ಕನ್ನಡಪ್ರಭ ವಾರ್ತೆ ಪಾವಗಡ
ಶಾಸಕ ಎಚ್. ವಿ. ವೆಂಕಟೇಶ ಮಾತನಾಡಿ, ಜನತೆಯ ಹೋರಾಟದ ಫಲ ಹಾಗೂ ಮಾಜಿ ಸಚಿವ ವೆಂಕಟರಮಣಪ್ಪ ಹಿಂದಿನ ಸರ್ಕಾರದ ಜೊತೆಗೆ ಚರ್ಚಿಸಿ 2017ರಲ್ಲಿ ಬಯಲು ಸೀಮೆಯ ಬಹುಗ್ರಾಮಗಳ ಕುಡಿಯುವ ನೀರಿಗೆ 2,350 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದರು. ಅದರಂತೆ ಕಾಮಗಾರಿ ನಡೆದು ಜಿಲ್ಲೆಗೆ ನೀರು ಬಂದಿದ್ದು ಜನರಿಗೆ ಸಂತೋಷವಾಗಿದೆ. ಈ ಭಾಗದಲ್ಲಿ ಇದ್ದ ಜೀವಜಲದ ಕೊರತೆಯನ್ನು ತುಂಗಭದ್ರೆ ನಿವಾರಿಸಿದ್ದಾಳೆ ಎಂದರು.
ತಾಲೂಕಿನ ಪ್ರತಿ ಗ್ರಾಮಕ್ಕೂ ಈ ನೀರು ಸರಬರಾಜು ಮಾಡಲಿದ್ದು ಬೃಹತ್ ಟ್ಯಾಂಕ್ಗಳಲ್ಲಿ ನೀರು ಸಂಗ್ರಹಿಸಿ ನಳದ ಮೂಲಕ ನೀರು ಸರಬರಾಜು ಮಾಡಲಿದ್ದೇವೆ. ನೀರು ಪೋಲು ಆಗದಂತೆ ಪೈಪ್ಗಳ ಡ್ಯಾಮೇಜ್ ನಿಯಂತ್ರಿಸುವ ಮೂಲಕ ಹೆಚ್ಚಿನ ಕಾಳಜಿ ವಹಿಸಲಿದ್ದೇವೆ. ಪೈಪ್ಲೈನ್ ಕಾಮಗಾರಿಯ ಪರಿಶೀಲನೆ ನಡೆಯುತ್ತಿದೆ. ಎಲ್ಲಾ ಮುಗಿದ ಬಳಿಕ ಶುದ್ದೀಕರಿಸಿದ ಯೋಗ್ಯ ನೀರನ್ನು ಮನೆ ಮನೆಗೆ ಸರಬರಾಜು ಮಾಡಲಿದ್ದೇವೆ ಎಂದರು.ತುಮಕೂರು ಜಿಲ್ಲೆಯ ಪಾವಗಡ ಸೇರಿದಂತೆ ಚಿತ್ರದುರ್ಗ ಜಿಲ್ಲೆಯ, ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಪರುಶುರಾಮಪುರ ಇತರೆ ಬಹುಗ್ರಾಮಗಳ ಕುಡಿಯುವ ನೀರಿಗೆ ಹೆಚ್ಚು ಸಹಕಾರಿಯಾಗಿದ್ದು ಯೋಜನೆಯ ಅನುಷ್ಠಾನಕ್ಕೆ ಹಣ ನೀಡಿದ ಸಿಎಂಗೆ ಅಭಿನಂದನೆ ಸಲ್ಲಿಸಿದರು.
ಸುದೇಶ್ ಬಾಬು, ಕೆ.ಎಸ್.ಪಾಪಣ್ಣ,ಪಿ.ಎಚ್.ರಾಜೇಶ್, ತೆಂಗಿನಕಾಯಿ ರವಿ, ನಾಗೇಂದ್ರರಾವ್, ಕರಿಯಣ್ಣ, ನರಸಿಂಹರೆಡ್ಡಿ. ಷಾಬಾಬು, ರಿಜ್ವಾನ್, ಹನುಮೇಶ್, ಮದನ್ ರೆಡ್ಡಿ, ಜಿಪಂ ಅಧಿಕಾರಿ ಹನುಮಂತಯ್ಯ, ಬಸವಲಿಂಗಪ್ಪ ಪಾಟೀಲ್ ಇತರರಿದ್ದರು.