ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಪಿಯು ಅಕಾಡೆಮಿ ಆಫ್ ಎಕ್ಸ್ ಲೈನ್ಸ್ ಕಾಲೇಜು ವತಿಯಿಂದ ನಡೆದ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ವಿಚಾರಗಳು, ಒಳ್ಳೆಯ ವಿಷಯಗಳನ್ನು ಕೇಳಿ ಪಡೆದು ಅದನ್ನು ಹಿರಿಯರಿಗೂ ಹೇಳಿಕೊಡಬೇಕು. ಆಗ ಮಾತ್ರ ಸಮಾಜ ಉದ್ದಾರವಾಗುತ್ತದೆ ಎಂದರು.
ನಾಡು ಕಂಡ ಗಾಂಧಿವಾದಿ, ಕಾವೇರಿ ಹೋರಾಟಗಾರ ಜಿ.ಮಾದೇಗೌಡರ ಕಾಲೇಜಿನಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸುತ್ತಿರುವುದು ನನ್ನ ಪುಣ್ಯ. ಅವರ ಆದರ್ಶಗಳನ್ನು ಒಳ್ಳೆ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದಿರುವ ಹೆಣ್ಣು ಮಕ್ಕಳು ಸಂಶೋಧನೆಯಲ್ಲಿ ಮಾತ್ರ ಹಿಂದುಳಿದಿದ್ದಾರೆ. ಹೆಣ್ಣು ಮಕ್ಕಳು ಸಂಶೋಧನೆ ಕ್ಷೇತ್ರದಲ್ಲಿ ತೊಡಗಬೇಕು. ನೆನ್ನೆ ಇದ್ದ ಟೆಕ್ನಾಲಜಿ ಇವತ್ತಿಲ್ಲ. ಎಲ್ಲಾ ಟೆಕ್ನಾಲಜಿಗಳು ಕಾಲಕ್ಕೆ ತಕ್ಕ ಹಾಗೇ ಅಪ್ಡೇಟ್ ಆಗುತ್ತಿವೆ. ಇಂದು ನಾವೆಲ್ಲ ಮೊಬೈಲ್ ದಾಸರಾಗಿದ್ದಿವಿ ಎಂದು ಬೇಸರ ವ್ಯಕ್ತಪಡಿಸಿದರು.
ಕಾಲ ಪಂಚಾಗಕ್ಕಿಂತ ಸಂಬಂಧಗಳಿಗೆ ಬೆಲೆಕೊಡಬೇಕು. ದೈವ ದೆವ್ವವನ್ನು ಯಾರು ಇದುವರೆಗೂ ಯಾರು ನೋಡಿಲ್ಲ. ಆದರೂ ಈ ಯುಗದಲ್ಲೂ ಎಲ್ಲವನ್ನು ನಂಬಿ ಮೌಢ್ಯಗಳ ದಾಶರಾಗುತ್ತಿದ್ದಾರೆ. ವಿಜ್ಞಾನ ಸಾಕಷ್ಟು ಮುಂದುವರಿದರೂ ಜನರು ಮೌಢ್ಯವನ್ನು ಬಿಟ್ಟಿಲ್ಲ. ಇದರಿಂದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂಬುವುದೇ ಅರ್ಥವಾಗುತ್ತಿಲ್ಲ ಎಂದರು.
ಇದೇ ವೇಳೆ ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅತ್ಯುನ್ನತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.