ರಸಗೊಬ್ಬರಗಳ ಗುಣಮಟ್ಟ ಖಾತ್ರಿ ನಂತರವೇ ಬಳಕೆ ಮಾಡಿ: ಶಿವಪ್ರಸಾದ್

KannadaprabhaNewsNetwork |  
Published : May 30, 2025, 12:28 AM IST
ುಪ | Kannada Prabha

ಸಾರಾಂಶ

ಶೃಂಗೇರಿ, ರೈತರು ರಸಗೊಬ್ಬರ, ಕೀಟನಾಶಕಗಳನ್ನು ಗುಣಮಟ್ಟ ಖಾತ್ರಿ ನಂತರವೇ ಬಳಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಎನ್.ವಿ.ಶಿವಪ್ರಸಾದ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ರೈತರು ರಸಗೊಬ್ಬರ, ಕೀಟನಾಶಕಗಳನ್ನು ಗುಣಮಟ್ಟ ಖಾತ್ರಿ ನಂತರವೇ ಬಳಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಎನ್.ವಿ.ಶಿವಪ್ರಸಾದ್ ಸಲಹೆ ನೀಡಿದರು.

ಪಟ್ಟಣದ ಕೃಷಿ ಇಲಾಖೆಯಲ್ಲಿ ಆಯೋಜಿಸಲಾಗಿದ್ದ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಸಭೆಯಲ್ಲಿ ಮಾಹಿತಿ ನೀಡಿದರು. ಮಾರಾಟಗಾರರು ಗುಣಮಟ್ಟದ ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡಬೇಕು. ಕಳಪೆ ಗುಣ ಮಟ್ಟದ ರಸಗೊಬ್ಬರವಾಗಲೀ, ಕೀಟನಾಶಕಗಳನ್ನಾಗಲೀ ಮಾರಾಟ ಮಾಡಬಾರದು. ಎಂ ಆರ್ ಪಿ ದರದಲ್ಲಿಯೇ ಮಾರಾಟ ಮಾಡಬೇಕು. ಎಂಆರ್ ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಡಿಎಪಿ ಗೊಬ್ಬರದ ದಾಸ್ತಾನು ಕೊರತೆಯಿದೆ.ಇದಕ್ಕೆ ಪರ್ಯಾಯವಾದ ರಸಗೊಬ್ಬರ ಇದ್ದು, ಅದನ್ನು ಬಳಸಬೇಕು.ಅನದಿಕೃತ ಕಂಪೆನಿಗಳ ಗೊಬ್ಬರ, ಕೀಟನಾಶಕಗಳನ್ನು ಬಳಸಬಾರದು. ರೈತರು ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಮಾರಾಟಗಾರರು ಹೆಚ್ಚಿನ ಮುನ್ನೆಚ್ಚೆರಿಕೆ ವಹಿಸಬೇಕು ಎಂದರು.

ಕೃಷಿಕ ಸಮಾಜದ ಕೆ.ಎನ್.ಗೋಪಾಲ ಹೆಗ್ಡೆ ಮಾತನಾಡಿ ಮೈಲುತುತ್ತ ಸೇರಿದಂತೆ ಯಾವುದೇ ವಸ್ತುವನ್ನು ಪಡೆದುಕೊಳ್ಳುವ ಮೊದಲು ರೈತರು ಮುನ್ನೆಚ್ಚರಿಕೆ ವಹಿಸಬೇಕು.ಇಲಾಖೆ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಎಂದರು. ಸಭೆಯಲ್ಲಿ ವೆಂಕಟೇಶ್, ಶ್ರೀಧರ್ ರಾವ್ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

29 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಕೃಷಿ ಇಲಾಖೆಯಲ್ಲಿ ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!