ವಚನಗಾರ್ತಿ ಅಕ್ಕಮಹಾದೇವಿ ಇಂದಿನ ಸಮಾಜಕ್ಕೂ ಆದರ್ಶಪ್ರಾಯರು

KannadaprabhaNewsNetwork |  
Published : Apr 04, 2026, 01:45 AM IST
ಪೊಟೊ-2ಕೆಎನ್‌ಎಲ್‌ಎಮ್‌1-ನೆಲಮಂಗಲದ ತಾಲೂಕು ಕಚೇರಿ ಆವರಣದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಣೆ ಮಾಡಲಾಯಿತು. ಶಾಸಕ ಎನ್.ಶ್ರೀನಿವಾಸ್, ತಹಸೀಲ್ದಾರ್ ಮಲ್ಲೇಶ್.ಬಿ.ಪೂಜಾರ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನೆಲಮಂಗಲ: ಅಕ್ಕಮಹಾದೇವಿಯನ್ನು ಶರಣ ಚಳವಳಿಗಾರ್ತಿಯಾ, ಸ್ವಾಭಿಮಾನದ ಪ್ರತೀಕವಾಗಿ, ಅಕ್ಕರೆಯ ಅಕ್ಕನಾಗಿ, ಶಿವಶರಣೆ ಅಕ್ಕಮಹಾದೇವಿಯ ವಚನಗಳ ಸಂದೇಶ ಸರ್ವಕಾಲಿಕವಾಗಿ ಸರ್ವಧರ್ಮಕ್ಕೂ ಅನ್ವಯಿಸಲ್ಪಡುತ್ತವೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು

ನೆಲಮಂಗಲ: ಅಕ್ಕಮಹಾದೇವಿಯನ್ನು ಶರಣ ಚಳವಳಿಗಾರ್ತಿಯಾ, ಸ್ವಾಭಿಮಾನದ ಪ್ರತೀಕವಾಗಿ, ಅಕ್ಕರೆಯ ಅಕ್ಕನಾಗಿ, ಶಿವಶರಣೆ ಅಕ್ಕಮಹಾದೇವಿಯ ವಚನಗಳ ಸಂದೇಶ ಸರ್ವಕಾಲಿಕವಾಗಿ ಸರ್ವಧರ್ಮಕ್ಕೂ ಅನ್ವಯಿಸಲ್ಪಡುತ್ತವೆ ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕ ಮಹಿಳೆಯರಿಗೆ ಅಕ್ಕಮಹಾದೇವಿ ಅವರ ಜೀವನ ಆದರ್ಶವಾಗಬೇಕು. ಬಸವಾದಿಶರಣದ ಜೀವನಾದರ್ಶಗಳನ್ನು ಮೈಗೂಡಿಸಿಕೊಂಡು ನಡೆದಲ್ಲಿ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗಲಿದೆ. ನಗರದ ಬಸವಣ್ಣ ದೇವರಮಠದಲ್ಲಿ ಅದ್ದೂರಿಯಾಗಿ ಬಸವೇಶ್ವರದ ಜಯಂತಿ ಆಚರಣೆ ಮಾಡುವುದರಿಂದ ಸಾಂಕೇತಿಕವಾಗಿ ತಾಲೂಕು ಕಚೇರಿಯಲ್ಲಿ ಆಚರಿಸಲಾಗುವುದು ಎಂದರು.

ಜಯಂತಿ ಪ್ರಯುಕ್ತ ಅಕ್ಕಮಹಾದೇವಿ ಭಾವಚಿತ್ರಕ್ಕೆ ಶಾಸಕರು ವಿಶೇಷ ಪೂಜೆ ಪುಸ್ಪನಮನ ಸಲ್ಲಿಸಿದರು. ತಹಸೀಲ್ದಾರ್ ಮ್ಲಲೇಶ್‌ ಬಿ.ಪೂಜಪ್ಪ, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಮಾಜಿ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು, ಮಾಜಿ ನಾಮನಿರ್ದೇಶಿತ ಸದಸ್ಯ ವಸಂತ್‌.ಕೆ, ವೀರಶೈವ ಮಹಾಸಭಾ ಮಹಿಳಾ ಘಟಕ ರಾಜ್ಯ ಕಾರ್ಯದರ್ಶೀ ರಾಜಮ್ಮ, ಗ್ರಾಮಾಂತರ ಜಿಲ್ಲಾಧ್ಯಕ್ಷ ರೇವಣಸಿದ್ಧಯ್ಯ, ತಾಲೂಕು ಅಧ್ಯಕ್ಷ ಎನ್.ರಾಜಶೇಖರ್, ಮಹಿಳಾಧ್ಯಕ್ಷೆ ವೇದಾವತಿ , ಬಸವ ಪುತ್ಥಳಿ ಸಮಿತಿ ಉಪಾಧ್ಯಕ್ಷ ಜಗದೀಶ್, ರಾಜ್ಹಾಯ ಯುವ ಘಟಕದಕಾರ್ಯದರ್ಶಿ ಆರ್‌.ಕೊಟ್ರೇಶ್‌ ಇತರರಿದ್ದರು.

ಪೊಟೊ-2ಕೆಎನ್‌ಎಲ್‌ಎಮ್‌1-

ನೆಲಮಂಗಲದ ತಾಲೂಕು ಕಚೇರಿಯಲ್ಲಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸ್, ತಹಸೀಲ್ದಾರ್ ಮಲ್ಲೇಶ್‌ ಬಿ.ಪೂಜಾರ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪ್ರದಾಯ ತಿರಸ್ಕರಿಸದಿದ್ರೆ ಪ್ರಗತಿಶೀಲತೆ ಪ್ರಬಲವಾಗದು
ಸೋಮಾರಿಗಳಾಗದೆ ಕ್ರಿಯಾಶೀಲರಾಗಲಿ