೊಡಿ... ನಮ್ಮೂರಿಗೆ ಬಸ್ ಬಸ್ ವ್ಯವಸ್ಥೆ ಕಲ್ಪಿಸಿ ಹೀಗೆ ಹತ್ತು ಹಲವು ಸಮಸ್ಯೆಗಳ ಸಾರ್ವಜನಿಕರು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸುರೇಶ್ ಬಿ.ಇಟ್ನಾಳ್ ಗಮನಕ್ಕೆ ತಂದರು.

ಎರಡು ಬಾರಿ ''''ಗಾಂಧಿ ಗ್ರಾಮ'''' ಪುರಸ್ಕಾರಕ್ಕೆ ಆಯ್ಕೆಯಾದ ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಗುರುವಾರ ಜಿಪಂ, ತಾಪಂ ವತಿಯಿಂದ ಸಾರ್ವಜನಿಕರಿಂದ ದೂರು, ಮನವಿಗಳ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳ ಸಮಾಧಾನದಿಂದ ಆಲಿಸಿದ ಸಿಇಒ ಅಹವಾಲು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಇತ್ಯರ್ಥಪಡಿಸಿದರೆ, ಇನ್ನು ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸ್ವಲ್ಪ ಕಾಲಾವಕಾಶ ಅಗತ್ಯ, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಬಳಿಕ ಮಾತನಾಡಿದ ಸಿಇಒ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಪ್ರತಿ ಬುಧವಾರ ಜಿಲ್ಲೆಯ ತಾಲೂಕಿನ ಒಂದು ಗ್ರಾಪಂನಲ್ಲಿ ಸಾರ್ವಜನಿಕರಿಂದ ದೂರು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದ್ದಾರೆ ಹೀಗಾಗಿ ಸೊಕ್ಕೆ ಗ್ರಾಮದಲ್ಲಿ ದೂರು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೊಕ್ಕೆ ಗ್ರಾಮದಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಇನ್ನು ಕೆಲವು ಸಮಸ್ಯೆಗಳಿಗೆ ಸ್ವಲ್ಪ ವಿಳಂಬವಾಗಬಹುದು. ಆದರೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳ ನಮ್ಮ ಮಿತಿಯೊಳಗೆ ಬಗೆಹರಿಸಲಾಗುವುದು. ಗ್ರಾಮದ ಕ್ಯಾಂಪ್ ಮತ್ತು ಚಿಕ್ಕಬಂಟನಹಳ್ಳಿಯಲ್ಲಿ ಸರ್ಕಾರಿ ಜಮೀನು ಇದ್ದು, ಆಶ್ರಯ ನಿವೇಶನ ಎಂದು ಕಂದಾಯ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಹಕ್ಕುಪತ್ರ ಮಾಡಿ ನಂತರ ಇ-ಸ್ವತ್ತು ವಿತರಿಸುವ ಕೆಲಸ ಆಗಬೇಕಿದೆ ಎಂದರು.

ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಪ್ರಾಮಾಣಿಕವಾಗಿ ಆಗಬೇಕು. ಪ್ರಕರಣ ನ್ಯಾಯಾಲಯದಲ್ಲಿದ್ದರೆ ಗ್ರಾಮ ಸಭೆಯಲ್ಲಿ ನಡಾವಳಿ ಮಾಡಿ ಗುಡಿಸಲು ತೆರವುಗೊಳಿಸಲು ನೋಟಿಸ್ ನೀಡಿ. ಯಾರು ಫಲಾನುಭವಿಗಳಿದ್ದಾರೆ ಅಂತವರಿಗೆ ರಾಜೀವ್‌ ಗಾಂಧಿ ವಸತಿ ಯೋಜನೆಯಿಂದ ಅನುದಾನ ನೀಡಲು ಸಾಧ್ಯವಿದೆ. ಅದಕ್ಕೂ ಮೊದಲು ಗ್ರಾಮ ಸಭೆಯಲ್ಲಿ ಚರ್ಚಿಸಿ ಕೋರ್ಟ ಗಮನಕ್ಕೆ ತಂದು ತುರ್ತಾಗಿ ಕೆಲಸ ಮಾಡಿ ಎಂದು ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಕೆ.ಟಿ.ಕರಿಬಸಪ್ಪ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಸಾದಿಕ್‌ ಉದಲ್ಲಾ, ನರೇಗಾ ಎಡಿ ಚಂದ್ರಶೇಖರ್, ತೋಟಗಾರಿಕೆ ಸಹಾಯಕ ನಿರ್ದೇಶಕ ತೋಟಯ್ಯ, ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಗ್ರಾಪಂ ಅಧ್ಯಕ್ಷ ತಿರುಮಲಾ, ಉಪಾಧ್ಯಕ್ಷರಾದ ಚೌಡಮ್ಮ, ಪಿಡಿಒ ಶಿವಕುಮಾರ್, ಬಿಇಒ ಹಾಲಮುರ್ತಿ, ಡಿ.ಡಿ.ಹಾಲಪ್ಪ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.ಸ್ವಚ್ಛ ಸಂಕೀರ್ಣಕ್ಕೆ ಅನುದಾನ ಬರುವಂತೆ ಮಾಡುತ್ತೇನೆ. ಹಳ್ಳ ಒತ್ತುವರಿಗೆ ಸಂಬಂಧಿಸಿ ತೆರವು ಮಾಡಿಸಲು ಸೂಚನೆ ನೀಡಲಾಗಿದೆ. ಚಿಕ್ಕಬಂಟನಹಳ್ಳಿ, ಸೊಕ್ಕೆ ಗ್ರಾಮದಲ್ಲಿ ಸ್ಮಶಾನ ಒತ್ತುವರಿಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದೀರಿ. ಈ ಸಮಸ್ಯೆಯನ್ನು ಡಿಡಿಎಲ್ಆಲರ್ ಗಮನಕ್ಕೆ ತಂದು ಸರ್ವೇ ಮಾಡಿಸಲಾಗುವುದು

ಡಾ.ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪಂಚಾಯಿತಿ ಸಿಇಒ

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು