ಅಪರಿಚಿತ ವಾಹನ ಡಿಕ್ಕಿ: ಚಿರತೆಗೆ ಗಾಯ

KannadaprabhaNewsNetwork |  
Published : Apr 24, 2024, 02:18 AM IST
ಹೂವಿನಹಡಗಲಿ ತಾಲೂಕಿನ ಹಗರನೂರು ಸಮೀಪದಲ್ಲಿ ಚಿರತೆ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಾಗ ಗಾಯಗೊಂಡ ಚಿರತೆ ರಸ್ತೆಯಲ್ಲೇ ಮಲಗಿರುವುದು. | Kannada Prabha

ಸಾರಾಂಶ

ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆ ಕೆಲಹೊತ್ತು ರಸ್ತೆಯಲ್ಲೇ ಮಲಗಿತ್ತು. ಇದನ್ನು ನೋಡಿ ವಾಹನ ಸವಾರರು ಗಾಬರಿಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಯ ಹಗರನೂರು ಹತ್ತಿರ ರಸ್ತೆ ದಾಟುತ್ತಿದ್ದ ಚಿರತೆಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ಚಿರತೆಗೆ ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಚಿರತೆ ಕೆಲಹೊತ್ತು ರಸ್ತೆಯಲ್ಲೇ ಮಲಗಿತ್ತು. ಇದನ್ನು ನೋಡಿ ವಾಹನ ಸವಾರರು ಗಾಬರಿಗೊಂಡಿದ್ದರು. ಸಾಕಷ್ಟು ವಾಹನಗಳು ಅಕ್ಕಪಕ್ಕದಲ್ಲೇ ಸಂಚರಿಸಿದರೂ ಅದು ಮೇಲಕ್ಕೆ ಏಳಲಿಲ್ಲ, ನಂತರದಲ್ಲಿ ಸಾರ್ವಜನಿಕರು ಕೂಗಾಡಿ ಕಲ್ಲುಗಳಿಂದ ಹೊಡೆದಾಗ ಚಿರತೆ ಸೇತುವೆ ಕೆಳ ಭಾಗಕ್ಕೆ ತೆರಳಿ ಅವಿತುಕೊಂಡಿತ್ತು.

ನಿಶಕ್ತವಾದ ಚಿರತೆ ಸೇತುವೆಯ ಕೆಳ ಭಾಗದಲ್ಲಿಯೇ ಭಯದಿಂದ ಅಡಗಿ ಕುಳಿತಿರುವ ಸಂದರ್ಭದಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿ ಪರಿಶೀಲನೆ ಮಾಡಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಅಟಲ್‌ ಬಿಹಾರಿ ವಾಜಪೇಯಿ ಪ್ರಾಣಿ ಸಂಗ್ರಾಹಲಯದ ಅಧಿಕಾರಿಗಳನ್ನು ಸಂಪರ್ಕಿಸಿ, ಬಳಿಕ ವೈದ್ಯರು ಅರವಳಿಕೆ ಮದ್ದು ನೀಡಿ ನಂತರದಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಗಾಯಗೊಂಡಿದ್ದ ಹೆಣ್ಣು ಚಿರತೆಯನ್ನು ಪ್ರಾಣಿ ಸಂಗ್ರಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ.ನಾಯಿ ದಾಳಿಗೆ 24 ಕುರಿಮರಿಗಳ ಸಾವು

ಕನ್ನಡಪ್ರಭ ವಾರ್ತೆ ಹೂವಿನಹಡಗಲಿತಾಲೂಕಿನ ಹೊಳಲು ಗ್ರಾಮದ ಹೊರ ವಲಯದಲ್ಲಿ ಕುರಿ ಹಟ್ಟಿಯಲ್ಲಿದ್ದ ಕುರಿಮರಿಗಳ ಮೇಲೆ, ಬೀದಿನಾಯಿಗಳು ದಾಳಿ ಮಾಡಿರುವ ಪರಿಣಾಮ 24 ಕುರಿಮರಿಗಳು ಸಾವನ್ನಪ್ಪಿವೆ. ಹೊಳಲು ಗ್ರಾಮದ ಹಡಗಲಿ ಚಂದ್ರಪ್ಪ, ಹಡಗಲಿ ಸೊರೆಪ್ಪ ಅವರಿಗೆ ಸೇರಿದ್ದ 32 ಕುರಿಮರಿಗಳು, ನಾಗಪ್ಪ ಅವರಿಗೆ ಸೇರಿದ್ದ 10 ಕುರಿಮರಿಗಳ ಸಾವನ್ನಪ್ಪಿವೆ. ಒಟ್ಟಾರೆ 24 ಕುರಿಮರಿಗಳು ಸಾವನ್ನಪ್ಪಿದ್ದು, 7 ಕುರಿಮರಿಗಳು ಗಾಯಗೊಂಡಿವೆ. 12 ಕುರಿಮರಿಗಳು ಕಾಣೆಯಾಗಿವೆ. ಕುರಿಹಟ್ಟಿಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ್ದು, 24 ಕುರಿಮರಿಗಳನ್ನು ಅರೆಬರೆಯಾಗಿ ತಿಂದು ಹಾಕಿವೆ. ಸ್ಥಳಕ್ಕೆ ಉಪ ಅರಣ್ಯಾಧಿಕಾರಿ ರಾಮು ಹಾಗೂ ಪಶು ಸಂಗೋಪನಾ ಇಲಾಖೆ ವೈದ್ಯ ಡಾ.ನಾರಾಯಣ ಬಣಕಾರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''