ಮಧ್ಯಸ್ಥಿಕೆ ವಕೀಲರ ತರಬೇತಿ ಕಾರ್ಯಕ್ರಮ ಸಮಾರೋಪ

KannadaprabhaNewsNetwork |  
Published : Jul 27, 2026, 01:45 AM IST
26ಕೆಎಂಎನ್‌ಡಿ-10ಮಂಡ್ಯದ ಮಧ್ಯಸ್ಥಗಾರ ಕೇಂದ್ರದಲ್ಲಿ 40 ದಿನಗಳ ಕಾಲ ನಡೆದ ಮೂರು ಜಿಲ್ಲೆಗಳ ಮಧ್ಯಸ್ಥಿಕೆ ವಕೀಲರ ತರಬೇತಿ ಕಾರ್ಯಕ್ರಮ ಸಮಾರೋಪಗೊಂಡಿತು. | Kannada Prabha

ಸಾರಾಂಶ

ಕಕ್ಷಿದಾರರು ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆ ಕೇಂದ್ರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಮಧ್ಯಸ್ಥಿಕೆಯಲ್ಲಿ ತಲುಪುವ ಇತ್ಯರ್ಥವು ಕಾನೂನಿನಲ್ಲಿ ಮಾನ್ಯವಾಗಿರುತ್ತದೆ ಮತ್ತು ಬದ್ಧವಾಗಿರುತ್ತದೆ. ಕೌಟುಂಬಿಕ ಕಲಹ, ಸಿವಿಲ್ ವ್ಯಾಜ್ಯರ ಚೆಕ್ ಬೌನ್ಸ್ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಮಂಡ್ಯ ನಗರದ ಮಧ್ಯಸ್ಥಿಕೆ ಕೇಂದ್ರದಲ್ಲಿ 40 ಗಂಟೆಗಳ ಐದು ದಿವಸಗಳ ಮಧ್ಯಸ್ಥಿಕೆ ವಕೀಲರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜೆ.ಎನ್. ಸುಬ್ರಹ್ಮಣ್ಯ ಮಾತನಾಡಿ, ಐದು ದಿನಗಳ ನಿರಂತರ ಮಧ್ಯಸ್ಥಗಾರರ ತರಬೇತಿ ಯಶಸ್ವಿಗೊಂಡಿದ್ದು, ಕಕ್ಷಿದಾರರು ಮಧ್ಯಸ್ಥಿಕೆ ಮತ್ತು ಮಧ್ಯಸ್ಥಿಕೆ ಕೇಂದ್ರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಮಧ್ಯಸ್ಥಿಕೆಯಲ್ಲಿ ತಲುಪುವ ಇತ್ಯರ್ಥವು ಕಾನೂನಿನಲ್ಲಿ ಮಾನ್ಯವಾಗಿರುತ್ತದೆ ಮತ್ತು ಬದ್ಧವಾಗಿರುತ್ತದೆ. ಕೌಟುಂಬಿಕ ಕಲಹ, ಸಿವಿಲ್ ವ್ಯಾಜ್ಯರ ಚೆಕ್ ಬೌನ್ಸ್ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದರು,

ಮಧ್ಯಸ್ಥಿಕೆ ತರಬೇತುದಾರರಾದ ಗೀತಾದೇವಿ ಮಾತನಾಡಿ, ಸುಮಾರು ಐವತ್ತು ನೂತನ ಮಧ್ಯಸ್ಥ ಗಾರರು ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಯಿಂದ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಎಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದರು. ನಿರಂತರವಾಗಿ ಮಧ್ಯಸ್ಥಿಕೆ ಸೇವೆಯನ್ನು ಮುಂದುವರಿಸುವಂತೆ ಮನವಿ ಮಾಡಿದರು.

ಹಿರಿಯ ವಕೀಲ ಎಂ.ಗುರುಪ್ರಸಾದ್ ಮಾತನಾಡಿ, ಐದು ದಿವಸ 40 ಗಂಟೆಗಳ ಕಾಲ ನಿರಂತರವಾಗಿ ಪಕ್ಷಗಾರರ ಸಮಸ್ಯೆ ಮತ್ತು ವಾಸ್ತವಾಂಶವನ್ನು ಅರಿಯುವುದು. ಅವರಿಗೆ ಅನುಕೂಲವಾಗುವಂತೆ ವ್ಯಾಜ್ಯಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವುದು. ಯಾರ ಮನಸ್ಸಿಗೂ ನೋವಾಗದ ರೀತಿಯಲ್ಲಿ ಸಮಸ್ಯೆಗಳನ್ನು ಪರಿಹರಿಸುವುದು ಮಧ್ಯಸ್ಥಗಾರರ ಉದ್ದೇಶವಾಗಿದೆ. ಉತ್ತಮ ಮಧ್ಯಸ್ಥ ಗಾರರು ನಮ್ಮಗಳಿಗೆ ಮಧ್ಯಸ್ಥಿಕೆಯ ಅರಿವು ಮತ್ತು ತರಬೇತಿ ನೀಡಿದ್ದು ಇದು ಅತ್ಯಂತ ಸಹಕಾರಿಯಾಗಿದೆ ಎಂದರು ಎಲ್ಲಾ ವಕೀಲರು ತರಬೇತಿಯಲ್ಲಿ ಭಾಗವಹಿಸಿ ಸಹಕರಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಕೀಲರಾದ ನಾಗರಾಜು, ಸೇರಿದಂತೆ ರಾಮನಗರ ಜಿಲ್ಲೆ, ಹಾಸನ ಜಿಲ್ಲೆಯ ನೂತನ ಮಧ್ಯಸ್ಥ ಗಾರರು ತರಬೇತಿಯ ಕುರಿತು ಅಭಿಪ್ರಾಯ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ.3ರಂದು ಸಂಕಲ್ಪ-2 ಸ್ಪರ್ಧಾತ್ಮಕ ತರಬೇತಿಗೆ ಪ್ರವೇಶ ಪರೀಕ್ಷೆ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹೋರಾಟದಲ್ಲಿ ಕೈ ಪ್ರಮುಖ ಪಾತ್ರ - ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಹೇಳಿಕೆ