
ಮಡಿಕೇರಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಶುಕ್ರವಾರ ವಿವಿಧ ಸಂಘ- ಸಂಸ್ಥೆಗಳ ಆಶ್ರಯದಲ್ಲಿ ಕೊಡಗು ಪತ್ರಿಕಾ ಭವನದ ಟಾಟಾ ಕಾಫಿ ಸಭಾಂಗಣದಲ್ಲಿ ಗಾನ ಕೋಗಿಲೆ ದಿವಂಗತ ಎಸ್. ಜಾನಕಿ ಅಮ್ಮ ಅವರಿಗೆ ಗಾನ ನಮನ ನೆರವೇರಿತು.
ಉದ್ಘಾಟಿಸಿ ದಿ. ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಗಾಯಕರೂ ಆದ ‘ಶಕ್ತಿ’ ದಿನಪತ್ರಿಕೆ ಸಂಪಾದಕ ಜಿ. ಚಿದ್ದಿಲಾಸ್ ಮಾತನಾಡಿ, ‘ದಕ್ಷಿಣ ಭಾರತದ ಕೋಗಿಲೆ’ ಎಂದೇ ಖ್ಯಾತಿ ಪಡೆದಿರುವ ಎಸ್. ಜಾನಕಿ ಅವರು ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದ ಜಾನಕಿ ಅವರ ಅಗಲಿಕೆ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್, ದಕ್ಷಿಣ ಭಾರತದ ಕೋಗಿಲೆ ಎಂದೇ ಖ್ಯಾತಿ ಪಡೆದಿರುವ ಜಾನಕಿ ಅವರು, ಆರು ದಶಕಗಳಿಗೂ ಹೆಚ್ಚು ಕಾಲ ತಮ್ಮ ಅಪರೂಪದ ಕಂಠಸಿರಿಯಿಂದ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ್ದರು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರು, ಜಾನಕಿ ಅವರಿಗೆ ನುಡಿ ನಮನ ಸಲ್ಲಿಸುವ ಉದ್ದೇಶದಿಂದ ಅವರ ಹೆಸರಿನಲ್ಲಿ ಆಯೋಜಿಸಿರುವ ಗೀತ ನಮನ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಗಾಯಕರು ಜಾನಕಿ ಅವರ ಹಾಡುಗಳನ್ನು ಹಾಡಿ ಸಂಗೀತಪ್ರಿಯರನ್ನು ರಂಜಿಸಿದ್ದಾರೆ ಎಂದರು.ಕಡ್ಲೇರ ತುಳಸಿ ಮೋಹನ್ , ಎಸ್. ಜಾನಕಿ ಅವರಿಗೆ ಪುಷ್ಪ ನಮನ ಗೀತೆ ಹಾಡಿದರು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ , ಗಾಯಕರಿಗೆ ಪ್ರಶಂಸನಾ ಪತ್ರ ವಿತರಿಸಿದರು.
ರಂಜಿತ್ ಕವಲಪಾರ ನಿರ್ವಹಿಸಿದರು. ಕೆ. ತಿಮ್ಮಪ್ಪ ಸ್ವಾಗತಿಸಿದರು. ರೇವತಿ ರಮೇಶ್ ವಂದಿಸಿದರು.
ಗಮನ ಸೆಳೆದ ಗಾನಸುಧೆ: ಡಾ. ಕಾವೇರಿ ಪ್ರಕಾಶ್, ಅಂಬೇಕಲ್ ನವೀನ್, ಕಡ್ಲೇರ ತುಳಸಿ ಮೋಹನ್, ಭಾರತಿ ರಮೇಶ್, ಸುಜಾತ ಗುರುಪ್ರಸಾದ್, ತನುಶ್ರೀ, ಗೀತಾ ಸಂಪತ್, ಡಿಂಪಲ್ ಹೊನ್ನಪ್ಪ ಸಿದ್ದಾಪುರ, ಶ್ವೇತಾ ರವೀಂದ್ರ, ಕುಶಾಲನಗರದ ಸೂದನ ಗೋಪಾಲ, ಅಂಬಿಕಾ ರಾವ್, ಕೆ.ವಿ. ಉಮೇಶ್, ಬಿ.ಎಸ್. ಪರಮೇಶ್, ಸಪ್ನ ಮಧುಕರ್ ಶೇಟ್, ಮಂದ್ರಿರ ಸುಗೀತ ಹೊಸಕೇರಿ, ಬಿ.ಜಿ. ಅನಂತ ಶಯನ, ಎಚ್. ಎಸ್. ರಶ್ಮಿ ಹೊದವಾಡ, ಹೇಮಾ ಅಜಿತ್, ಪಂಚಮಿ ಬಿ.ಬಿ., ಡಿ.ಎಂ. ಶಿವರಂಜಿನಿ ಮತ್ತು ಪಿ.ಎಂ. ಮೇಘನಾ , ಮೇಘಾ ಸುಜಯ್, ಟಿ.ಎಸ್. ಗಾಯತ್ರಿ, ಮೇಘಾ ಸುಜಯ್ ಎಚ್. ಎಸ್. ಲೋಕೇಶ್ ಮತ್ತು ಚಂಗಪ್ಪ, ಪ್ರೇಮ ರಾಘವಯ್ಯ ಚೊಕ್ಕಾಡಿ, ಕೇಕಡ ಇಂದುಮತಿ ರವೀಂದ್ರ, ಇನ್ಸ್ಪೆಕ್ಟರ್ ಚಂದ್ರಶೇಖರ್,