ಭಟ್ಕಳ: ಸರ್ಪನಕಟ್ಟೆಯ ವಾಸುಕಿ ಸೌಹಾರ್ದ ಸಹಕಾರಿ ಸಂಘದ 4ನೇ ವರ್ಷದ ಸರ್ವ ಸಾಧಾರಣಾ ಸಭೆ ಸಂಘದ ಅಧ್ಯಕ್ಷ ಗಜೇಂದ್ರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
₹2.47 ಕೋಟಿ ಠೇವಣಿಯನ್ನು ವಿವಿಧ ಬ್ಯಾಂಕುಗಳಲ್ಲಿ ಗುಂತಾವಣೆ ಮಾಡಲಾಗಿದೆ. ದುಡಿಯುವ ಬಂಡವಾಳ ₹12 ಕೋಟಿಗೆ ಏರಿಕೆಯಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಸಾಲದ ವಸೂಲಾತಿಯ ಪ್ರಮಾಣವು ಶೇ.99ರಷ್ಟಿದೆ. ಶಾಸನಬದ್ದ ಲೆಕ್ಕ ಪರಿಶೋಧಕರು ಸಂಘದ ಅಡಿಟ್ ವರ್ಗೀಕರಣವನ್ನು ''''''''ಅ'''''''' ವರ್ಗದಲ್ಲಿ ವರ್ಗೀಕರಿಸಿದ್ದಾರೆ. ಸದಸ್ಯರ ಬೇಡಿಕೆಯಂತೆ ನಗರದಲ್ಲಿ ರಂಗೀಕಟ್ಟೆ ಶಾಖೆಯನ್ನು ಶಿಫಾ ಕ್ರಾಸಿನ ಬಳಿ ಆರಂಭಿಸಲಾಗಿದೆ ಎಂದರು.
ಸದಸ್ಯರಿಗೆ ಸಂಘದಲ್ಲಿ ವ್ಯವಹಾರ ಮಾಡಲು ಅನುಕೂಲವಾಗುವ ಎಟಿಎಂ, ಸೇಫ್ ಡೆಪಾಸಿಟ್ ಲಾಕರ್, ನೋಮಿನೇಶನ್, ಆರ್.ಟಿ.ಜಿ.ಎಸ್/ನೆಫ್ಟ್ ಎಸ್.ಎಂ.ಎಸ್. ಲಭ್ಯವಿದೆ ಎಂದರು.ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡುತ್ತಿರುವ ಇಬ್ಬರು ಸಾಲಗಾರ ಸದಸ್ಯರನ್ನು ಹಾಗೂ ಸಂಘದ ಹಿರಿಯ ಸ್ಥಾಪಕ ಷೇರುದಾರ ಸದಸ್ಯ ಸದಾಶಿವ ನಾರಾಯಣ ಗುಡಿಗಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಟ್ಕಳದ ವಾಸುಕಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣಾ ಸಭೆಯಲ್ಲಿ ಮಾತನಾಡುತ್ತಿರುವ ಅಧ್ಯಕ್ಷ ಗಜೇಂದ್ರ ಶೆಟ್ಟಿ.