ಕನ್ನಡಪ್ರಭವಾರ್ತೆ ಚನ್ನಗಿರಿ
ಪಟ್ಟಣದಲ್ಲಿನ ತುಮ್ ಕೋಸ್ ಸಂಸ್ಥೆಯ ಪ್ರಸ್ತುತ ಆಡಳಿತ ಮಂಡಳಿಯ ಮೇಲೆ ಕೆಟ್ಟ ಹೆಸರನ್ನು ತರುವ ಉದ್ದೇಶದಿಂದ ಮತ್ತು ಬರುವ 2025ರ ಫೆಬ್ರವರಿ ತಿಂಗಳಿನಲ್ಲಿ ತುಮ್ ಕೋಸ್ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಗೆಲ್ಲಬೇಕೆಂಬ ದುರುದ್ದೇಶದಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಮಾರಾಟಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ಕಳೆದ ಎರಡು ದಿನಗಳಿಂದ ತುಮ್ ಕೋಸ್ ಸಂಸ್ಥೆಯ ಮೇಲೆ ಆರೋಪಮಾಡುತ್ತಿರುವುದು ಸರಿಯಲ್ಲ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಎಂ.ರವಿ ಹೇಳಿದರು.ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈ ಸಂಸ್ಥೆಯಲ್ಲಿ 15 ಜನ ಆಡಳಿತ ಮಂಡಳಿಯ ಸದಸ್ಯರುಗಳಿದ್ದು, 2020ರಲ್ಲಿ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಆರ್.ಎಂ.ರವಿ ಟೀಂ ಮತ್ತು ಎಚ್.ಎಸ್. ಶಿವಕುಮಾರ್ ಟೀಂ ಎಂದು ಎರಡು ಗುಂಪುಗಳಲ್ಲಿ ಆರ್.ಎಂ. ರವಿ ಟೀಂನವರು 12 ಜನ ನಿರ್ದೇಶಕರು ಜಯಗಳಿಸಿ, ಎಚ್.ಎಸ್. ಶಿವಕುಮಾರ್ ಟೀಂನವರು 3 ಜನ ಜಯಗಳಿಸಿದ್ದರು. ನನ್ನ ಟೀಂ ನವರೇ ಸಂಸ್ಥೆಯ ಆಡಳಿತವನ್ನು ನಡೆಸುತ್ತಿದ್ದು, ಕಳೆದ 5ವರ್ಷದ ನನ್ನ ಆಡಳಿತದಲ್ಲಿ ಯಾವುದೇ ರೀತಿಯ ಲೋಪಗಳಿಲ್ಲದೆ ಪ್ರಮಾಣಿಕವಾಗಿ ಅಧಿಕಾರವನ್ನು ನಡೆಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಮುಂದೆ ಬರಲಿರುವ ತುಮ್ ಕೋಸ್ ನ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಚ್.ಎಸ್. ಶಿವಕುಮಾರ್ ಟೀಂ ನವರನ್ನು ಗೆಲ್ಲಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಈ ಟೀಂ ನವರು ನನ್ನ ಟೀಂನ ನಿರ್ದೇಶಕ ಚಂದ್ರಶೇಖರ್ ಅವರಿಗೆ ಸೇರದೆ ಇರುವ ಅಡಿಕೆಯನ್ನು ಇವರೇ ಮಾರಾಟಕ್ಕೆ ತಂದ ಅಡಿಕೆ ಎಂದು ಬಿಂಬಿಸುತ್ತಿದ್ದಾರೆ ಎಂದು ದೂರಿದರು.ಅಡಿಕೆ ಕಳಪೆಗುಣ ಮಟ್ಟದಲ್ಲಿದ್ದರೂ ಸಹಾ ಮಾರಾಟಕ್ಕೆ ತೆಗೆದುಕೊಂಡಿದ್ದೀರಿ ಎಂದು ಆರೋಪಿಸಿ ಆಡಳಿತ ಮಂಡಳಿಯ ಮೇಲೆ ಕೆಟ್ಟ ಹೆಸರನ್ನು ತರುವ ಪ್ರಯತ್ನ ಮಾಡಿರುವುದು ಇವರ ಯೋಗ್ಯತೆ ಏನೆಂದು ತೋರುತ್ತದೆ ಎಂದು ಹೇಳಿದರು.
ಸಂಸ್ಥೆಯ ಸದಸ್ಯರಲ್ಲದಂತಹವರು ಬಂದು ಬಾಯಿಗೆ ಬಂದಂತೆ ಮಾತನಾಡಿರುವುದು ಸಭ್ಯತೆಯ ಲಕ್ಷಣವಲ್ಲ ಎಂದರು.ತುಮ್ ಕೋಸ್ ಸಂಸ್ಥೆಯ ಸದಸ್ಯ ರೈತರುಗಳು ಅಡಿಕೆಯನ್ನು ಮಾರಾಟಕ್ಕೆ ತಂದಾಗ ಅಡಿಕೆಯ ಗುಣಮಟ್ಟವನ್ನು ಸಂಸ್ಥೆಯ ಸಿಬ್ಬಂದ್ದಿಗಳು ಪರೀಕ್ಷಿಸಿ ಟೆಂಡರ್ ಪ್ರಕ್ರಿಯೆ ನಡೆಯುವ ಮಾರಾಟದ ಹಾಲ್ ಗೆ ಕಳಿಸುತ್ತಾರೆ. ಕಳೆದ ಎರಡು ದಿನಗಳ ಹಿಂದೆ ಸಂಸ್ಥೆಯ ನಿರ್ದೇಶಕ ಸೋಮಶೇಖರ್ ಇವರ ಟ್ರಾಕ್ಟರ್ ನಲ್ಲಿ ಮಂಜಪ್ಪ, ಚಂದ್ರಪ್ಪ, ಗಂಗಾಧರಪ್ಪ ಎಂಬ ರೈತರು ಕಳೆದ 17ನೇ ತಾರೀಖು ಅಡಿಕೆಯನ್ನು ಮಾರಾಟ ಮಾಡಲು ತುಮ್ ಕೋಸ್ ಗೆ ತಂದಿದ್ದಾರೆ.
ಇವರ ಟ್ರಾಕ್ಟರನ್ನು ನೋಡಿದ ರೈತ ರಾಜಪ್ಪ, ನಿದೇರ್ಶಕ ಚಂದ್ರಶೇಖರ್ ಅವರದ್ದೇ ಅಡಿಕೆ ಕಳಪೆಯಿಂದ ಕೂಡಿದ್ದರೂ ಸಹಾ ಅದನ್ನು ರಿಜೆಕ್ಟ್ ಮಾಡದೆ ಮಾರಾಟಕ್ಕೆ ತೆಗೆದುಕೊಂಡಿದ್ದಾರೆ ಎಂದು ರೈತರುಗಳನ್ನು ಸೇರಿಸಿ ಇಲ್ಲದ ರಂಪಾಟವನ್ನು ನಡೆಸಿದ್ದಾರೆ. ಇದು ವಿರೋಧಿ ಟೀಂನ ಅಧಿಕಾರ ಹಿಡಿಯುವ ಸಲುವಾಗಿ ಮಾಡುತ್ತೀರುವ ಕುತಂತ್ರತನವಾಗಿದೆ ಎಂದು ತಿಳಿಸಿದರು.ತುಮ್ ಕೋಸ್ ನ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ನಾನು ನನ್ನ ಮನೆಯಲ್ಲಿದ್ದ ಅಡಿಕೆಯನ್ನು ರೈತರಿಗೆ ಮಾರಾಟ ಮಾಡಿದ್ದೇನೆ. ಅವರು ಆ ಅಡಿಕೆಯನ್ನು ತಂದು ಮಾರಾಟ ಮಾಡಿದ್ದಾರೆ. ಅಡಿಕೆ ತೆಗೆದುಕೊಂಡು ಹೋಗಲು ನನ್ನ ಟ್ರಾಕ್ಟರ್ ಅನ್ನು ಕೊಟ್ಟಿರುವುದು ತಪ್ಪೇ ಎಂದು ಪ್ರಶ್ನಿಸಿದರು.
ತುಮ್ ಕೋಸ್ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವುದನ್ನು ಸಹಿಸದೇ ತುಮ್ ಕೋಸ್ ಸಂಸ್ಥೆಯ ಅಧಿಕಾರವನ್ನು ಹಿಡಿಯುವ ಉದ್ದೇಶದಿಂದ ಇಂತಹ ಆರೋಪಮಾಡುತ್ತಿದ್ದಾರೆ ಎಂದು ತಿಳಿಸುತ್ತಾ, ಕಳಪೆ ಗುಣ ಮಟ್ಟದ ಅಡಿಕೆ ಇದು ಎಂದು ನನ್ನ ಮೇಲೆ ಏನು ಆರೋಪಮಾಡುತ್ತಿದ್ದಾರೆ. ಅದು ನನ್ನ ಅಡಿಕೆಯಲ್ಲ, ಈ ಬಗ್ಗೆ ದೇವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದರು.ಈ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರುಗಳಾದ ಗಂಗಣ್ಣ, ಸಂತೋಷ್, ದೇವೆಂದ್ರಪ್ಪ ಉಪಸ್ಥಿತರಿದ್ದರು.