ಅನುವಾದ ಸಾಹಿತ್ಯವು ವಿಭಿನ್ನ ಭಾಷೆಗಳ ನಡುವೆ ಸೇತುವೆ: ಶೇಡಿಮನೆ ಗೋಪಾಲ ಶೆಟ್ಟಿ

KannadaprabhaNewsNetwork |  
Published : Feb 28, 2026, 02:45 AM IST
ಮಾರ್ಚ್ 1 ರಂದು ಹೆಬ್ರಿ ತಾಲೂಕಿನ ಸಾಹಿತ್ಯ ಸಮ್ಮೇಳನ ಶೆಡಿಮನೆ ಗ್ರಾಮದ    ಅರಸಮ್ಮನ ಕಾನುವಿನಲ್ಲಿ  ನಡೆಯಲಿದ್ದು ಸಾಹಿತ್ಯ ಸಮ್ಮೇಳನದ ಮಾರ್ಚ್ 1ರಂದು ಅರಸಮ್ಮಕಾನು ಶೇಡಿಮನೆಯಲ್ಲಿನಡೆಯಲಿರುವ   ಹೆಬ್ರಿ ತಾಲೂಕು ಆರನೆಯ ಕನ್ನಡ  ಸಾಹಿತ್ಯ ಸಮ್ಮೇಳನದ  ಸರ್ವಾಧ್ಯಕ್ಷರಾದ ಶೇಡಿಮನೆ ಗೋಪಾಲ ಶೆಟ್ಟಿ ಅವರನ್ನು ಅವರ ಊರು ಶೇಡಿಮನೆಯ ಮೂಲ ಮನೆಯಲ್ಲಿ ಆಮಂತ್ರಣ ಪತ್ರಿಕೆ ನೀಡಿ ಅಧಿಕೃತವಾಗಿ ಆಮಂತ್ರಿಸಲಾಯಿತು | Kannada Prabha

ಸಾರಾಂಶ

ಹೆಬ್ರಿ ತಾಲೂಕಿನ ಅರಸಮ್ಮಕಾನು ಶೇಡಿಮನೆಯಲ್ಲಿ ಮಾ. 1ರಂದು ನಡೆಯಲಿರುವ ಹೆಬ್ರಿ ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶೇಡಿಮನೆ ಗೋಪಾಲ ಶೆಟ್ಟಿ ಅವರನ್ನು ಕನ್ನಡಪ್ರಭ ಪತ್ರಿಕೆ ಸಂದರ್ಶನ ನಡೆಸಿತು. ಕನ್ನಡದ ಭವ್ಯ ಪರಂಪರೆ, ಪುಸ್ತಕಗಳ ಮಹತ್ವ ಕುರಿತು ಸಂದರ್ಶನದಲ್ಲಿ ತೆರೆದಿಟ್ಟರು.

ರಾಂ ಅಜೆಕಾರು ಕಾರ್ಕಳ

ಹೆಬ್ರಿ ತಾಲೂಕಿನ ಅರಸಮ್ಮಕಾನು ಶೇಡಿಮನೆಯಲ್ಲಿ ಮಾ. 1ರಂದು ನಡೆಯಲಿರುವ ಹೆಬ್ರಿ ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶೇಡಿಮನೆ ಗೋಪಾಲ ಶೆಟ್ಟಿ ಅವರನ್ನು ಕನ್ನಡಪ್ರಭ ಪತ್ರಿಕೆ ಸಂದರ್ಶನ ನಡೆಸಿತು. ಕನ್ನಡದ ಭವ್ಯ ಪರಂಪರೆ, ಪುಸ್ತಕಗಳ ಮಹತ್ವ ಕುರಿತು ಸಂದರ್ಶನದಲ್ಲಿ ತೆರೆದಿಟ್ಟರು.

1. ಈ ವರ್ಷದ ಸಾಹಿತ್ಯ ಸಮ್ಮೇಳನದ ಮುಖ್ಯ ಉದ್ದೇಶ ಮತ್ತು ಸಂದೇಶವೇನು?

ಕನ್ನಡದ ಭವ್ಯ ಪರಂಪರೆಯ ಯುವ ಜನರಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವುದು, ಅದರಲ್ಲೂ ಸ್ಥಳೀಯ ಕಲೆ ಸಾಹಿತ್ಯ ಪರಂಪರೆಯ ಬಗ್ಗೆ ಆಸಕ್ತಿ ಮೂಡಿಸುವುದೇ ನಮ್ಮ ಕಲ್ಪನೆಯಾಗಿದೆ. 2. ಇಂದಿನ ಯುವ ಪೀಳಿಗೆ ಸಾಹಿತ್ಯದತ್ತ ಹೆಚ್ಚು ಆಕರ್ಷಿತರಾಗಲು ಯಾವ ರೀತಿಯ ಕಾರ್ಯಕ್ರಮಗಳು ಅಗತ್ಯವೆಂದು ನೀವು ಭಾವಿಸುತ್ತೀರಿ?

ಆಧುನೀಕರಣದ ಪ್ರಭಾವದಿಂದ ಹಾಗು ಮೊಬೈಲ್ ಗೀಳಿನಿಂದ ಯುವ ಸಮುದಾಯ ಸಾಹಿತ್ಯದಿಂದ ದೂರತಳ್ಳುತಿದೆ. ಅದಕ್ಕಾಗಿ ಸಾಹಿತ್ಯ ಸಮೂಹ ಗಾಯನಗಳು, ಯಕ್ಷಗಾನ, ಸೇರಿದಂತೆ ಶಾಲಾ ಮಟ್ಟದಲ್ಲಿಯೆ ಪ್ರೋತ್ಸಾಹ ನೀಡಿದರೆ ಅದು ಬೆಳೆಯಲು ಸಹಕಾರಿ. ಯುವಕರಿಗೆ ಕಥೆ- ಕವಿತಾ ವಾಚನ, ಸಾಹಿತ್ಯ ಸ್ಪರ್ಧೆಗಳು, ರಂಗ ಪ್ರದರ್ಶನ, ಡಿಜಿಟಲ್ ಬರವಣಿಗೆ ಕಾರ್ಯಾಗಾರಗಳು ಹಾಗೂ ಪ್ರಖ್ಯಾತ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

3. ಕನ್ನಡ ಸಾಹಿತ್ಯದಲ್ಲಿ ಇತ್ತೀಚೆಗೆ ಕಾಣಿಸುತ್ತಿರುವ ಹೊಸ ಪ್ರವೃತ್ತಿಗಳನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ?

ಹೊಸ ಪೀಳಿಗೆಯ ಬರಹಗಾರರು ತಾಜಾ ವಿಷಯಗಳು, ನಗರೀಕರಣ, ಮಹಿಳಾ ಚಿಂತನೆ, ದಲಿತ ಸಾಹಿತ್ಯ, ಪರಿಸರ ಸಮಸ್ಯೆಗಳನ್ನು ಧೈರ್ಯವಾಗಿ ತಂದುಕೊಡುತ್ತಿದ್ದಾರೆ. ಇದು ಸಾಹಿತ್ಯವನ್ನು ಹೆಚ್ಚು ಪ್ರಸ್ತುತ ಮತ್ತು ಜೀವಂತವಾಗಿಸಿದೆ. 4. ಡಿಜಿಟಲ್ ಯುಗದಲ್ಲಿ ಮುದ್ರಿತ ಪುಸ್ತಕಗಳ ಭವಿಷ್ಯ ಕುರಿತು ನಿಮ್ಮ ಅಭಿಪ್ರಾಯವೇನು?

ಡಿಜಿಟಲ್ ಮಾಧ್ಯಮಗಳು ಬೆಳೆಯುತ್ತಿದ್ದರೂ ಮುದ್ರಿತ ಪುಸ್ತಕಗಳ ಮಹತ್ವ ಕಡಿಮೆಯಾಗುವುದಿಲ್ಲ. ಪುಸ್ತಕದ ಓದಿನ ಅನುಭವ ವಿಭಿನ್ನ. ಇ-ಪುಸ್ತಕಗಳು ಮತ್ತು ಮುದ್ರಿತ ಪುಸ್ತಕಗಳು ಪರಸ್ಪರ ಪೂರಕವಾಗಿವೆ. 5. ಮಹಿಳಾ ಸಾಹಿತ್ಯಕಾರರ ಪಾತ್ರ ಮತ್ತು ಕೊಡುಗೆ ಕುರಿತು ನಿಮ್ಮ ಅಭಿಪ್ರಾಯವೇನು?

ಮಹಿಳಾ ಸಾಹಿತ್ಯಕಾರರು ಸಮಾಜದ ಸೂಕ್ಷ್ಮ ಭಾವನೆಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ಅವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದೆ. ಮಹಿಳಾ ಚಿಂತನೆ ಸಾಹಿತ್ಯವನ್ನು ಸಮತೋಲನಗೊಳಿಸಿದೆ. 6. ಅನುವಾದ ಸಾಹಿತ್ಯದ ಮಹತ್ವವನ್ನು ನೀವು ಹೇಗೆ ವಿವರಿಸುತ್ತೀರಿ?

ಅನುವಾದ ಸಾಹಿತ್ಯವು ವಿಭಿನ್ನ ಭಾಷೆಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ. ಜಗತ್ತಿನ ಚಿಂತನೆಗಳನ್ನು ಕನ್ನಡಕ್ಕೆ ಪರಿಚಯಿಸಿ, ನಮ್ಮ ಸಾಹಿತ್ಯವನ್ನು ವಿಶ್ವಕ್ಕೆ ಪರಿಚಯಿಸುವ ಮಹತ್ವದ ಸಾಧನವಾಗಿದೆ. 7. ಸಾಹಿತ್ಯ ಮತ್ತು ಸಮಾಜ ಪರಸ್ಪರ ಹೇಗೆ ಪ್ರಭಾವ ಬೀರುತ್ತವೆ ಎಂದು ನೀವು ಕಂಡಿದ್ದೀರಿ?

ಸಾಹಿತ್ಯವು ಸಮಾಜದ ದರ್ಶನ. ಸಮಾಜದಲ್ಲಿ ನಡೆಯುವ ಘಟನೆಗಳು ಸಾಹಿತ್ಯದಲ್ಲಿ ಪ್ರತಿಫಲಿಸುತ್ತವೆ; ಅದೇ ಸಮಯದಲ್ಲಿ ಸಾಹಿತ್ಯವು ಸಮಾಜದ ಚಿಂತನೆಗೆ ದಿಕ್ಕು ತೋರಿಸುತ್ತದೆ. 9. ಹೊಸ ಬರಹಗಾರರಿಗೆ ನೀವು ನೀಡುವ ಪ್ರಮುಖ ಸಲಹೆಗಳು ಯಾವುವು?

ವಿಸ್ತೃತ ಓದು, ನಿರಂತರ ಅಭ್ಯಾಸ, ಸ್ವತಂತ್ರ ಚಿಂತನೆ ಮತ್ತು ಸಮಾಜದ ನಾಡಿ ಹಿಡಿಯುವ ಪ್ರಯತ್ನ ಮಾಡಬೇಕು. ಟೀಕೆಗಳನ್ನು ಸ್ವೀಕರಿಸಿ ಬೆಳೆಯಬೇಕು. 10. ಮುಂದಿನ ವರ್ಷಗಳ ಸಾಹಿತ್ಯ ಸಮ್ಮೇಳನಗಳು ಇನ್ನಷ್ಟು ಪರಿಣಾಮಕಾರಿ ಆಗಲು ಏನೆಲ್ಲ ಬದಲಾವಣೆ ಅಗತ್ಯವೆಂದು ನೀವು ಭಾವಿಸುತ್ತೀರಿ?

ಡಿಜಿಟಲ್ ಪ್ರಸಾರ, ಯುವಕರ ಹೆಚ್ಚಿನ ಭಾಗವಹಿಸುವಿಕೆ, ಗ್ರಾಮೀಣ ಕೇಂದ್ರಗಳಲ್ಲಿ ಉಪಸಮ್ಮೇಳನಗಳು ಮತ್ತು ಪುಸ್ತಕ ಪ್ರದರ್ಶನಗಳ ವಿಸ್ತರಣೆ ಅಗತ್ಯ. ಸಾಹಿತ್ಯವನ್ನು ಜನಸಾಮಾನ್ಯರ ಹತ್ತಿರ ತಲುಪಿಸುವ ಪ್ರಯತ್ನ ಮುಂದುವರಿಯಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾ. ೧ರಂದು ‘ಸ್ನೇಹ ಸೇತು’ ಸಮಾರಂಭ
ಮಕ್ಕಳ ಹಕ್ಕು, ಸಮಸ್ಯೆ ಕುರಿತು ರಾಷ್ಟ್ರೀಯ ಮಕ್ಕಳ ಆಯೋಗದಿಂದ ಕಾರ್‍ಯಾಗಾರ