ಕುಷ್ಟಗಿವರೆಗೆ ಪ್ರಯೋಗಾರ್ಥ ರೈಲು ಸಂಚಾರ

KannadaprabhaNewsNetwork |  
Published : Mar 30, 2025, 03:05 AM IST
29ಕೆಪಿಎಲ್23 ಕುಷ್ಟಗಿ ಮಾರ್ಗವಾಗಿ ರೈಲ್ವೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಿರುವುದಕ್ಕೆ ರೈಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಅವರು ಭೇಟಿಯಾಗಿರುವುದು. | Kannada Prabha

ಸಾರಾಂಶ

ಸ್ವಾತಂತ್ರ್ಯ ನಂತರ ಕುಷ್ಟಗಿಗೆ ಬಂದ ಮೊದಲ ರೈಲು ಇದಾಗಿದ್ದು, ಈ ಭಾಗದ ಜನತೆಯ ಹಲವು ದಶಕಗಳ ಕನಸು ಕೊನೆಗೂ ಸಾಕಾರಗೊಂಡಿದೆ

ಕೊಪ್ಪಳ: ಗದಗ-ವಾಡಿ ರೈಲ್ವೆ ಯೋಜನೆಯ ಕಾಮಗಾರಿ ಕುಷ್ಟಗಿ ಭಾಗದವರೆಗೆ ಪೂರ್ಣಗೊಂಡಿದ್ದು, ಪ್ರಯೋಗಾರ್ಥ ರೈಲು ಸಂಚಾರ ಯಶಸ್ವಿಯಾಗಿರುವುದು ಸಂತಸ ತಂದಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿರುವ ವೈದ್ಯ ಬಸವರಾಜ ಕ್ಯಾವಟರ್ ಸಂತಸ ವ್ಯಕ್ತಪಡಿಸಿದರು.

ಬೆಂಗಳೂರಿನ ಸಚಿವರ ನಿವಾಸದಲ್ಲಿ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರನ್ನು ಶನಿವಾರ ಭೇಟಿಯಾಗಿ ಬಹು ವರ್ಷಗಳ ಕನಸು ನನಸಾಗಿದೆ ಎಂದು ಕೇಂದ್ರ ಸರ್ಕಾರದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗದಗ-ವಾಡಿ ಹೊಸ ರೈಲ್ವೆ ಮಾರ್ಗ ವ್ಯಾಪ್ತಿಯಲ್ಲಿ ನಿಂಗಲಬಂಡಿ-ಕುಷ್ಟಗಿವರೆಗೆ ಸಿಆರ್ ಎಸ್ ತಂಡದಿಂದ ರೈಲ್ವೆ ಮಾರ್ಗದ ತಾಂತ್ರಿಕ ತಪಾಸಣೆ, ಪ್ರಯೋಗಾರ್ಥ ರೈಲು ಸಂಚಾರ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಹಾಗೂ ತಮ್ಮ ಸಹಕಾರದ ಪ್ರತಿಫಲವಾಗಿದೆ ಎಂದಿದ್ದಾರೆ.

ಸ್ವಾತಂತ್ರ್ಯ ನಂತರ ಕುಷ್ಟಗಿಗೆ ಬಂದ ಮೊದಲ ರೈಲು ಇದಾಗಿದ್ದು, ಈ ಭಾಗದ ಜನತೆಯ ಹಲವು ದಶಕಗಳ ಕನಸು ಕೊನೆಗೂ ಸಾಕಾರಗೊಂಡಿದೆ. ಆರಂಭಿಕವಾಗಿ ಕುಷ್ಟಗಿ-ಹುಬ್ಬಳ್ಳಿ,ಕುಷ್ಟಗಿ-ಯಶವಂತಪುರ ಮಾರ್ಗವಾಗಿ ರೈಲು ಸಂಚಾರ ಕಲ್ಪಿಸಬೇಕೆನ್ನುವುದು ಜನತೆ ಪ್ರಮುಖ ಬೇಡಿಕೆಯಾಗಿದೆ. ಈ ರೈಲು ಸಂಚಾರದಿಂದ ಸಾರ್ವಜನಿಕರಿಗೆ ಹಾಗೂ ಸರಕು ಸಾಗಾಣಿಕೆಗೆ ಅನಕೂಲವಾಗುವ ಜತೆಗೆ ಭವಿಷ್ಯದಲ್ಲಿ ಆದಾಯ ದ್ವಿಗುಣವಾಗುವ ಭರವಸೆ ಮೂಡಿಸಿದೆ.

ಈ ಭಾಗದ ಬಹುದಿನಗಳ ಕನಸು ಗದಗ-ವಾಡಿ ರೈಲ್ವೆ ಯೋಜನೆಯ ತಳಕಲ್ ನಿಂದ ಕುಷ್ಟಗಿವರೆಗೆ ಈ ರೈಲು ಮಾರ್ಗ ವಾಡಿವರೆಗೂ ಪೂರ್ಣಗೊಂಡರೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಂಪರ್ಕ ಸಾಧ್ಯವಾಗಲಿದೆ.

ಈ ವೇಳೆ ಮುಖಂಡ ನೀಲಕಂಠಯ್ಯ ಹಿರೇಮಠ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!