ಮಾರುತಿ ದೇವರ ಜಾತ್ರೆಯಲ್ಲಿ ನೀರೋಕುಳಿ ಸಂಭ್ರಮ

KannadaprabhaNewsNetwork |  
Published : Jun 14, 2025, 01:07 AM IST
ಬನಹಟ್ಟಿಯ ಸೋಮವಾರ ಪೇಟೆಯ ಮಾರುತಿ ದೇವರ ಜಾತ್ರಾ ನಿಮಿತ್ತ ನೀರೋಕಳಿಯಲ್ಲಿ ಮಿಂದೆದ್ದ ಜನತೆ. | Kannada Prabha

ಸಾರಾಂಶ

ಕಾರಹುಣ್ಣಿಮೆ ನಿಮಿತ್ತ ಸೋಮವಾರ ಪೇಟೆಯ ನಾಮದೇವ ಗಲ್ಲಿಯ ಮಾರುತಿ ದೇವರ ಜಾತ್ರಾ ನಿಮಿತ್ತ ಸಂಭ್ರಮದ ನೀರೋಕುಳಿ ಜರುಗಿತು. ನೂರಾರು ಭಕ್ತರು ಹೊಂಡಕ್ಕೆ ನೀರು ತುಂಬಿದರು. ನೂರಕ್ಕೂ ಅಧಿಕ ಯುವಕರ ತಂಡ ಹೊಂಡದಲ್ಲಿನ ನೀರನ್ನು ತುಂಬಿಕೊಂಡು ಪರಸ್ಪರ ಎರಚಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಾರಹುಣ್ಣಿಮೆ ನಿಮಿತ್ತ ಸೋಮವಾರ ಪೇಟೆಯ ನಾಮದೇವ ಗಲ್ಲಿಯ ಮಾರುತಿ ದೇವರ ಜಾತ್ರಾ ನಿಮಿತ್ತ ಸಂಭ್ರಮದ ನೀರೋಕುಳಿ ಜರುಗಿತು.

ನೂರಾರು ಭಕ್ತರು ಹೊಂಡಕ್ಕೆ ನೀರು ತುಂಬಿದರು. ನೂರಕ್ಕೂ ಅಧಿಕ ಯುವಕರ ತಂಡ ಹೊಂಡದಲ್ಲಿನ ನೀರನ್ನು ತುಂಬಿಕೊಂಡು ಪರಸ್ಪರ ಎರಚಿ ಸಂಭ್ರಮಿಸಿದರು.

ನಾಗಪ್ಪ ಬಕರೆ ಹೊಂಡದ ಪೂಜೆಯೊಂದಿಗೆ ನೀರೋಕುಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಈರಣ್ಣ ಹೊನವಾಡ, ಕುಮಾರ ಬಕರೆ, ಪ್ರಶಾಂತ ಕೊಳಕಿ, ಮಹಾಶಾಂತ ಶೆಟ್ಟಿ, ಗಿರೀಶ ಹಾಸೀಲಕರ, ವಾಸು ಕೋಪರ್ಡೆ, ಬಾಳು ಶ್ರೀಶೈಲ ಗಣೇಶನವರ, ರಾಮು ಕೋಪರ್ಡೆ, ಮಹಾಂತೇಶ ಜಾಲಿಕಟ್ಟಿ, ಮುಕುಂದ ಕೋಪರ್ಡೆ, ಗಂಗಪ್ಪ ಗೋಂದಕರ, ಬಾಳು ಗಣೇಶನವರ, ಮಾದೇವ ಬಸ್ಮೆ, ರಾಜು ಬಂಡಿಗಣಿ, ರಮೇಶ ಬೆಳ್ಳಗಿ, ಕಿರಣ ಭಸ್ಮೆ, ಆತ್ಮಾರಾಮ ಬಕರೆ, ಚಂದು ಗೋಂದಕರ, ಶ್ರೀಶೈಲ ಬಂಡಿಗಣಿ, ಮಹಾಂತೇಶ ಜಾಲಿಕಟ್ಟಿ, ಮಾನಿಂಗ ಕೋಪರ್ಡೆ, ಬಾಳಕೃಷ್ಣ ಹಾಸೀಕರ, ಜ್ಯೋತಿಭಾ ಕೋಪರ್ಡೆ ಹನುಮಾನ ದೇವರ ಟ್ರಸ್ಟ್ ಕಮಿತಿಯ ನೂರಾರು ಕಾರ್ಯಕರ್ತರು ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''