ಕಾಂಗ್ರೆಸ್‌ಗೆ ಮತ ನೀಡಿ ಡಾ.ಪ್ರಭಾ ಗೆಲ್ಲಿಸಿ

KannadaprabhaNewsNetwork |  
Published : May 01, 2024, 01:29 AM IST
ಹರಿಹರದ ರೇಣುಕಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿದರು. | Kannada Prabha

ಸಾರಾಂಶ

ಸಮಸ್ತ ವೀರಶೈವ ಸಮಾಜದವರ ಪ್ರಸಕ್ತ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹರಿಹರದಲ್ಲಿ ಕೋರಿದ್ದಾರೆ.

- ಹರಿಹರ ನಗರದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಮನವಿ - - - ಕನ್ನಡಪ್ರಭ ವಾರ್ತೆ ಹರಿಹರ

ಸಮಸ್ತ ವೀರಶೈವ ಸಮಾಜದವರ ಪ್ರಸಕ್ತ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಕೋರಿದರು.

ತಾಲೂಕು ವೀರಶೈವ ಮಹಾಸಭಾ ಮಂಗಳವಾರ ನಗರದ ರೇಣುಕಾ ಮಂದಿರದಲ್ಲಿ ಆಯೋಜಸಿದ್ದ ಬಸವ ಜಯಂತಿ ಪೂರ್ವಭಾವಿ ಸಭೆಗೆ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು ಮತಯಾಚನೆ ಮಾಡಿದರು.

ಬಹುತೇಕ ವೀರಶೈವರು ಬಿಜೆಪಿ ಪರ ಎನ್ನಲಾಗುತ್ತಿದೆ. ಆದರೆ ಈ ಚುನಾವಣೆಯಲ್ಲಿ ಸಮಾಜ ಬಾಂಧವರು ಬದಲಾವಣೆ ಬಯಸಿದ್ದಾರೆ. ವೀರಶೈವ ಸಮಾಜ ಎಲ್ಲಾ ಸಮಾಜಗೊಳೊಂದಿಗೆ ಒಗ್ಗೂಡಿ ನಾಡು-ನುಡಿಯ ಅಭಿವೃದ್ಧಿಗೆ ಸಹಕರಿಸುತ್ತಾ ಬಂದಿದೆ. ಆದರೆ, ಬಿಜೆಪಿಯಿಂದ ಆಯ್ಕೆಯಾಗಿದ್ದ ೨೫ ಸಂಸದರು ಒಮ್ಮೆಯೂ ಲೋಕಸಭೆಯಲ್ಲಿ ಮಾತನಾಡಲಿಲ್ಲ. ರಾಜ್ಯದ ಹಿತ ಕಾಯಲಿಲ್ಲ. ಹಾಗಾಗಿ, ಈ ಸಲ ಬಹುತೇಕ ವೀರಶೈವರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.

ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ಡಾ. ಪ್ರಭಾ ಕನ್ನಡದ ಜೊತೆ ಇಂಗ್ಲಿಷ್, ಹಿಂದಿ, ಉರ್ದು ನಿರರ್ಗಳವಾಗಿ ಮಾತನಾಡುತ್ತಾರೆ. ಆದ್ದರಿಂದ ಲೋಕಸಭೆಯಲ್ಲಿ ರಾಜ್ಯದ ಪರ ಧ್ವನಿ ಎತ್ತಿ, ಚರ್ಚೆ ನಡೆಸಿ, ರಾಜ್ಯದ ಮತ್ತು ಕ್ಷೇತ್ರದ ಹಿತ ಕಾಯಲಿದ್ದಾರೆ. ಉನ್ನತ ವ್ಯಾಸಾಂಗ ಮಾಡಿ, ವೈದ್ಯರಾಗಿರುವ ಅಲ್ಲದೇ ರಾಜಕೀಯ ಪರಿಣಿತಿಯನ್ನೂ ಪಡೆದಿರುವ ಅವರು ಆಡಳಿತ ನಡೆಸಲು ಸಮರ್ಥರಿದ್ದಾರೆ ಎಂದರು.

ಮಹಾಸಭಾ ತಾಲೂಕು ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ಮಾಜಿ ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಮುಖಂಡರಾದ ರೇಣುಕಾ ಪ್ರಸನ್ನ, ನಿಖಿಲ್ ಕೊಂಡಜ್ಜಿ, ಡಿ.ಕುಮಾರ್ ಶಂಕರ್, ಖಟಾವಕರ್, ಎನ್.ಎಚ್. ಶ್ರೀನಿವಾಸ್ ನಂದಿಗಾವಿ, ಅರಸೀಕೆರೆ ಕೊಟ್ರೇಶ್, ಟಿ.ಜಿ. ಮುರುಗೇಶಪ್ಪ, ಪ್ರಕಾಶ್ ಪಾಟೀಲ್, ಕೆ.ಸಿ. ಪಾಟೀಲ್, ವೀರೇಶ್ ಮೆಡಿಕಲ್ಸ್ ಇತರರಿದ್ದರು.

- - - -೩೦ಎಚ್‌ಆರ್‌ಆರ್೩:

ಸಭೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ