ಮತದಾರರೇ ರಾಷ್ಟ್ರದ ಅಭಿವೃದ್ಧಿ ದಿಕ್ಸೂಚಿ: ಶಾಸಕ ಮಂಜು

KannadaprabhaNewsNetwork |  
Published : Apr 27, 2024, 01:17 AM IST
26ಎಚ್ಎಸ್ಎನ್15 : ಶಾಸಕರ ಸ್ವಗ್ರಾಮ ಹನ್ಯಾಳು ಗ್ರಾಮದಲ್ಲಿ   ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಅವರು ಮತದಾನ ಮಾಡಿ ಮಾತನಾಡಿದರು.  | Kannada Prabha

ಸಾರಾಂಶ

ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮತದಾನ ಮುನ್ನ ತಮ್ಮ ಮನದೇವರು ದೇವರಹಟ್ಟಿ ಲಕ್ಷ್ಮೀತಾಯಿ, ಹನ್ಯಾಳಮ್ಮ, ಶ್ರೀ ಹನುಮಂತ ದೇವಾಲಯದಲ್ಲಿ ಪೂಜೆ ನಂತರ ಶಾಸಕ ಎ.ಮಂಜು ತಮ್ಮ ಮನೆಯ ಗೋವುಗಳಿಗೆ ಪೂಎ ಮಾಡಿ ಮತದಾನ ಮಾಡಿದರು.

ಮತದಾನಕ್ಕೂ ಮುನ್ನ ಗೋಪೂಜೆ । ಸ್ವಗ್ರಾಮದ ಶಾಲೆಯಲ್ಲಿ ಹಕ್ಕು ಚಲಾವಣೆ

ಕನ್ನಡಪ್ರಭ ವಾರ್ತೆ ರಾಮನಾಥಪುರ

ಇಂದಿನ ಪ್ರಜಾಪ್ರಭುತ್ವದಲ್ಲಿ ಉತ್ತಮ ಸರ್ಕಾರವನ್ನು ಮತದಾರರೇ ರಚಿಸಿಕೊಳ್ಳುವ ಅವಕಾಶವಿದ್ದು, ರಾಷ್ಟ್ರದ ಅಭಿವೃದ್ಧಿಯ ದಿಕ್ಸೂಚಿ ಮತದಾರರ ಶಕ್ತಿ ಆಗಿದೆ. ಅದ್ದರಿಂದ ಪ್ರತಿಯೊಬ್ಬ ನಾಗರಿಕರು ತಮಗಿರುವ ಅಮೂಲ್ಯವಾದ ಮತವನ್ನು ಜವಾಬ್ದಾರಿಯುತವಾಗಿ ಚಲಾಯಿಸಿ ಎಂದು ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು ಮನವಿ ಮಾಡಿದರು.

ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮತದಾನ ಮುನ್ನ ತಮ್ಮ ಮನದೇವರು ದೇವರಹಟ್ಟಿ ಲಕ್ಷ್ಮೀತಾಯಿ, ಹನ್ಯಾಳಮ್ಮ, ಶ್ರೀ ಹನುಮಂತ ದೇವಾಲಯದಲ್ಲಿ ಪೂಜೆ ನಂತರ ತಮ್ಮ ಮನೆಯ ಗೋವುಗಳಿಗೆ ಪೂಜೆ ಮಾಡಿದ ನಂತರ ಮತಗಟ್ಟಗೆ ಭೇಟಿ ನೀಡಿ ಮತದಾನ ಮಾಡಿದರು.

ಬಳಿಕ ಮಾತನಾಡಿ, ಮತದಾನದ ಶಕ್ತಿ ಅಪಾರ. ರಾಷ್ಟ್ರದ ದಿಕ್ಕು ಮತ್ತು ಅಭಿವೃದ್ಧಿ ಪಥವನ್ನು ಬದಲಿಸುವಂತಹ ಶಕ್ತಿ ಮತದಾನಕ್ಕಿದೆ. ಆದ್ದರಿಂದ ತಪ್ಪದೇ ಮತಗಟ್ಟೆಗೆ ಮತದಾನ ಮಾಡುವಂತೆ ಮತಬಾಂದವರಲ್ಲಿ ಶಾಸಕ ಎ. ಮಂಜು ಹಾಗೂ ಅವರ ಧರ್ಮಪತ್ನಿ ತಾರಾಮಂಜು ಮನವಿ ಮಾಡಿದರು.

ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಿ ಅಭ್ಯರ್ಥಿ ಹಾಸನ ಜಿಲ್ಲೆಯ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನಾಗಿದ್ದು ಪ್ರಜ್ವಲ್ ರೇವಣ್ಣ ಸಂಸದರಾದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಲಿದೆ. ಮೈತ್ರಿಯ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರ ತಾಲೂಕಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಮನೆ-ಮನೆಗೆ ತೆರಳಿ ಕೇಂದ್ರ ಸರ್ಕಾರದ ಸಾಧನೆಗಳು ಕುರಿತ ಕರಪತ್ರ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಮತಯಾಚನೆ ಮಾಡಿ ಸಾರ್ವಜನಿಕರಿಗೆ ಮನವರಿಕೆ ಮಾಡಿದರು. ಬಿಜೆಪಿ ಪಕ್ಷ ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿದು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ರೈತರಿಗೆ ನೀಡಿದಂತಹ ಅಭಿವೃದ್ಧಿ ಯೋಜನೆಗಳು ಮನಸ್ಸಿನಲ್ಲಿಟ್ಟುಕೊಂಡು ಮತದಾರರು ಮತದಾನ ಮಾಡಿ ಎಂದು ಎ. ಮಂಜು ಮತದಾರರಿಗೆ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಾರಾ ಮಂಜು, ಹನ್ಯಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುಂಡಣ್ಣ, ಮಂಜಣ್ಣ, ಕಾಳೇಗೌಡ, ವಿಜಯಕುಮಾರ್, ಸಂತೋಷ್, ಶ್ರೀನಿವಾಸ್, ಜಯಣ್ಣ, ಗಂಗೂರು, ಮಂಜಣ್ಣ, ಗ್ರಾಮದ ಮುಖಂಡರು, ಯುವ ಮುಖಂಡರು ಇದ್ದರು.

ರಾಮನಾಥಪುರದ ಶಾಸಕ ಎ.ಮಂಜು ಸ್ವಗ್ರಾಮ ಹನ್ಯಾಳುವಿನಲ್ಲಿ ಮತದಾನ ಮಾಡಿ ಮಾತನಾಡಿದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್