ಹನುಮಸಾಗರ: ಪಟ್ಟಣದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ವರ್ತಕರು ಪಪಂಗೆ ಬುಧವಾರ ಪ್ರಮುಖ ರಸ್ತೆ ಹಾಗೂ ವೃತ್ತಕ್ಕೆ ಸಿಸಿ ಕ್ಯಾಮೆರಾ ಅಳವಡಿಸುವಂತೆ ಮನವಿ ಸಲ್ಲಿಸಿದರು.
ಕಳ್ಳರ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ಪಟ್ಟಣದ ಪ್ರಮುಖ ರಸ್ತೆ, ವೃತ್ತ,ವ್ಯಾಪಾರ ಕೇಂದ್ರ ಮತ್ತು ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪಪಂದಿಂದ ಸಿಸಿ ಕ್ಯಾಮೆರಾ ಅಳವಡಿಸಬೇಕು. ಕಳ್ಳತನ ಪ್ರಕರಣ ತಡೆಯಲು ಸಹಕಾರಿಯಾಗುವುದರ ಜತೆಗೆ ಮುಂದಾಗಬಹುದಾದ ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಬಹುದು ಎಂದರು.
ಪಂಚಾಯಿತಿ ಬಿಲ್ ಕಲೆಕ್ಟರ್ ಮಹಾಂತಯ್ಯ ಕೋಮಾರಿ ವರ್ತಕರ ಮನವಿ ಸ್ವೀಕರಿಸಿ, ಮೇಲಾಧಿಕಾರಿ ಆಗಮಿಸಿದ ನಂತರ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಶ್ರೀವಿನಾಯಕ ವರ್ತಕರ ಸಂಘದ ಅಧ್ಯಕ್ಷ ಶೇಖರಪ್ಪ ಸಜ್ಜನ, ಉಪಾಧ್ಯಕ್ಷ ರವೀಂದ್ರ ವಾಲಿ, ಶ್ರೀಶೈಲ್ ಮೋಟಗಿ, ಮೌಲಿ ಮೋಟಗಿ, ಪ್ರಶಾಂತ ಕುಲಕರ್ಣಿ, ನೀತಿನ್ ಪಾಟೀಲ್, ರಾಘವೇಂದ್ರ ಮಿಸ್ಕಿನ್, ಗಣಪತಸಾ ಮೆಹರವಾಡೆ, ಸತೀಶ ಬಸ್ವಾ, ಪ್ರವೀಣ ಮೆಹರವಾಡೆ, ಪ್ರಶಾಂತ ಹುಲಮನಿ, ಕಿರಣಸಾ ನಿರಂಜನ, ವೆಂಕಟೇಶ ಗುಡಿಕೋಟಿ, ರಾಘವೇಂದ್ರ ಪವಾರ, ಇಬ್ರಾಹಿಂ ಮೂಲಿಮನಿ, ಮಂಜುನಾಥ ದೇವಳೆ ಸೇರಿದಂತೆ ಅನೇಕ ವರ್ತಕರು ಇತರರು ಇದ್ದರು.