ಕನ್ನಡಪ್ರಭ ವಾರ್ತೆ ತಿಪಟೂರು
ಅದಕ್ಕೆ ಶಾಸಕರು ಸರ್ಕಾರಿ ಶಾಲೆಗಳ ದಾಖಲಾತಿಗಿಂತ ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚಾಗಿದ್ದು, ಈ ಬಗ್ಗೆ ಶಾಲಾ ಶಿಕ್ಷಕರು ದಾಖಲಾತಿ ಪ್ರಯತ್ನ ಮಾಡಬೇಕೆಂದು ತಿಳಿಸಿದರು. ಎತ್ತಿನಹೊಳೆ ಅಧಿಕಾರಿ ಮೋಹನ್ ಮಾತನಾಡಿ, ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮಾರುಗೊಂಡನಹಳ್ಳಿ, ನಾಗತಿಹಳ್ಳಿ, ಭೈರನಾಯಕನಹಳ್ಳಿ, ಬೊಮ್ಮೇನಹಳ್ಳಿ ಭಾಗಗಳಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು.
ಅದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಆದಷ್ಟು ಬೇಗ ಕಾಮಗಾರಿಗಳನ್ನು ಮುಗಿಸಬೇಕು. ಡಿಸೆಂಬರ್ಗೆ ಎತ್ತಿನಹೊಳೆ ನೀರು ನಮ್ಮ ಭಾಗಕ್ಕೂ ಹರಿಯಲಿದೆ. ಹೆಚ್ಚು ಮಳೆಯಾಗಿರುವ ಕಾರಣ ನೀರಿಗೆ ಯಾವುದೇ ತೊಂದರೆಯಿಲ್ಲ. ಡಿಸೆಂಬರ್ವರೆಗೂ ನೀರು ಕೊಡುವುದಾಗಿ ಮಂತ್ರಿಗಳು ಹೇಳಿದ್ದು, ಅಷ್ಟರೊಳಗೆ ತಾಲೂಕಿನ ಕೆರೆಗಳನ್ನು ತುಂಬಿಸಿಕೊಳ್ಳುವ ಜವಾಬ್ದಾರಿ ಸಣ್ಣ ನೀರಾವರಿ ಇಲಾಖೆ ಹಾಗೂ ಹೇಮಾವತಿ ಅಧಿಕಾರಿಗಳದ್ದಾಗಿದೆ. ಎಲ್ಲಿಯೂ ನೀರಿನ ಸಮಸ್ಯೆ ಬರಬಾರದು ಎಂದರು. ಪಶು ಸಂಗೋಪನಾ ಇಲಾಖೆಯ ಡಾ. ನಂದೀಶ್ ಮಾತನಾಡಿ, ಜಾನುವಾರುಗಳ ಕಾಲುಬಾಯಿ, ರೇಬಿಸ್, ಕಂದು ರೋಗಕ್ಕೆ ಹಾಗೂ ಕುರಿ ಮೇಕೆಗಳಲ್ಲಿ ಕರುಳಬೇನೆ ರೋಗಕ್ಕೆ ಲಸಿಕೆ ಹಾಕಲಾಗಿದ್ದು, ಮಳೆಯಾಗಿರುವ ಹಿನ್ನಲೆಯಲ್ಲಿ ರೈತರಿಗೆ ಮೇವಿನ ಸಮಸ್ಯೆ ಇಲ್ಲ ಎಂದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಪವನ್ ವರದಿ ನೀಡಲು ಮುಂದಾದಾಗ ನೀವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿಲ್ಲ. ಇಲ್ಲಿ ಉಳಿಯಬೇಕಾದರೆ ವೇಗವಾಗಿ ಕೆಲಸ ಮಾಡಿ ಎಂದರು.ನಂತರ ಡಾ.ಪವನ್ ಪ್ರತಿಕ್ರಿಯಿಸಿ, ಪ್ರಸ್ತುತ ವರ್ಷ ಉತ್ತಮ ಮಳೆಯಾಗಿದ್ದು, ೨೨೯೦೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆ ಬಿತ್ತನೆಯಾಗಿದೆ. ರೈತರಿಗೆ ಅಗತ್ಯ ಗೊಬ್ಬರ, ಬಿತ್ತನೆ ಬೀಜ ವಿತರಣೆ ಮಾಡಲಾಗಿದ್ದು ಪ್ರಸ್ತುತ ವರ್ಷ 11 ಕೃಷಿಹೊಂಡಗಳನ್ನು ತೆಗೆಸಿ ಅಗತ್ಯ ಮುಂಜಾಗ್ರತ ಕ್ರಮವಹಿಸಲಾಗಿದೆ ಎಂದರು. ಶಾಸಕರು ಸಿಡಿಪಿಒ, ಕಂದಾಯ, ಆರೋಗ್ಯ, ನಗರಸಭೆ, ಅಬಕಾರಿ, ಸಾರಿಗೆ, ಅರಣ್ಯ, ರೇಷ್ಟೆ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳ ಮಾಹಿತಿ ಪಡೆದುಕೊಂಡರು. ತಹಸೀಲ್ದಾರ್ ಪವನ್ಕುಮಾರ್, ಎಚ್.ಹುಲಿರಾಜ, ತಾ.ಪಂ ಇಓ ಸುದರ್ಶನ್, ನಗರಸಭೆ ಅಧ್ಯಕ್ಷೆ ಯಮುನಾ, ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಗ್ರೇಡ್-2 ತಹಸೀಲ್ದಾರ್ ಜಗನ್ನಾಥ್, ಎಪಿಎಂಸಿ ಕಾರ್ಯದರ್ಶಿ ನ್ಯಾಮನಗೌಡ, ಪಶುಇಲಾಖೆ ನಂದೀಶ್, ಬೆಸ್ಕಾಂ ಮನೋಹರ್, ಸಣ್ಣ ನೀರಾವರಿ ಇಲಾಖೆ ದೊಡ್ಡಯ್ಯ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಶಿವಕುಮಾರ್ ಇದ್ದರು.