ಕಾರವಾರ: ತಾಲೂಕಿನ ಪೋಸ್ಟ ಚೆಂಡಿಯಾ ಬಳಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಮಲಗಿದ್ದ ಎಮ್ಮೆಗಳಿಗೆ ಬುಧವಾರ ಬೆಳಗಿನ ಜಾವ ಕಾರು ಡಿಕ್ಕಿಯಾಗಿ ಎರಡು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಕಾರು ಜಖಂಗೊಂಡಿದೆ.
ಹೆದ್ದಾರಿಯಲ್ಲಿ ಎಲ್ಲೆಂದರಲ್ಲಿ ಜಾನುವಾರುಗಳು ಮಲಗುತ್ತವೆ. ಹೆದ್ದಾರಿಯ ಬಹುತೇಕ ಕಡೆ ಬೀದಿದೀಪ ಇಲ್ಲದ ಕಾರಣ ಕತ್ತಲಲ್ಲಿ ಜಾನುವಾರುಗಳು ಕಾಣದೇ ಹಲವು ಅಪಘಾತ ನಡೆದಿದೆ. ಬಿಡಾಡಿ ದನಗಳನ್ನು ನಿಯಂತ್ರಿಸುವುದರ ಜತೆಗೆ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬೀದಿದೀಪ ಅಳವಡಿಸಲು ಕ್ರಮವಹಿಸುವ ಅಗತ್ಯವಿದೆ.ಕಾಲುಜಾರಿ ನದಿಗೆ ಬಿದ್ದು ಮೀನುಗಾರ ಸಾವು
ಭಟ್ಕಳ: ತಾಲೂಕಿನ ಬೆಳಕೆಯ ನದಿಯಲ್ಲಿ ಬುಧವಾರ ಮೀನಿಗೆ ಬಲೆ ಬೀಸುವ ಸಂದರ್ಭದಲ್ಲಿ ಮೀನುಗಾರನೋರ್ವ ಆಕಸ್ಮಿಕ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.ಬೆಳಕೆ ಮೊಗೇರಕೇರಿ ನಿವಾಸಿ ಮಂಜುನಾಥ ವೆಂಕ್ಟ ಮೊಗೇರ(62) ಮೃತ ಮೀನುಗಾರ. ಬುಧವಾರ ಮಧ್ಯಾಹ್ನ ಮೀನಿಗೆ ಬಲೆ ಬೀಸುವಾಗ ಬಲೆಯು ಕುತ್ತಿಗೆ ಸಿಕ್ಕಿ ಆಕಸ್ಮಿಕವಾಗಿ ಹೊಳೆಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಲೆಗೆ ಹೋಗಬೇಕೆಂಬ ಕಾರಣಕ್ಕೆ ಬಾಲಕ ಆತ್ಮಹತ್ಯೆ?
ಮಟಕಾ ದಂಧೆ ನಡೆಸುತ್ತಿದ್ದ ವ್ಯಕ್ತಿ ಬಂಧನ
ಶಿರಸಿ: ಇಲ್ಲಿನ ಗಣೇಶನಗರದ ಪುಟ್ಟನಮನೆ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಹಾಲಿ ಗಣೇಶನಗರ ಬೇನಕಾ ಕಾಲನಿಯ ನಿವಾಸಿ ಪರಶುರಾಮ ಸಣ್ಣಬಸಪ್ಪ ಬಾರ್ಕಿ(೩೦) ಮೇಲೆ ಪ್ರಕರಣ ದಾಖಲಾಗಿದೆ. ಈತ ತನ್ನ ಲಾಭಕ್ಕೊಸ್ಕರ ಗಣೇಶನಗರದ ಪುಟ್ಟನಮನೆ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಮಟಕಾ ದಂಧೆ ನಡೆಸುತ್ತಿದ್ದ. ನಗರ ಠಾಣೆ ಪಿಎಸ್ಐ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, ₹೧೩೫೦ ನಗದು, ಅಂಕಿಗಳ ಸಂಖ್ಯೆ ಬರೆದ ಚೀಟಿ, ಬಾಲ್ ಪೆನ್ಗಳನ್ನು ವಶಕ್ಕೆ ಪಡೆದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.