ಕನ್ನಡಪ್ರಭ ವಾರ್ತೆ ಮಂಡ್ಯ
ಜಾತ್ರಾ ಮಹೋತ್ಸವಕ್ಕಾಗಿ ಶ್ರೀ ಉರುಮಾರಮ್ಮ ಮತ್ತು ಶ್ರೀಮಹಾದೇವಮ್ಮ ದೇವಸ್ಥಾನ ಸೇವಾ ಸಮಿತಿ ಮತ್ತು ಯಜಮಾನರು, ಮುಖಂಡರು, ಗ್ರಾಮಸ್ಥರು ಒಕ್ಕಲು ತನಕ್ಕೆ ಸೇರಿದ ಗ್ರಾಮಸ್ಥರು, ಆರ್ಥಿಕ ಸಹಾಯ ಮಾಡಿದ ಗ್ರಾಮಗಳ ಜನರ ಸಹಕಾರದಲ್ಲಿ ಸಕಲ ಸಿದ್ಧತೆ ಕೈಗೊಂಡಿದ್ದಾರೆ.
ಎರಡು ದಿನಗಳ ಜಾತ್ರೆಗೆ ಸಹಸ್ರಾರು ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ದೇಗುಲ ಮತ್ತು ಗ್ರಾಮದ ಸುತ್ತಾಮುತ್ತ ವಿಶೇಷ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ.ಏ.22 ರಂದು ಸಂಜೆ 4.30ಕ್ಕೆ ಜೋಡಿ ಎತ್ತುಗಳ ಬಂಡಿ ಉತ್ಸವ ಉದ್ಘಾಟನೆ, 5.30ಕ್ಕೆ ಪುರ ಗ್ರಾಮದ ಜೋಡಿ ಬಸವೇಶ್ವರ ಪೂಜಾ ಕುಣಿತ ಸಮೇತ ಬಸಪ್ಪ ಹಾಗೂ ಸೂಗನಹಳ್ಳಿ ಬಸಪ್ಪ ಆಗಮನ, ನಂತರ 6.30ಕ್ಕೆ ಶ್ರೀ ಉರಮಾರಮ್ಮ ಪೂಜೆ, ಶ್ರೀ ಮಹಾದೇವಮ್ಮನ ಕರಗ ಹಾಗೂ ಶ್ರೀ ಬಸವೇಶ್ವರ ಪೂಜೆ, ಶ್ರೀ ಹಂಚಿದೇಮ್ಮನ ಹೆಬ್ಬಾರೆ, ವೆಂಕಟೇಶ್ವರನ ಖಣಜ ಮೆರವಣಿಗೆ ನಡೆಯಲಿದೆ.
ಮೇ 6 ಮತ್ತು 7 ರಂದು 39 ನೇ ವರ್ಷದ ದಿಂಡಿ ಮಹೋತ್ಸವ
ನಗರದ ಶ್ರೀಪಾಂಡುರಂಗ ಸ್ವಾಮಿ ದೇವಸ್ಥಾನದ 39ನೇ ವರ್ಷದ ದಿಂಡಿ ಮಹೋತ್ಸವ ಮೇ 6 ಮತ್ತು 7 ರಂದು ನಡೆಯಲಿದೆ.
ಮೇ 7 ರಂದು ಮುಂಜಾನೆ 5.30 ಗಂಟೆಗೆ ಕಾಕಡಾರತಿ, ಬೆಳಗ್ಗೆ 9 ರಿಂದ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀಪಾಂಡುರಂಗ ಸ್ವಾಮಿ ದೇವತಾ ಮೂರ್ತಿಗಳ ದಿಂಡಿ ಉತ್ಸವದ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ, ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದಲ್ಲಿ ಪಂಡರಿ ಭಜನೆ, ಮಧ್ಯಾಹ್ನ 1 ಗಂಟೆಗೆ ಪುಷ್ಪವೃಷ್ಟಿ ಮಹಾಮಂಗಳಾರತಿ ಜರುಗಲಿದೆ.
ಈ ವೇಳೆ ನಾಗವೇಣಿ ಕಾಕಡೆ, ಎಂ.ಆರ್. ತೇಜಸ್ ಕಾಕಡೆ (ಸುನಿಲ್), ರೂಪ ಪರಶುರಾಮ್ ಮಹೇಂದ್ರಕರ್, ಕೆ.ಎಸ್. ರಜನಿಕಾಂತ್ ಖಾಟೋಕರ್, ನಾಗೇಶ್ ನಾಝರೆ, ನಾಗರಾಜ್ ಬಾಸುತ್ಕರ್ ಹಾಜರಿದ್ದು, ಸಮಾಜದ ನಿರ್ದೇಶಕರಾದ ಎನ್. ನಾಮದೇವ ರಾವ್ ರೇಳೆಕರ್, ಬಿ.ಎಸ್. ನಾಗರಾಜ ಬಗರೆ, ಬಿ.ಡಿ. ರವಿ, ಶಶಿಕುಮಾರ್ ಖಾಟೋಕರ್, ನಾಗೇಂದ್ರ ಕುಮಾರ್ ರೇಳೆಕರ್, ಎಸ್. ವಿನಯ್ ಘನಾತೆ, ಕೆ.ಕೆ. ಲಕ್ಷಣ್ ರಾವ್ ಕಲೋಸೆ, ಕೆ. ಪ್ರಕಾಶ್ ಬಗರೆ, ಆರ್. ಉಮೇಶ್ ರಾವ್ ರೇಳೆಕರ್ ಪಾಲ್ಗೊಳ್ಳಲಿದ್ದಾರೆ.