ಕನ್ನಡಪ್ರಭ ವಾರ್ತೆ ಮಡಿಕೇರಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರಿಗೆ ತಕ್ಕಂತೆ ವಿನಯವಾಗಿ ವರ್ತಿಸುತ್ತಿರುವವರು, ಇವರು ಒಂದು ಸಣ್ಣ ಕಪ್ಪು ಚುಕ್ಕಿ ಇಲ್ಲದೆ ತಮ್ಮ ಜೀವನ ಸಾಗಿಸುತ್ತಿದ್ದವರು. ಗೌರವಯುತ ಕುಟುಂಬದಲ್ಲಿ ಬಂದವರು. ಆದರೆ ಇವರು ವಾಟ್ಸಪ್ ಗ್ರೂಪ್ನ ಅಡ್ಮಿನ್ ಎಂಬ ಒಂದೇ ಕಾರಣಕ್ಕೆ, ಯಾರೋ ಕಿಡಿಗೇಡಿಗಳು ಮಾಡಿದ ಅವಹೇಳನ ಬರಹಕ್ಕೆ ಜನ ಪ್ರತಿನಿಧಿಗಳ ಒತ್ತಡದಿಂದ ಇವರ ಮೇಲೆ ಪೊಲೀಸ್ ಇಲಾಖೆಯಲ್ಲಿ ಎಫ್.ಐ.ಆರ್. ದಾಖಲಿಸಲಾಗಿದೆ. ಬಳಿಕ ಇವರಿಗೆ ನೀಡಿದ ಕಿರುಕುಳದಿಂದ ವಿನಯ್ ಸೋಮಯ್ಯ ಅವರು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜನಪ್ರತಿನಿಧಿಗಳು ನಿಜವಾದ ಕಿಡಿಗೇಡಿಗಳ ವಿರುದ್ಧ ಕ್ರಮ ಕಾನೂನು ಕ್ರಮ ಕೈಗೊಳ್ಳಬೇಕೆ ವಿನಃ ಅಧಿಕಾರ ದುರುಪಯೋಗಪಡಿಸಿಕೊಂಡು ವಾಟ್ಸಾಪ್ ಗ್ರೂಪ್ನ ಅಡ್ಮಿನ್ ಮೇಲೆ ದಬ್ಬಾಳಿಕೆ ಮಾಡುವುದು ಯಾವ ನ್ಯಾಯ? ಜನಪ್ರತಿನಿಧಿಗಳು ಜನರ ರಕ್ಷಣೆಗೆ ಇರಬೇಕು, ಕಾನೂನು ಇರುವುದು ಜನರ ರಕ್ಷಣೆಗೆ ಇದನ್ನು ದುರುಪಯೋಗ ಪಡಿಸಿಕೊಳ್ಳುವುದು ಸರಿಯಲ್ಲ. ವಿನಯ್ ಸೋಮಯ್ಯ ಅವರ ಡೆತ್ ನೋಟ್ನಲ್ಲಿ ಬರೆದಿರುವವರನ್ನು ಕೂಡಲೇ ಬಂಧಿಸಬೇಕು ಹಾಗೂ ಅವರ ಡೆತ್ ನೋಟನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಬೇಕು ಎಂದೂ ರಂಜನ್ ಒತ್ತಾಯಿಸಿದ್ದಾರೆ.----------------------------
ಮಡಿಕೇರಿ: ವಿನಯ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಮುಖಂಡ ತೆನ್ನಿರಾ ಮೈನಾ ಹೇಳಿದ್ದಾರೆ.
ವಿನಯ್ ಎಂಬಾತನ ಮುಖ ಪರಿಚಯ ಕೂಡ ನನಗೆ ಇಲ್ಲ. ಆತನನ್ನು ಪ್ರಕರಣದ ಮೊದಲು ಅದರ ನಂತರವೂ ನೋಡಿಲ್ಲ. ಆತನಿಗೆ ಕಿರುಕುಳ ನೀಡಿದವರು ಯಾರು ಪತ್ತೆ ಮಾಡಲಿ. ಪೊಲೀಸರು ಆತನಿಗೆ ಕಿರುಕುಳ ನೀಡಿದ್ರಾ? ಇಲ್ಲ ಬೇರೆ ಯಾರಾದರೂ ವ್ಯಕ್ತಿ ದೂರು ನೀಡಿದ್ರಾ? ಆತನಿಗೆ ಪ್ರತಾಪ್ ಸಿಂಹ, ಕೊಡಗಿನ ಮಾಜಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಮುಂತಾದವರು ಕಾನೂನು ಸಲಹೆ ನೀಡಿದ್ದಾರೆ. ಹೀಗಾಗಿ ಅವರನ್ನು ವಿಚಾರಣೆ ಮಾಡಲಿ. ಆತನೊಂದಿಗೆ ಸಂಭಾಷಣೆ ನಡೆಸಿರುವವರನ್ನು ವಿಚಾರಣೆ ಮಾಡಲಿ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.