ಭಾಷೆ ಮೇಲಿನ ಪ್ರೀತಿಗೆ ಕಸಾಪ ಸ್ಥಾಪಿಸಿದ ವಿಶ್ವೇಶ್ವರಯ್ಯ

KannadaprabhaNewsNetwork |  
Published : Sep 19, 2025, 01:00 AM IST
ಫೋಟೋ (19 ಹೆಚ್‌ ಎಲ್‌ ಕೆ 2)ಪಟ್ಟಣದ ಸಕಾ}Üರಿ ಪ್ರಥಮ ದಜೆ}ಕಾಲೇಜು  ಕನ್ನಡ ಸಾಹಿತ್ಯ ಪರಿಷತು ಆಯೋಜಿಸಿದ್ದ ಸರ್‌ .ಮೋಕ್ಷಗೊಂಡಂ  ವಿಶ್ವೇಶ್ವರಯ್ಯನವರ  ಜನ್ಮ ದಿನದ  ಪ್ರಯುಕ್ತ ಇಂಜಿಯಸ್‌} ದಿನೋತ್ಸವದ ಕಾಯ}ಕ್ರಮದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ  ಅಧ್ಯಕ್ಷ ಎನ್. ಶಿವಮೂರ್ತಿ ಮಾತನಾಡಿದರು   | Kannada Prabha

ಸಾರಾಂಶ

ಹೊಳಲ್ಕೆರೆಯಲ್ಲಿ ಆಯೋಜಿಸಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರ ಜಯಂತಿಯಲ್ಲಿ ಕಸಾಪ ಅಧ್ಯಕ್ಷ ಎನ್.ಶಿವಮೂರ್ತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ವಿಶ್ವೇಶ್ವರಯ್ಯನವರ ಸ್ವಭಾವ ಒಂದು ಪ್ರಮುಖ ಭಾಗವೆಂದರೆ ಕನ್ನಡ ಭಾಷೆಯ ಮೇಲಿನ ಪ್ರೀತಿ ಕನ್ನಡದ ಸುಧಾರಣೆಗಾಗಿ ಅವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು ಸಂಸ್ಥಾಪಕರಲ್ಲಿ ಒಬ್ಬರಾಗಿ ಪ್ರಮುಖ ಪಾತ್ರವಹಿಸಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಹೇಳಿದರು ಅಧ್ಯಕ್ಷ ಎನ್.ಶಿವಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್‌ ಆಯೋಜಿಸಿದ್ದ ಸರ್‌ ಎಂ.ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ಎಂಜಿನಿಯರ್ಸ್‌ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಸೂರು ಸಾಬೂನು ಕಾರ್ಖಾನೆಯ ಸ್ಥಾಪನೆ, ಮೈಸೂರು ಬ್ಯಾಂಕ್ ಸ್ಥಾಪನೆ, ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ, ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ, ಕನ್ನಡ ಸಾಹಿತ್ಯ ಪರಿಷತ್‌ ಸ್ಥಾಪನೆ, ಶ್ರೀ ಜಯ ಚಾಮರಾಜೇಂದ್ರ ವೃತ್ತಿ ಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಜನ ಸಾಮಾನ್ಯರ ಮನಸ್ಸಿನಲ್ಲಿ ಶ್ರೀಯುತರ ಮನೆ ಮಾತಾಗಿ ಇಂದು ಉಳಿದಿವೆ ಎಂದು ತಿಳಿಸಿದರು.

ಕನ್ನಡ ಬೆಂಬಲಿಗರಾಗಿ ವಿಚಾರ ಸಂಕಿರಣಗಳನ್ನು ಕನ್ನಡದಲ್ಲಿ ಸ್ಥಾಪಿಸಿ ನಡೆಸಬೇಕೆಂದು ಬಯಸಿದ್ದರು, ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಇವರ ಸೇವೆ ಅನನ್ಯ ಎಂದು ನುಡಿದರು.

ವಿಶ್ವೇಶ್ವರಯ್ಯನವರ ಸಾಧನೆ ಮತ್ತು ಕೊಡುಗೆಗಳ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಾಗ್ದೇವಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಪಿ.ಸಿದ್ದಲಿಂಗ ಸ್ವಾಮಿಯವರು ಅಭಿನಂದನಾ ಪತ್ರವನ್ನು ವಿತರಿಸಿ ಸನ್ಮಾನಿಸಿದರು.

ಪ್ರಾಸ್ತಾವಿಕವಾಗಿ ಆಶಯ ನುಡಿಗನ್ನಾಡಿದ ಶ್ರೀ ಸಿದ್ದವನಹಳ್ಳಿ ವೀರೇಶ್ ಕುಮಾರ್, ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಭಾಗವನ್ನು ಗುಡಿಸುವುದಾಗಿದ್ದರೆ ಜಗತ್ತಿನ ಅತ್ಯಂತ ಸ್ವಚ್ಛ ರಸ್ತೆ ಆಗುವಂತೆ ಗುಡಿಸು. ಅದೃಷ್ಟ ಎನ್ನುವುದು ದೇವರ ಕೈಯಲ್ಲಿ ನಿಕ್ಷೀಯವಾಗಿರುವ ಸಾಧನವಲ್ಲ. ನಮ್ಮ ವಿಧಿ ಮನುಷ್ಯನ ಕೈಯಲ್ಲಿರುವ ಸಾಧನ ಎಂದು ಹೇಳುತ್ತಿದ್ದವರು ಸರ್ ಎಂ. ವಿಶ್ವೇಶ್ವರಯ್ಯನವರು ಎಂದು ನುಡಿದರು. ಸಮಾರಂಭದ ಅಧ್ಯಕ್ಷತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೊಟ್ರಪ್ಪ ವಹಿಸಿದ್ದರು.

ಸಮಾರಂಭದಲ್ಲಿ ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ಉಪ ವಿಭಾಗದ ಅಭಿಯಂತರರಾದ ಎಚ್.ಕೆ.ದಯಾನಂದಸ್ವಾಮಿ, ಕಸಬ ಹೋಬಳಿ ಕಾಸಪ ಅಧ್ಯಕ್ಷ ಆರ್.ಅಣ್ಣಪ್ಪ, ಪಿಡಬ್ಲ್ಯೂಡಿ ಅಭಿಯಂತರರಾದ ತನುಜಾ ಎಂ.ಸ್ವಾತಿ, ಪಿ.ಬಿ.ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಶಿವಶಂಕರ್.ಕೆ ಅವರನ್ನ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಭಾಷಾ ವಿಭಾಗದ ಸಹಪ್ರಾಧ್ಯಪಕರಾದ ಟಿ.ಮಂಜುನಾಥ್, ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರವೀಣ್, ಆರೋಗ್ಯ ಇಲಾಖೆಯ ಅಧ್ಯಕ್ಷರಾದ ರಂಗನಾಥ್ ಎಂ.ಕೆ.ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ಮಾರುತೇಶ್, ಗೌರವ ಕಾರ್ಯದರ್ಶಿಯಾದ ಬಿ.ಜಿ.ಹಳ್ಳಿ ವೆಂಕಟೇಶ್, ಸಿಬ್ಬಂದಿ ನಾರಪ್ಪ, ರಂಗಸ್ವಾಮಿ, ತೃತೀಯ ಬಿಎ ವಿದ್ಯಾರ್ಥಿ ಅವಿನಾಶ್, ಕನ್ನಡ ವಿಭಾಗದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ