ಕನ್ನಡಪ್ರಭ ವಾರ್ತೆ ವಿಜಯಪುರ
ಇದ್ದಕ್ಕಿದ್ದಂತೆ ಆಕ್ರೋಶಗೊಂಡ ಅವರು ನಿಮ್ಮದು ಬಹಳ ಆಗಿದೆ. ಒಂದು ಕೈ ನೋಡ್ತಿನಿ, ನಿನ್ನ ಮುಗಿಸ್ತಿನಿ, ನಮ್ಮನ್ನ ಖಲಾಸ್ ಮಾಡುತ್ತೇನೆಂದು ಜೀವ ಬೆದರಿಕೆ ಹಾಕಿದರು. ನಾನು ಬಬಲೇಶ್ವರದಲ್ಲಿ ಮಾಡುವಂತಿ ಬಾ ಎಂದೆ, ಅಷ್ಟರಲ್ಲಿ ಕೆಲ ಮುಖಂಡರು ಅವರನ್ನು ಸಮಾಧಾನಪಡಿಸಿ ಕಳುಹಿಸಿದರು. ಈ ಕುರಿತು ನಾನು ಆದರ್ಶನಗರ ಠಾಣೆಯಲ್ಲಿ ಅಪರಿಚಿತ ಸರ್ದಾರಜಿ ವಿರುದ್ಧ ಎಫ್ಐಆರ್ ಮಾಡಿದ್ದೇನೆ ಎಂದರು.
ನನಗೆ ಜೀವ ಬೆದರಿಕೆ ಇರುವುದರಿಂದ ತನಿಖೆ ನಡೆಸಬೇಕು ಹಾಗೂ ನನಗೆ ರಕ್ಷಣೆ ಕೊಡಬೇಕು ಎಂದು ನಾನು ಈಗಾಗಲೇ ಡಿಐಜಿ, ಗೃಹ ಸಚಿವರಿಗೆ, ಸಿಎಂ ಅವರಿಗೆ ಪತ್ರ ಕೊಟ್ಟಿದ್ದೇನೆ. ಜೈಲಿನಲ್ಲಿ ಇದ್ದಂತಹ ಕುಖ್ಯಾತ ಖೈದಿಗಳಿಗೆ ಸಾರಾಯಿ, ಊಟ, ಗಾಂಜಾ, ಸಿಮ್ಕಾರ್ಡ್ ಕೊಡುವ ವಿಜುಗೌಡರು, ಅಂತಹ ಆರೋಪಿಗಳ ಸಹಾಯದಿಂದ ಪಂಜಾಬ್ನಿಂದ ಕೆಲವು ಧಡೂತಿ ಸರ್ದಾರಜಿಗಳನ್ನು ಕರೆಯಿಸಿ, ತಮ್ಮ ಜೊತೆ ಇರಿಸಿಕೊಂಡಿದ್ದಾರೆ. ಅವರ ಮೂಲಕ ಪದೇಪದೇ ಅಟ್ಯಾಕ್ ಮಾಡ್ತಾರೆ. ನಮಗೆ ಜೀವ ಬೆದರಿಕೆ ಹಾಕುತ್ತಾರೆ ಎಂದು ವಿಜುಗೌಡರ ಜೊತೆ ಸರ್ದಾರಜಿ ಇರುವ ಫೋಟೊ ಪ್ರದರ್ಶಿಸಿದರು. ಇದನ್ನೆಲ್ಲ ಬಿಟ್ಟು ನೀವು ನಿಮ್ಮ ಮಕ್ಕಳಿಗೆ ಒಳ್ಳೆ ಸಂಸ್ಕ್ರತಿ ಕೊಡಿ ಎಂದು ಸಲಹೆ ನೀಡಿದರು.