ವಾಲ್ಮೀಕಿ ಮುಖಂಡರಿಂದ ಸಿಎಂಗೆ ಘೇರಾವ್ ಎಚ್ಚರಿಕೆ !

KannadaprabhaNewsNetwork |  
Published : Jun 13, 2025, 02:52 AM IST
ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

Valmiki leaders issue warning to CM!

-ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪಗೌಡ ಆಲ್ದಾಳ ಆಕ್ರೋಶ

------

ಕನ್ನಡಪ್ರಭ ವಾರ್ತೆ ಯಾದಗಿರಿ

ಪರಿಶಿಷ್ಟ ಪಂಗಡದ ಜನಾಂಗಗಳಿಗೆ ಯಾವುದೇ ಅಭಿವೃದ್ಧಿ ಯೋಜನೆಗಳು ಸಮರ್ಪಕವಾಗಿ ಮುಟ್ಟುತ್ತಿಲ್ಲ ಎಂದು ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪಗೌಡ ಆಲ್ದಾಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜಕ್ಕೆ ಅನುದಾನ ನೀಡದಿರುವ ಕೊರತೆಯಿಂದ ಈ ಸಮಾಜಗಳು ತೀರಾ ಹಿಂದುಳಿಯಲು ಕಾರಣವಾಗಿದೆ. ಅಲ್ಲದೆ ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳು ವಿತರಣೆಯೂ ಹೆಚ್ಚಾಗುತ್ತಿವೆ. ಕಳೆದ 3 ದಶಕಗಳಿಂದ ಹೋರಾಟ ಮಾಡಿದರು ಇದನ್ನು ಕಟ್ಟುನಿಟ್ಟಾಗಿ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿವೆ ಎಂದು ಆರೋಪಿಸಿದರು.

ಮೀಸಲಾತಿ ವಂಚನೆಯಿಂದ ನೈಜ ಪರಿಶಿಷ್ಟ ಪಂಗಡದವರಿಗೆ ಅಭಿವೃದ್ಧಿ ವಿಷಯದಲ್ಲಿ ಅನ್ಯಾಯವಾಗುತ್ತಿದೆ ಮತ್ತು ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಜನಾಂಗದ ಮೇಲೆ ಇತ್ತೀಚಿಗೆ ದಬ್ಬಾಳಿಕೆ ದೌರ್ಜನ್ಯ, ಶೋಷಣೆ ಮುಂತಾದ ಘಟನೆಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟುವಲ್ಲಿ ಸರ್ಕಾರವು ವಿಫಲವಾಗಿರುವದನ್ನು ವಿರೋಧಿಸಿ, ಜಿಲ್ಲೆಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರತಿಭಟನೆ ಮುಖಾಂತರ ಘೇರಾವ್ ಹಾಕುತ್ತೇವೆ ಎಂದು ಹೇಳಿದರು.

ವಾಲ್ಮೀಕಿ ನಾಯಕ ಸಮಾಜದ ಉತ್ತರ ಕರ್ನಾಟಕ ಅಧ್ಯಕ್ಷ ಮಾರೆಪ್ಪ ನಾಯಕ ಮಗ್ದಂಪೂರ ಮಾತನಾಡಿ, ಯಾದಗಿರಿ ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಭಗವಾನ ಶ್ರೀಮಹರ್ಷಿ ವಾಲ್ಮೀಕಿ ಪುತ್ತಳಿ ಸ್ಥಾಪನೆ ಸಂಬಂಧ ಸ್ಥಳದ ದಾಖಲೆಗಳ ಅರ್ಜಿಯನ್ನು ಇ-ಖಾತೆ ನೀಡುವಲ್ಲಿ ವಿಳಂಬ, ಪರಿಶಿಷ್ಟ ಪಂಗಡದ ಇಲಾಖೆಗೆ ಸಚಿವರನ್ನು ನೇಮಕ ಮಾಡದೆ ಇರುವುದು, ಬೆಂಗಳೂರಿನ ನಗರ ಪೋಲಿಸ್ ಆಯುಕ್ತರಾಗಿದ್ದ ದಯಾನಂದ್‌ ಐಪಿಎಸ್, ಅವರನ್ನು ಅಮಾನತ್ತು ಮಾಡಿರುವ ಘಟನೆ ಖಂಡನೀಯ ಎಂದರು.

ನಕಲಿ ಜಾತಿ ಪ್ರಮಾಣ ಪತ್ರ ನೀಡುತ್ತಿರುವ ತಹಸೀಲ್ದಾರ ಹಾಗೂ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯ, ಏಪ್ರಿಲ್ 10 ರಂದು ಶಹಾಪೂರ ತಾಲೂಕಿನ ಮದ್ರಿಕಿ ಕ್ರಾಸ್ ಹತ್ತಿರ ಭೀಕರ ರಸ್ತೆ ಅಪಘಾತದಲ್ಲಿ ಯಾದಗಿರಿ ತಾಲೂಕಿನ ವರ್ಕನಳ್ಳಿ ಗ್ರಾಮದ ಪರಿಶಿಷ್ಟ ಪಂಗಡದ 7 ಜನ ದುರ್ಮರಣ ಹೊಂದಿದ್ದು ಆ ಕುಟುಂಬಗಳಿಗೆ ಸರ್ಕಾರದಿಂದ ಇಲ್ಲಿಯವರಿಗೆ ಪರಿಹಾರ ನೀಡದಿರುವುದು ಸರಿಯಲ್ಲ ಎಂದರು.

ವಾಲ್ಮೀಕಿ ಸಮಾಜದ ಸಿದ್ದಲಿಂಗಪ್ಪ ನಾಯಕ, ಸಾಹೇಬಗೌಡ ಗೌಡಗೇರ. ಮರೆಪ್ಪ ಪ್ಯಾಟಿ. ದೊಡ್ಡಯ್ಯ ನಾಯಕ. ಹಣಮಂತ ನಾಯಕ ಖಾನಹಳ್ಳಿ. ಚಂದ್ರಕಾಂತ ಹತ್ತಿಕುಣಿ. ಶರಣಪ್ಪ ಜಾಕನಳ್ಳಿ ಮುಂತಾದವರಿದ್ದರು.

-----

12ವೈಡಿಆರ್‌9: ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಯಾದಗಿರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’