ಶಾಲೆಗೆ ಗೈರಾಗದ ವಿದ್ಯಾರ್ಥಿಗಳಿಗೆ ಪ್ರವಾಸ

KannadaprabhaNewsNetwork |  
Published : Oct 24, 2024, 12:42 AM IST
22ಕೆಆರ್ ಎಂಎನ್1.ಜೆಪಿಜಿಮಾಗಡಿ ತಾಲೂಕು ಶ್ರೀಗಿರಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ತಪ್ಪಿಸಿಕೊಳ್ಳದೆ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ನಂದಿ ಕೈವಾರಕ್ಕೆ ಪ್ರವಾಸವನ್ನು ಮುಖ್ಯೋಪಾಧ್ಯಾಯ ಗಂಗಾಧರ್ ಕರೆದುಕೊಂಡು ಹೋಗಿದ್ದರು. | Kannada Prabha

ಸಾರಾಂಶ

ಕುದೂರು: ಶಾಲೆಗೆ ಒಂದು ದಿನವೂ ತಪ್ಪದೆ ಹಾಜರಾಗುವ ವಿದ್ಯಾರ್ಥಿಗಳನ್ನು ಪ್ರವಾಸ ಕರ್ಕೊಂಡು ಹೋಗ್ತೀನಿ ಎಂದು ಮಕ್ಕಳಿಗೆ ಘೋಷಣೆ ಮಾಡಿದಂತೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮಕ್ಕಳೊಂದಿಗೆ ಖುಷಿ ಅನುಭವಿಸಿದ ಶಿಕ್ಷಕರನ್ನು ಗ್ರಾಮಸ್ಥರು ಅಭಿನಂದಿಸಿದೆ.

ಕುದೂರು: ಶಾಲೆಗೆ ಒಂದು ದಿನವೂ ತಪ್ಪದೆ ಹಾಜರಾಗುವ ವಿದ್ಯಾರ್ಥಿಗಳನ್ನು ಪ್ರವಾಸ ಕರ್ಕೊಂಡು ಹೋಗ್ತೀನಿ ಎಂದು ಮಕ್ಕಳಿಗೆ ಘೋಷಣೆ ಮಾಡಿದಂತೆ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಮಕ್ಕಳೊಂದಿಗೆ ಖುಷಿ ಅನುಭವಿಸಿದ ಶಿಕ್ಷಕರನ್ನು ಗ್ರಾಮಸ್ಥರು ಅಭಿನಂದಿಸಿದೆ.

ಮಾಗಡಿ ತಾಲೂಕು ಶ್ರೀಗಿರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಂ.ಗಂಗಾಧರ್‌, ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಮಕ್ಕಳನ್ನು ಶಾಲೆಗೆ ಬರುವಂತೆ ಏನಾದರೂ ಮಾಡಲೇಬೇಕೆಂದು ಶಾಲಾ ಆರಂಭ ಜೂನ್‌ ತಿಂಗಳಲ್ಲೇ ಪ್ರವಾಸದ ಪ್ರಕಟಣೆ ಹೊರಡಿಸಿದರು. ಅಕ್ಟೋಬರ್ ರಜೆಯ ವೇಳೆಗೆ ಒಂದು ದಿನವೂ ರಜೆ ಹಾಕದ ವಿದ್ಯಾರ್ಥಿಗಳನ್ನು ನಂದಿ, ಕೈವಾರ, ಆದಿಯೋಗಿ ಶಿವ ದೇವಾಲಯ, ಸರ್‌. ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ ಮುದ್ದೇನಹಳ್ಳಿಗೆ ಕರೆದೊಯ್ದು ಮಕ್ಕಳನ್ನು ಖುಷಿ ಪಡಿಸಿದ್ದಾರೆ. ಇನ್ನು ಮುಂದೆಯೂ ತಪ್ಪಿಸಿಕೊಳ್ಳದೆ ಶಾಲೆಗೆ ಬರಬೇಕೆಂದು ಮಕ್ಕಳಿಗೆ ಮನವರಿಕೆ ಮಾಡಿದ್ದಾರೆ.

ಮುಖ್ಯ ಶಿಕ್ಷಕ ಎಂ.ಗಂಗಾಧರ್ ಮಾತನಾಡಿ, ಯವುದೇ ಪ್ರಚಾರಕ್ಕಾಗಿ ನಾನು ಈ ಕೆಲಸ ಮಾಡಿಲ್ಲ. ಸಕಾರ ನಮಗೆ ಅನ್ನ ನೀಡಿದೆ. ಮಕ್ಕಳಿಂದ ನಾವು ಗುರು ಎಂಬ ಸ್ಥಾನ ಪಡೆದಿದ್ದೇವೆ. ಮಕ್ಕಳು ತಪ್ಪಿಸಿಕೊಳ್ಳದೆ ಶಾಲೆಗೆ ಬರಲು ಈ ಯೋಜನೆ ಹಾಕಿದೆ. ಅರ್ಧದಷ್ಟು ಯಶಸ್ವಿಯಾಗಿದ್ದೇನೆ. ಇರುವಷ್ಟು ದಿನ ಇಂತಹ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಇದು ನನಗೆ ಹೆಚ್ಚು ಆತ್ಮತೃಪ್ತಿ ಕೊಟ್ಟ ವೃತ್ತಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಹೊನ್ನರಾಜು, ರಾಮಕೃಷ್ಣಪ್ಪ, ಹುನಮಂತರಾಜು ಹಾಜರಿದ್ದರು.

ಕೋಟ್ ............

ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕ ಸಮೂಹವೇ ಇದೆ. ತಾಯಿ ಹೃದಯ ಇದ್ದವರು ಮಾತ್ರ ಶಿಕ್ಷಕರಾಗಲು ಸಾಧ್ಯ. ಅಂತಹ ಮನಸ್ಥಿತಿಯನ್ನು ಗಂಗಾಧರ್ ಹೊಂದಿರುವುದು ನನಗೆ ಖುಷಿ ಕೊಟ್ಟಿದೆ. ಅವರನ್ನು ಭೇಟಿ ಮಾಡಿ ಅಭಿನಂದಿಸುತ್ತೇನೆ.

-ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ

22ಕೆಆರ್ ಎಂಎನ್1.ಜೆಪಿಜಿ

ಮಾಗಡಿ ತಾಲೂಕು ಶ್ರೀಗಿರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಗೈರಾಗದ ವಿದ್ಯಾರ್ಥಿಗಳನ್ನು ನಂದಿ, ಕೈವಾರಕ್ಕೆ ಪ್ರವಾಸ ಮಾಡಿಸಿದ ಮುಖ್ಯ ಶಿಕ್ಷಕ ಗಂಗಾಧರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!