ಸಮಾಜ ತಿದ್ದಲು ವಚನ ಸಾಹಿತ್ಯ ಕೈಗನ್ನಡಿ: ಡಾ.ಅನಿತಾ

KannadaprabhaNewsNetwork |  
Published : Mar 27, 2024, 01:00 AM ISTUpdated : Mar 27, 2024, 01:01 AM IST
ಕ್ಯಾಪ್ಷನಃ26ಕೆಡಿವಿಜಿ32ಃದಾವಣಗೆರೆ ತಾ. ಕಸಾಪದಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಅನಿತಾ ಎಚ್. ದೊಡ್ಡಗೌಡರ್, ಇತರರು ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಪಂಚದ ಅತ್ಯದ್ಭುತಗಳಲ್ಲಿ ಒಂದಾದ ‘ವಚನ ಸಾಹಿತ್ಯ’ವು ಮನಸ್ಸಿನ, ಸಮಾಜದ ಅಂಕುಡೊಂಕುಗಳ ತಿದ್ದುವುದಕ್ಕೆ ಕೈಗನ್ನಡಿಯಾಗಿವೆ. ಇತಿಹಾಸ ಸಂಶೋಧಕರು, ನಾಟಕ ರಚನೆಕಾರರು, ಹಾಡು ಕಟ್ಟುವವರು, ಸಮಾಜ ಸುಧಾರಕರು, ಅಧ್ಯಾತ್ಮ ಸಾಧಕರು ಹಾಗೂ ಲೋಕದ ಅನುಭವ ಬಯಸುವವರಿಗೆ ವಚನ ಸಾಹಿತ್ಯ ಸ್ಫೂರ್ತಿಯಾಗಿವೆ ಎಂದು ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಎಚ್. ದೊಡ್ಡಗೌಡರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ ಪ್ರಪಂಚದ ಅತ್ಯದ್ಭುತಗಳಲ್ಲಿ ಒಂದಾದ ‘ವಚನ ಸಾಹಿತ್ಯ’ವು ಮನಸ್ಸಿನ, ಸಮಾಜದ ಅಂಕುಡೊಂಕುಗಳ ತಿದ್ದುವುದಕ್ಕೆ ಕೈಗನ್ನಡಿಯಾಗಿವೆ. ಇತಿಹಾಸ ಸಂಶೋಧಕರು, ನಾಟಕ ರಚನೆಕಾರರು, ಹಾಡು ಕಟ್ಟುವವರು, ಸಮಾಜ ಸುಧಾರಕರು, ಅಧ್ಯಾತ್ಮ ಸಾಧಕರು ಹಾಗೂ ಲೋಕದ ಅನುಭವ ಬಯಸುವವರಿಗೆ ವಚನ ಸಾಹಿತ್ಯ ಸ್ಫೂರ್ತಿಯಾಗಿವೆ ಎಂದು ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಎಚ್. ದೊಡ್ಡಗೌಡರ್ ಹೇಳಿದರು.

ನಗರದ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಶಾಲಾ- ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವ ಅಂಗವಾಗಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ, "ವಚನ ಚಳವಳಿಯಲ್ಲಿ ಮಹಿಳಾ ಅಸ್ಮಿತೆ " ವಿಷಯದ ಕುರಿತು ಅವರು ಮಾತನಾಡಿದರು.

ಅಕ್ಕ ಮಹಾದೇವಿ ಲೌಕಿಕ ಸುಖಭೋಗಗಳನ್ನು ತೊರೆದು, ವಚನಗಳ ಮೂಲಕ ಅಸ್ಮಿತೆ ಉಳಿಸಿಕೊಂಡು, ಶರಣೆಯರ ಕಣ್ಮಣಿ ಎನಿಸಿದ್ದಾರೆ. ಲಂಚವಂಚನೆಗೆ ಕೈಯೊಡ್ಡಲ್ಲ, ದಾರಿಯಲ್ಲಿ ಬಿದ್ದ ಅನ್ಯರ ಒಡವೆ- ವಸ್ತು ಮುಟ್ಟಲ್ಲ ಎಂದು ತನಗೆ ತಾನೇ ನಿರ್ಬಂಧ ಹಾಕಿಕೊಂಡ ಸತ್ಯಸಾಧಕಿ ಶರಣೆ ಸತ್ಯಕ್ಕ, ಕಾಯಕವೇ ಮೇಲೆಂದು ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು ಆಯ್ದಕ್ಕಿ ಲಕ್ಕಮ್ಮ, ವಿಶಾಲ ಮನೋಭಾವನೆ, ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯುಳ್ಳ ಮುಕ್ತಾಯಕ್ಕ, ಕಾಯದ ಪ್ರಾಣದ ಪ್ರಸಾದವ ಇಹಪರದ ಹಂಗು ನಮಗಿಲ್ಲ ಎಂದು ನುಡಿದ ಶರಣೆ ನೀಲಾಂಬಿಕೆಯನ್ನು ಅವರ ವಚನಗಳ ಮೂಲಕ ಸ್ಮರಿಸಿದರು.

ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಮಾತನಾಡಿ, ಹೆಣ್ಣು ಬಾಹ್ಯ ಸೌಂದರ್ಯಕ್ಕಷ್ಟೇ ಬೆಲೆ ಕೊಡದೇ, ಆಂತರಿಕ ಸೌಂದರ್ಯವನ್ನೂ ಬೆಳೆಸಿಕೊಳ್ಳಬೇಕು. ತಾನೂ ಬೆಳೆದು, ಕುಟುಂಬ ಹಾಗೂ ಸಮಾಜವನ್ನು ನೈತಿಕ ನೆಲೆಗಟ್ಟಿನಲ್ಲಿ ನಿಲ್ಲಿಸುವುದು ಅವಳ ಮಹತ್ವದ ಜವಾಬ್ದಾರಿಯಾಗಿದೆ. ಮಹಿಳೆ ಎಂತಹ ಮಹತ್ವದ ಸ್ಥಾನ ಅಲಂಕರಿಸಿದ್ದರೂ ತಾನೊಂದು ಹೆಣ್ಣೆಂಬುದನ್ನು ಎಂದೂ ಮರೆಯಬಾರದು. ತನ್ನ ಹೆಣ್ತನದ ಮೂಲಬೇರುಗಳಲ್ಲಿ ಅಡಗಿರುವ ಅಕ್ಕರೆಯ ಅನುಭೂತಿ ಮಾಸಲು ಎಂದೂ ಬಿಡಬಾರದು ಎಂದು ತಿಳಿಸಿದರು.

ಎಂ.ಎಂ. ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಕೆ.ಟಿ.ನಾಗರಾಜ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಸಾಪ ನಿರ್ದೇಶಕರಾದ ಷಡಕ್ಷರಪ್ಪ ಎಂ. ಬೇತೂರು, ಪರಿಮಳ ಜಗದೀಶ, ಮಮತಾ ರುದ್ರಮುನಿ, ಶಿಕ್ಷಣ ಮಹಾವಿದ್ಯಾಲಯದ ಅಧ್ಯಾಪಕರು, ಪ್ರಶಿಕ್ಷಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾವನಾ ಪ್ರಾರ್ಥಿಸಿದರು. ಕೆ.ಟಿ.ಲತಾ ಸ್ವಾಗತಿಸಿ, ಟಿ.ಎಸ್.ಸಿಂಧು ಕಾರ್ಯಕ್ರಮ ನಿರೂಪಿಸಿದರು. ಎಂ.ಪೂಜಾ ವಂದಿಸಿದರು.

- - - -26ಕೆಡಿವಿಜಿ32ಃ

ದಾವಣಗೆರೆ ತಾಲೂಕು ಕ.ಸಾ.ಪ.ದಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಾ.ಅನಿತಾ ಎಚ್. ದೊಡ್ಡಗೌಡರ್ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌