ಕನ್ನಡಪ್ರಭ ವಾರ್ತೆ ಮದ್ದೂರು
ದೇಗುಲದಲ್ಲಿ ಶುಕ್ರವಾರ ಪುಣ್ಯಾಹ ಗಣಪತಿ ಪೂಜೆ, ಕಲಸರಾಧನೆ, ನವಗ್ರಹ ಹೋಮ ಮಹಾ ಮಂಗಳಾರತಿ ಜರುಗಿತು. ಶನಿವಾರ ಸ್ವಾಮಿರವರಿಗೆ ಅಭಿಷೇಕ ಬೆಳ್ಳಿ ಕವಚದಾರಣೆ ಮತ್ತು ಸಾಯಂಕಾಲ ಗ್ರಾಮದ ಹೆಂಗೆಳೆಯರಿಂದ ಮೀಸಲು ನೀರು ತರುವುದು ರಾತ್ರಿ ಗಿಂಡಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಂಡ ಗ್ರಾಮದ ಬೀದಿಗಳಲ್ಲಿ ತಳಿರು ತೋರಣಗಳು ರಾರಾಜಿಸುತ್ತಿದ್ದವು. ಪ್ರಮುಖ ಬೀದಿಗಳಲ್ಲಿ ಸ್ವಾಮಿಯವರ ಬೆಳ್ಳಿ ರಥದ ಪಲ್ಲಕ್ಕಿ ಉತ್ಸವವು. ಮನೆಗಳಲ್ಲಿ ಪೂಜೆ ಸಲ್ಲಿಸಿದರು.ಭಾನುವಾರ ಬೆಳಗ್ಗೆ ಬ್ರಹ್ಮ ರಥೋತ್ಸವ ಪೂಜಾ ಕುಣಿತ ವೀರಗಾಸೆ ಮತ್ತು ಜಾನಪದ ಕಲಾ ತಂಡಗಳ ಪ್ರದರ್ಶನ ಜರುಗಿತು.
ಈ ವೇಳೆ ಪ್ರಧಾನ ಅರ್ಚಕ ವಿ.ಎಂ.ಶ್ರೀನಿವಾಸು ಪೂಜಾ ವಿಧಿ ವಿಧಾನ ಕೈಂಕರ್ಯಗಳನ್ನು ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಠದದೊಡ್ಡಿ ಗ್ರಾಮದ ಬಳಿಯ ಶ್ರೀಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮ ದೇವತೆಗಳಾದ ಶ್ರೀಪಟ್ಟಲದಮ್ಮ ಶ್ರೀಮಾರಮ್ಮ, ಶ್ರೀ ಲಕ್ಷ್ಮಿದೇವಿ ಹಾಗೂ ಹರಿಗೆಗಳ ಪೂಜಾ ಕೈಂಕರ್ಯ, ಹೂ, ಹೊಂಬಾಳೆ ಮೂಲಕ ತೊರೆಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಹರಿಗೆ ದೇವರ ಉತ್ಸವ ನಡೆಸಿ ಗ್ರಾಮ ದೇವತೆಗೆ ಮಹಾ ಮಂಗಳಾರತಿ ನಡೆಸಿದರು.
ಮಧ್ಯಾಹ್ನ ವೇಳೆಗೆ ದೇವಾಲಯದ ಆವರಣದಲ್ಲಿ ಅನ್ನಸಂತರ್ಪಣೆ (ಮಾಂಸಾಹಾರಿ) ನಡೆಸಿದರು. ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.