ತುಂಗಭದ್ರಾ ಡ್ಯಾಂ ಗೇಟ್‌ ಕಳಚಿ ಬಿದ್ದ ಪ್ರಕರಣ: ತಾಂತ್ರಿಕ ಪರಿಶೀಲನಾ ಸಮಿತಿ ರಚನೆ

KannadaprabhaNewsNetwork |  
Published : Sep 06, 2024, 01:08 AM IST
ದ | Kannada Prabha

ಸಾರಾಂಶ

ಪರಿಣತ ತಜ್ಞ ಎ.ಕೆ. ಬಜಾಜ್ ಮುಖ್ಯಸ್ಥರಾಗಿದ್ದು, ಈ ಸಮಿತಿ ಇನ್ನೂ ಐವರು ಸದಸ್ಯರನ್ನು ಒಳಗೊಂಡಿದೆ.

ಹೊಸಪೇಟೆ: ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್‌ಗೇಟ್ ಕಳಚಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಪರಿಣತ ತಜ್ಞ ಎ.ಕೆ. ಬಜಾಜ್ ನೇತೃತ್ವದಲ್ಲಿ ತಾಂತ್ರಿಕ ಪರಿಶೀಲನಾ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿ ಸೆ.೯, ೧೦ರಂದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಪರಿಣತ ತಜ್ಞ ಎ.ಕೆ. ಬಜಾಜ್ ಮುಖ್ಯಸ್ಥರಾಗಿದ್ದು, ಈ ಸಮಿತಿ ಇನ್ನೂ ಐವರು ಸದಸ್ಯರನ್ನು ಒಳಗೊಂಡಿದೆ. ದಿಲ್ಲಿಯ ತಜ್ಞ ಹರ್ಕೇಶಕುಮಾರ, ಆಂಧ್ರಪ್ರದೇಶದ ತಾರಾಪುರಂ ಸುಧಾಕರ್, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ತಲಾ ಒಬ್ಬರು ಪ್ರತಿನಿಧಿಗಳು ಈ ಸತ್ಯಶೋಧನಾ ಸಮಿತಿಯಲ್ಲಿ ಇರಲಿದ್ದಾರೆ.

ಈ ಸಮಿತಿ ಕಾರ್ಯ ಏನು?: ಜಲಾಶಯದ ೩೩ ಕ್ರಸ್ಟ್ ಗೇಟ್‌ಗಳನ್ನು ಈ ಹಿಂದೆ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ತಾಂತ್ರಿಕ ಸಮಿತಿಯು ಕೊಟ್ಟ ವರದಿಗಳನ್ನು ತನಿಖೆಗೆ ಒಳಪಡಿಸಿ ವರದಿ ಸಲ್ಲಿಸಲಿದೆ. ತುಂಗಭದ್ರಾ ಜಲಾಶಯ ಖಾಲಿಯಾದಾಗ, ಭರ್ತಿಯಾದ ನಂತರದ ಮಾಹಿತಿಗಳ ಪರಿಶೀಲನೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಗೇಟ್‌ಗಳನ್ನು ನಿರ್ವಹಣೆ ಮಾಡಿದ್ದು, ಹೇಗೆ? ಸಲ್ಲಿಕೆ ಮಾಡಿದ ವರದಿ ಏನು? ಎನ್ನುವುದನ್ನು ಈ ಸಮಿತಿ ಪರಿಶೀಲಿಸಲಿದೆ. ನೀರು ಬಿಡುವ ಮುನ್ನ ಎಷ್ಟು ಬಾರಿ ಗೇಟ್ ಪರಿಶೀಲನೆ ಮಾಡಲಾಗಿದೆ. ೧೯ನೇ ಗೇಟ್ ಕಳಚಿ ಬಿದ್ದು ಹೋಗಲು ನಿಖರ ಕಾರಣ ಏನು? ಎಂಬುದನ್ನು ಕೂಡ ತಂಡ ಪರಿಶೀಲನೆ ನಡೆಸಲಿದೆ. ಈ ತಂಡ ತುಂಗಭದ್ರಾ ಜಲಾಶಯದ ೩೨ ಕ್ರಸ್ಟ್ ಗೇಟ್‌ಗಳ ಸ್ಥಿತಿಗತಿ, ಅವುಗಳ ಗುಣಮಟ್ಟದ ಕುರಿತು ಪರಿಶೀಲಿಸಿ, ವರದಿಯನ್ನು ಸಲ್ಲಿಸಲಿದೆ. ಜಲಾಶಯದ ಗೇಟ್‌ಗಳನ್ನು ನಿಖರವಾಗಿ ಎರಡು ದಿನಗಳ ವರೆಗೆ ಈ ಸಮಿತಿ ಸದಸ್ಯರು ಪರಿಶೀಲನೆ ನಡೆಸಲಿದ್ದಾರೆ. ಗೇಟ್‌ಗಳ ಬಲವರ್ಧನೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳು, ಸ್ಟಾಪ್ ಲಾಗ್ ಎಲಿಮೆಂಟ್‌ಗಳ ಲಭ್ಯತೆ ಬಗ್ಗೆಯೂ ಈ ತಂಡ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಸೆ.೯ ಮತ್ತು ೧೦ರಂದು ಎರಡು ದಿನಗಳವರೆಗೆ ಜಲಾಶಯದಲ್ಲಿ ಈ ಸಮಿತಿ ಪರಿಶೀಲನೆ ನಡೆಸಲಿದೆ. 15 ದಿನದೊಳಗೆ ವರದಿ ನೀಡಲಿದೆ ಎಂದು ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಓ.ಆರ್.ಕೆ.ರೆಡ್ಡಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ