ರಭಸದ ಮಳೆಗೆ ನೆಲಕ್ಕುರುಳಿದ ಮರಗಳು

KannadaprabhaNewsNetwork |  
Published : Apr 25, 2025, 12:30 AM IST
ನವಲಗುಂದ ತಾಲ್ಲೂಕಿನ ಗುಮ್ಮಗೋಳ ಗ್ರಾಮದ ಜನ್ನತಬಿ ನದಾಫ್ ಅವರ ಮನೆಯ ಚಾವಣಿ ಹಾರಿ ವಿದ್ಯುತ್ ತಂತಿಯ ಮೇಲೆ ಬಿದ್ದಿರುವುದು. | Kannada Prabha

ಸಾರಾಂಶ

ಗುಮ್ಮಗೋಳ ಗ್ರಾಮದ ಜನ್ನತಬಿ ನದಾಫ್, ಮಹಮ್ಮದ್ಅಲಿ ಖಾದರ್ ನೇಕಾರ್, ಆಶಾಬಿ ಜೇರುಮ್ಮನವರ ಹಾಗೂ ಶಿರೂರು ಗ್ರಾಮದಲ್ಲಿ ಮನೆಯೊಂದರ ಚಾವಣಿ ಹಾರಿಹೋಗಿವೆ. ತೆಲೆಮೊರಬ ಗ್ರಾಮದಲ್ಲಿ ಮನೆಯ ಚಾವಣಿ ಹಾರಿ ಗ್ರಮಾದ ಮಹಾದೇವಿ ತಡಕೋಡ ಎಂಬುವರಿಗೆ ಕಬ್ಬಿಣದ ರಾಡ್‌ ಬಡಿದು ತೀವ್ರವಾಗಿ ಗಾಯಗೊಂಡಿದ್ದು, ಧಾರವಾಡ ಎಸ್‌ಡಿಎಂಗೆ ಚಿಕಿತ್ಸೆಗಾಗಿ ದಾಖಸಲಾಗಿದೆ.

ನವಲಗುಂದ: ತಾಲೂಕಿನೆಲ್ಲೆಡೆ ಗುರುವಾರ ಸಂಜೆ ಸಿಡಿಲು. ಗುಡುಗು ಗಾಳಿ ಸಹಿತ ಭಾರಿ ಮಳೆಯಾಗಿದೆ. ಗಾಳಿಯ ರಭಸಕ್ಕೆ ಅಲ್ಲಲ್ಲಿ ಮರಗಳು ಬಿದ್ದು ವಿದ್ಯುತ್ ವ್ಯತ್ಯಯವಾಗಿದೆ.

ಗುಮ್ಮಗೋಳ ಗ್ರಾಮದ ಜನ್ನತಬಿ ನದಾಫ್, ಮಹಮ್ಮದ್ಅಲಿ ಖಾದರ್ ನೇಕಾರ್, ಆಶಾಬಿ ಜೇರುಮ್ಮನವರ ಹಾಗೂ ಶಿರೂರು ಗ್ರಾಮದಲ್ಲಿ ಮನೆಯೊಂದರ ಚಾವಣಿ ಹಾರಿಹೋಗಿವೆ. ತೆಲೆಮೊರಬ ಗ್ರಾಮದಲ್ಲಿ ಮನೆಯ ಚಾವಣಿ ಹಾರಿ ಗ್ರಮಾದ ಮಹಾದೇವಿ ತಡಕೋಡ ಎಂಬುವರಿಗೆ ಕಬ್ಬಿಣದ ರಾಡ್‌ ಬಡಿದು ತೀವ್ರವಾಗಿ ಗಾಯಗೊಂಡಿದ್ದು, ಧಾರವಾಡ ಎಸ್‌ಡಿಎಂಗೆ ಚಿಕಿತ್ಸೆಗಾಗಿ ದಾಖಸಲಾಗಿದೆ.

ಗುಮ್ಮಾಗೋಳ, ಶಿರೂರು ಹಾಗೂ ತೆಲೆಮೊರಬ ಗ್ರಾಮಕ್ಕೆ ತಹಸೀಲ್ದಾರ್ ಸುಧೀರ್ ಸಾಹುಕಾರ್ ಭೇಟಿ ನೀಡಿ ಪರಿಶೀಲಿಸಿದರು. ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿಬಿದ್ದಿದ್ದು ಯಾವುದೇ ಪ್ರಾಣ ಹಾನಿಯಾದ ಕುರಿತು ವರದಿಯಾಗಿಲ್ಲ.ಕುಂದಗೋಳದಲ್ಲಿ ಗುಡುಗು-ಸಿಡಿಲಿನೊಂದಿಗೆ ಮಳೆ

ಕುಂದಗೋಳ: ಪಟ್ಟಣ ಹಾಗೂ ತಾಲೂಕಿನ ಕೆಲ ಭಾಗಗಳಲ್ಲಿ ಗುಡುಗು- ಸಿಡಿಲಿನೊಂದಿಗೆ ಸುರಿದ ಮಳೆಯಿಂದ ಕೆಲವೆಡೆ ವಿದ್ಯುತ್ ಕಂಬ ಹಾಗೂ ಗಿಡ-ಮರಗಳು ಧರೆಗುರುಳಿ, ತೆಂಗಿನ ಗಿಡಕ್ಕೆ ಬೆಂಕಿ ಹತ್ತಿದ ಘಟನೆ ಪಟ್ಟಣದಲ್ಲಿ ಬುಧವಾರ ಜರುಗಿದೆ. ತಾಲೂಕಿನ ಬೆಟದೂರಿನಿಂದ ಇನಾಂಕೊಪ್ಪ ಗ್ರಾಮಕ್ಕೆ ತೆರಳುವ ಮಾರ್ಗಮಧ್ಯದಲ್ಲಿನ ಕೆಲ ಮರಗಳು ಹಾಗೂ 7 ವಿದ್ಯುತ್ ಕಂಬಗಳು ಧರೆಗುರುಳಿ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಬಂದಾಗಿದೆ. ಪಟ್ಟಣದ ಹುಬ್ಬಳ್ಳಿ- ಲಕ್ಷ್ಮೇಶ್ವರ ರಸ್ತೆಗೆ ಹೊಂದಿಕೊಂಡಿರುವ ರಮೇಶ ಕುನ್ನೂರ ಹಿತ್ತಲಿನಲ್ಲಿನ ಎರಡು ತೆಂಗಿನ ಗಿಡಕ್ಕೆ ಸಿಡಿಲು ಬಡಿದು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ಹೆಸ್ಕಾಂನವರು ಗ್ರಾಮಕ್ಕೆ ತೆರಳಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐತಿಹಾಸಿಕ ಸ್ಮಾರಕ ಮುಂದಿನ ಪೀಳಿಗೆಗೆ ಉಳಿಯಲಿ: ಡಿಸಿ ಸಂಗಪ್ಪ
ಚೇರಂಬಾಣೆ: ವಾರ್ಷಿಕ ಕ್ರೀಡಾ ದಿನಾಚರಣೆ