ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ಜಿಲ್ಲಾಧ್ಯಕ್ಷ ಡಿ.ಅಶೋಕ್ ಮತ್ತು ಪದಾಧಿಕಾರಿಗಳು ಡಾ.ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ನಗರದ ಜಯಚಾಮ ರಾಜೇಂದ್ರ ವೃತ್ತದಲ್ಲಿರುವ ಡಾ.ರಾಜ್ಕುಮಾರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಪ್ರಸ್ತುತ ಕನ್ನಡ ಚಿತ್ರರಂಗ ಅವನತಿಯ ಹಾದಿ ಹಿಡಿದಿದೆ. ಚಿತ್ರರಂಗವನ್ನು ಪುನರುಜ್ಜೀವನಗೊಳ್ಳಬೇಕಾದರೆ ಡಾ.ರಾಜ್ಕುಮಾರ್ ಅವರ ನಡವಳಿಕೆಗಳನ್ನು ಇಂದಿನ ಕಲಾವಿದರು ಅನುಸರಿಸಬೇಕು. ರಾಜ್ಕುಮಾರ್ ಈ ನಾಡಿನ ಆಸ್ತಿ. ಅವರ ಬದುಕೇ ಆದರ್ಶ. ಅವರು ಕೇವಲ ಚಿತ್ರಗಳಲ್ಲಿ ನಾಯಕರಾಗಿರದೆ ನಿಜಜೀವನದಲ್ಲೂ ನಾಯಕತ್ವ ಮತ್ತು ಸರಳತೆಯನ್ನು ರೂಢಿಸಿಕೊಂಡಿದ್ದಾಗಿ ತಿಳಿಸಿದರು.ಕನ್ನಡ ಕಲಿಗಳು, ಸಮಾಜಮುಖಿ ನಾಯಕರು, ದೇವರ ಪಾತ್ರಗಳಲ್ಲೂ ಕಣ್ಣಿಗೆ ಕಟ್ಟುವಂತೆ ನಟಿಸಿ ಅಭಿಮಾನಿಗಳ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ. ಎಂತಹ ಸಂದರ್ಭದಲ್ಲೂ ಕಲೆಯನ್ನು ರಾಜಕೀಕರಣಗೊಳಿಸಲಿಲ್ಲ. ಸಿನಿಮಾವನ್ನು ಕಲೆಯಾಗಿ ಸ್ವೀಕರಿಸಿ ಚಿತ್ರರಂಗದ ಶ್ರೀಮಂತಿಕೆ, ಘನತೆ-ಗೌರವಗಳನ್ನು ಹೆಚ್ಚಿಸಿದರು ಎಂದರು.
ಜಿಲ್ಲಾ ಘಟಕ ಕಾರ್ಯದರ್ಶಿ ರಾಜೇಶ್, ಚಿತ್ರನಟ ಸಂಜಯ್ಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್, ಹೊಳಲು ನಾಗರಾಜ್, ನಗರಾಧ್ಯಕ್ಷ ಕಾರ್ತಿಕ್, ಮಲ್ಲೇಶ್, ಆನಂದ, ಅಅಬರೀಶ್ ಮತ್ತಿತರರಿದ್ದರು.
ನಗರದ ಕಾಮನ ಸರ್ಕಲ್ನಲ್ಲಿ ಡಾ.ರಾಜಕುಮಾರ್ ಅಭಿಮಾನಿಗಳು ರಾಜ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರೊಂದಿಗೆ ವರನಟನ ಹುಟ್ಟುಹಬ್ಬ ಆಚರಿಸಿದರು.
ಕಾರ್ಯಕ್ರಮದಲ್ಲಿ ಬಾಬಿ, ನಾಗರಾಜು, ಶ್ರೀಧರ್, ಗೌತಮ್, ನಿರಂಜನ್ ಇತರರಿದ್ದರು.
ಮಂಡ್ಯದ ಸ್ವರ್ಣಸಂದ್ರ ಬಡಾವಣೆಯಲ್ಲಿ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ವರನಟ ಡಾ.ರಾಜ್ ಜನ್ಮದಿನಾಚರಣೆ ಪ್ರಯುಕ್ತ ಪೌರಕಾರ್ಮಿಕರಿಗೆ ಫುಡ್ಕಿಟ್ ವಿತರಣೆ ಕಾರ್ಯಕ್ಕೆ ಸಂಘದ ಅಧ್ಯಕ್ಷ ನಾಗರಾಜ್ ಚಾಲನೆ ನೀಡಿದರು.
ಡಾ.ರಾಜ್ ಅವರ ಅಭಿಮಾನಿಗಳಾದ ಬಸವೇಗೌಡ, ನಿವೃತ್ತ ಅಧಿಕಾರಿ ಸಿದ್ದಪ್ಪ, ಎಂ.ಆರ್.ಎಂ.ರಘು, ಪಾಪಣ್ಣ, ತಿಲಕ್, ಬಸವರಾಜ್, ಚಿರಂಜೀವಿ, ರಾಜಣ್ಣ, ವೆಂಕಟೇಶ್ ಮತ್ತಿತರರಿದ್ದರು.
ನಗರದ ಸಿಲರ್ ್ವಜ್ಯೂಬಿಲಿ ಉದ್ಯಾನವನದಲ್ಲಿ ಜಿಲ್ಲಾ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಆಯೋಜಿಸಿದ್ದ ವರನಟ ಡಾ.ರಾಜಕುಮಾರ್ ಅವರ ೯೭ನೇ ವರ್ಷದ ಜಯಂತಿ ಮತ್ತು ಡಾ.ಪುನೀತ್ರಾಜ್ಕುಮಾರ್ ಅವರ ೫೦ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ಕೆ ಅಧ್ಯಕ್ಷ ಕೆ.ಸಿ.ರವೀಂದ್ರಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇಂದಿನ ಕಲಾವಿದರಿಗೆ ಡಾ.ರಾಜ್ಕುಮಾರ್ ಬಹುದೊಡ್ಡ ಆದರ್ಶವಾಗಿದ್ದಾರೆ. ಒಳ್ಳೆಯ ಸಿನಿಮಾ ಮಾಡುವುದಕ್ಕಿಂತ ಹೆಚ್ಚಾಗಿ ಹಣ ಮಾಡುವುದೇ ಈಗಿನವರ ಮುಖ್ಯ ಗುರಿಯಾಗಿದೆ. ಇದರ ಪರಿಣಾಮ ಚಿತ್ರರಂಗ ಅಧೋಗತಿಗೆ ಇಳಿದಿದೆ. ಕನ್ನಡ ಚಿತ್ರರಂಗಕ್ಕೆ ಗತವೈಭವ ಮರಳಬೇಕಾದರೆ ಚಿತ್ರರಂಗದವರೆಲ್ಲರೂ ಡಾ.ರಾಜ್ಕುಮಾರ್ ಹಾದಿಯಲ್ಲಿ ನಡೆದಾಗ ಮಾತ್ರ ಸಾಧ್ಯವಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಡಾ.ರಾಜ್ ಅಭಿಮಾನಿಗಳಾದ ಪ್ರವೀಣ್ಕುಮಾರ್, ಸುರೇಶ್ಬಾಬು, ನಗರಸಭಾ ಮಾಜಿ ಸದಸ್ಯ ಆನಂದ್, ವೆಂಕಟೇಶ್, ಮೂರ್ತಿ ಮತ್ತಿತರರಿದ್ದರು. ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗೆ ಸ್ಥಳದಲ್ಲೇ ಅನ್ನದಾಸೋಹ ನೆರವೇರಿಸಲಾಯಿತು.