ಕನ್ನಡಪ್ರಭ ವಾರ್ತೆ ಮಡಿಕೇರಿ
ಸುದ್ದಿಗೋಷ್ಠಿ ನಡೆಸಿದ ಟ್ರಸ್ಟಿನ ಪ್ರಮುಖರು, ಕೊಡವ ಮತ್ತು ಅರೆಭಾಷೆ ಗೌಡ ಜನಾಂಗದ ನಡುವೆ ಬೇರೆ ಬೇರೆ ಕಾರಣಕ್ಕೆ ಸ್ವಲ್ಪ ಮಟ್ಟಿನ ಹಗತನ, ಪೈಪೋಟಿಯಿದೆ.
1991ರಲ್ಲಿ ಕೊಡಗು ಏಕೀಕರಣ ರಂಗ ಈ ಪರಿಪಾಠಕ್ಕೆ ಪೂರ್ಣ ವಿರಾಮ ಹಾಕುವ ಪ್ರಯತ್ನ ನಡೆಸಿ ಸಾಕಷ್ಟು ಯಶಸ್ಸು ಕಂಡಿತ್ತು. ಆದರೆ ರಾಜಕೀಯ ಪಕ್ಷಗಳು ಮತ್ತು ಕೆಲ ಜನನಾಯಕರು ಜಾತಿ ಜಾತಿ ನಡುವಿನ ಕಂದಕವನ್ನು ರಾಜಕೀಯ ಕಾರಣಕ್ಕೆ ಜೀವಂತವಾಗಿಟ್ಟಿದ್ದಾರೆ ಎಂದು ದೂರಿದರು.ಈ ಹಲ್ಲೆ ಪ್ರಕರಣವು ಕೆಲವು ವ್ಯಕ್ತಿಗಳ ನಡುವಿನ ಘರ್ಷಣೆಯೇ ಹೊರತು ಜನಾಂಗಗಳ ನಡುವಿನ ಘರ್ಷಣೆಯಾಗಿರುವುದಿಲ್ಲ ಎಂಬುದಾಗಿ ನಾವು ಸ್ಪಷ್ಟ ಪಡಿಸುತ್ತಿದ್ದೇವೆ
ಅರ್ಚಕರಿಗೆ ಹಲ್ಲೆ ಪ್ರಕರಣದ ಆರೋಪಿಗಳ ವಿರುದ್ಧ ಬಿಗಿಯಾದ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲೀಸ್ ಇಲಾಖೆಯನ್ನು ಒತ್ತಾಯಿಸುತ್ತೇವೆ ಎಂದರು.
ಇಂದಿನ ಸೂಕ್ಷ್ಮ ಸನ್ನಿವೇಶದಲ್ಲಿ ಎಲ್ಲಾ ಜನಾಂಗದ ನಾಯಕರು, ರಾಜಕೀಯ ನಾಯಕರು, ಸಮುದಾಯಗಳ ಪ್ರಜ್ಞಾವಂತ ಹಿರಿಯರು ಈ ಬಗ್ಗೆ ಚರ್ಚಿಸಿ, ಈ ರೀತಿಯ ಸಂಘರ್ಷಕ್ಕೆ ವಿರಾಮ ಕೊಡುವುದು ಒಳ್ಳೆಯದು. ಈ ಮೇಲೆ ಹೇಳಿದ ಎಲ್ಲರೂ ಸುಳ್ಳು ವದಂತಿಗೆ ಕಿವಿಕೊಡದೆ ಸ್ವಯಂ ನಿಯಂತ್ರಣ ಹೇರಿಕೊಂಡು ಸೌಹಾರ್ದಯುತ ಸಹಬಾಳ್ವೆಗೆ ಮುಂದಾಗಬೇಕೆಂದು ಕೋರಿದರು.