ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಅರ್ಚಕರು
ಹುಲಿ ಉಗುರಿನ ಲಾಕೆಟ್ ಹೊಂದಿದ್ದ ಇಬ್ಬರು ಅರ್ಚಕರನ್ನು ಬುಧವಾರ ತಡರಾತ್ರಿ ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿ ಹುಲಿ ಉಗುರಿನ ಲಾಕೆಟ್ ಅನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಅರ್ಚಕರಾದ ನಾಗೇಂದ್ರ ಜೋಯಿಸ್ (72), ಬಿ.ವಿ.ಕೃಷ್ಣಾನಂದ ಹೊಳ್ಳ (41) ಬಂಧಿತ ಆರೋಪಿಗಳು.ನಾಗೇಂದ್ರ ಜೋಯಿಸ್ ಅವರ ಬಳಿ ಹುಲಿ ಉಗುರು ಹೊಂದಿರುವ ಲಾಕೆಟ್ ಇರುವ ಬಗ್ಗೆ ಅಪರಿಚಿತರು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. ಮತ್ತೋರ್ವ ಆರೋಪಿ ಕೃಷ್ಣಾನಂದ ಅವರ ಬಳಿ ಲಾಕೆಟ್ ಇರುವ ಬಗ್ಗೆ ಸ್ಥಳೀಯರೊಬ್ಬರು ಇಲಾಖೆಗೆ ಮಾಹಿತಿ ನೀಡಿದ್ದಾರೆ.
ನಾಗೇಂದ್ರ ಜೋಯಿಸ್ ಬಳಿ 2 ಹುಲಿ ಉಗುರು, ಕೃಷ್ಣಾನಂದ ಬಳಿ 1 ಹುಲಿ ಉಗುರುಗಳು ಪತ್ತೆಯಾಗಿವೆ. ಚಿಕ್ಕಮಗ ಳೂರು ತಾಲೂಕಿನ ಖಾಂಡ್ಯದ ಇತಿಹಾಸ ಪ್ರಸಿದ್ಧ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ಈ ಇಬ್ಬರು ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಬ್ಬರೂ ಅರ್ಚಕರೂ ತಮಗೆ ದೇವಸ್ಥಾನಕ್ಕೆ ಬರುವ ಅಪರಿಚಿತ ಭಕ್ತರು ಉಡುಗೊರೆ ರೂಪದಲ್ಲಿ ನೀಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ ಆರ್ಎಫ್ಓ ಸಂದೀಪ್, ಡಿಆರ್ಎಫ್ಓ ಮಂಜುನಾಥ್ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು ಎಂದು ಎಸಿಎಫ್ ಚೇತನ್ ತಿಳಿಸಿದ್ದಾರೆ.
ಬಾಳೆಹೊನ್ನೂರು ಸಮೀಪದ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಅರ್ಚಕರಾದ ನಾಗೇಂದ್ರ ಜೋಯಿಸ್, ಕೃಷ್ಣಾನಂದ (ಬಿಳಿ ಪಂಚೆ ಉಟ್ಟು ನಿಂತಿರುವವರು) ಹುಲಿ ಉಗುರನ್ನು ಹೊಂದಿರುವ ಆರೋಪದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ೨೬ಬಿಹೆಚ್ಆರ್ ೨: ವಶಪಡಿಸಿಕೊಂಡಿರುವ ಹುಲಿ ಉಗುರು ಹೊಂದಿರುವ ಎರಡು ಲಾಕೆಟ್.