ಕೃಷ್ಣ ಎನ್. ಲಮಾಣಿ
ಖಾಸಗಿ ಆಸ್ಪತ್ರೆಗಳ ಸೇವೆ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ದೀಪಾಲಿ ಆಸ್ಪತ್ರೆಯಲ್ಲಿ 40 ಬೆಡ್, ಲೈಫ್ಲೈನ್ ಆಸ್ಪತ್ರೆಯಲ್ಲಿ 20, ಶರನಂ ಆಸ್ಪತ್ರೆಯಲ್ಲಿ 20 ಬೆಡ್, ಕೆಎಲ್ಎಸ್ ಆಸ್ಪತ್ರೆಯಲ್ಲಿ 10 ಬೆಡ್ಗಳಲ್ಲಿ ಕೊರೋನಾ ಪಾಸಿಟಿವ್ ಆದವರಿಗೆ ಕಾಯ್ದಿರಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಮತ್ತೆ ಈ ಆಸ್ಪತ್ರೆಗಳು ಸೇವೆ ನೀಡಲು ಮುಂದೆ ಬಂದಿದ್ದು, ಕೊರೋನಾ ಅಬ್ಬರ ಹೆಚ್ಚಾದರೆ ಈ ಆಸ್ಪತ್ರೆಗಳಲ್ಲೂ ಸೇವೆ ಲಭ್ಯವಾಗಲಿದೆ.ಕೊರೋನಾದ ಒಂದನೇ, ಎರಡನೇ ಮತ್ತು ಮೂರನೇ ಅಲೆಯಲ್ಲಿ ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳ ಬಿಲ್ ಅನ್ನು ಜನರೇ ಪಾವತಿ ಮಾಡಿದ್ದಾರೆ. ಕೆಲವು ಖಾಸಗಿ ಕಂಪನಿಗಳ ಉದ್ಯೋಗಿಗಳು ಆರೋಗ್ಯ ವಿಮೆಯಿಂದ ಪಾವತಿ ಮಾಡಿದ್ದರೆ, ಇನ್ನೂ ಹಲವರು ನೇರ ಪಾವತಿ ಮಾಡಿದ್ದಾರೆ. ಈ ಆಸ್ಪತ್ರೆಗಳ ಬಿಲ್ ಸರ್ಕಾರ ಪಾವತಿ ಮಾಡಿಲ್ಲ.
ಈ ಆಸ್ಪತ್ರೆಗಳಲ್ಲಿ ಕೊರೋನಾ ಪಾಸಿಟಿವ್ ಇದ್ದವರಿಗೆ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಪರವಾನಗಿ ನೀಡಿತ್ತು. ಈ ಬಾರಿಯೂ ಎಲ್ಲ ಕ್ರಮಗಳನ್ನು ಕೈಗೊಂಡು ಪರವಾನಗಿ ನೀಡಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಹಾಗಾಗಿ ಸರ್ಕಾರಿ ಆಸ್ಪತ್ರೆಗಳ 830 ಬೆಡ್ಗಳ ಜೊತೆಗೆ ಖಾಸಗಿ ಆಸ್ಪತ್ರೆಗಳ ಬೆಡ್ಗಳು ಕೂಡ ಲಭ್ಯವಾಗಲಿವೆ.ಆರೋಗ್ಯ ಧಾಮ ಮೂವರು: ಕಳೆದ ವರ್ಷ ಕೋವಿಡ್ ವೇಳೆ ಹೂವಿನಹಡಗಲಿಯ ಆರೋಗ್ಯಧಾಮಕ್ಕೆ ಮೂವರಿಗೆ ಸುವರ್ಣ ಆರೋಗ್ಯ ಟ್ರಸ್ಟ್ನಿಂದ ಶಿಫಾರಸು ಮಾಡಲಾಗಿತ್ತು. ಈ ಆರೋಗ್ಯ ಧಾಮದಲ್ಲಿ ಮೂವರು ಚಿಕಿತ್ಸೆ ಪಡೆದಿದ್ದು, ಚಿಕಿತ್ಸೆ ವೆಚ್ಚ ₹1,56,900ನ್ನು ಸರ್ಕಾರವೇ ಪಾವತಿ ಮಾಡಿದೆ. ಉಳಿದಂತೆ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಬಿಲ್ ಪಾವತಿ ಮಾಡಲಾಗಿಲ್ಲ.
ಕೊರೋನಾ ವೇಳೆ ಖಾಸಗಿ ಆಸ್ಪತ್ರೆಯವರು ವಿಜಯನಗರ ಜಿಲ್ಲೆಯಲ್ಲಿ ಸೇವೆ ನೀಡಿದ್ದಾರೆ. ಇನ್ನೂ ಹೂವಿನಹಡಗಲಿಯ ಆರೋಗ್ಯ ಧಾಮಕ್ಕೆ ಸುವರ್ಣ ಆರೋಗ್ಯ ಟ್ರಸ್ಟ್ ವತಿಯಿಂದ ಮೂವರು ಪಾಸಿಟಿವ್ ಹೊಂದಿವರಿಗೆ ರೇಫರ್ ಮಾಡಲಾಗಿತ್ತು. ₹1,56,900 ಯನ್ನು ಸರ್ಕಾರ ಪಾವತಿ ಮಾಡಿದೆ. ಉಳಿದಂತೆ ಖಾಸಗಿ ಆಸ್ಪತ್ರೆಗಳಿಗೆ ಪಾವತಿ ಮಾಡಲಾಗಿಲ್ಲ ಎಂದು ವಿಜಯನಗರ ಡಿಎಚ್ಒ ಡಾ. ಶಂಕರ್ ನಾಯ್ಕ ಹೇಳಿದ್ದಾರೆ.