ಮಳೆಗೆ ಗೋಡೆ ಕುಸಿತ: ವೃದ್ಧ ದಂಪತಿ ಪಾರು

KannadaprabhaNewsNetwork |  
Published : Aug 22, 2024, 12:46 AM IST
ತಿಪಟೂರು : ಮಳೆಗೆ ಮನೆ ಗೋಡೆ ಕುಸಿತ ತಪ್ಪಿದ ಅನಾಹುತ | Kannada Prabha

ಸಾರಾಂಶ

ಮಳೆಗೆ ಗೋಡೆ ಕುಸಿತ: ವೃದ್ಧ ದಂಪತಿ ಪಾರು

ತಿಪಟೂರು: ಕಳೆದ ರಾತ್ರಿ ಸುರಿದ ಮಳೆಗೆ ತಾಲೂಕಿನ ಹೊನ್ನವಳ್ಳಿ ಹೋಬಳಿ ಮಾಯಗೊಂಡನಹಳ್ಳಿ ಗ್ರಾಮದ ಚನ್ನಬಸಮ್ಮ ಎಂಬುವವರ ಮನೆಯ ಗೋಡೆ ಮಳೆಗೆ ಕುಸಿತಗೊಂಡರೂ ಹೆಚ್ಚಿನ ಅನಾಹುತ ತಪ್ಪಿದೆ. ಗ್ರಾಮದ ಚನ್ನಬಸಮ್ಮ ಮತ್ತು ರಾಜಣ್ಣ ವಯೋವೃದ್ದ ದಂಪತಿಗಳು ವಾಸವಿದ್ದ ಮನೆಯ ಗೋಡೆ ಕುಸಿತಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಳೆ ನೀರಿಗೆ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದಿನಸಿ ಸಾಮಾನುಗಳು ನಾಶವಾಗಿದ್ದು ಸುಮಾರು ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಕೂಲಿ ಮಾಡಿ ಜೀವನ ನಡೆಸುತ್ತಿರುವ ಇವರಿಗೆ ವಾಸಕ್ಕೆ ಬೇರೆ ಮನೆ ಇಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೃದ್ದ ದಂಪತಿಗಳಿಗೆ ಆಸರೆ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!