ಅಜ್ರವಳ್ಳಿ ರಸ್ತೆ ಮಧ್ಯೆಯಲ್ಲೇ ಜಲ ಉದ್ಭವ: ಕೆಸರು ಗದ್ದೆಯಾದ ದಾರಿ

KannadaprabhaNewsNetwork |  
Published : Aug 05, 2024, 12:34 AM IST
ನರಸಿಂಹರಾಜಪುರ ತಾಲೂಕು ಸೀತೂರು ಗ್ರಾಮದ ಅಜ್ರವಳ್ಳಿ ರಸ್ತೆಯ ಮದ್ಯೆ ಜಲ ಎದ್ದಿದ್ದು ರಸ್ತೆಯಲ್ಲಾ ಕೆಸರುಮಯವಾಗಿದೆ | Kannada Prabha

ಸಾರಾಂಶ

ನರಸಿಂಹರಾಜಪುರ, ಸೀತೂರು ಗ್ರಾಮದ ಅಜ್ರವಳ್ಳಿ ರಸ್ತೆಯಲ್ಲಿ ಮದ್ಯದಲ್ಲೇ ಜಲ ಎದ್ದು ರಸ್ತೆಯೆಲ್ಲಾ ಕೆಸರು ಗದ್ದೆಯಂತಾಗಿದ್ದು ಅಜ್ರವಳ್ಳಿಯ 12 ಮನೆಗಳ ವಾಹನವು ಕಳೆದ 15 ದಿನದಿಂದ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆ ಭಾಗದ ಗ್ರಾಮಸ್ಥರು ದೂರಿದ್ದಾರೆ.

12 ಮನೆಯವರ ವಾಹನ ಮನೆಗೆ ಹೋಗುತ್ತಿಲ್ಲ: ಗ್ರಾಮಸ್ಥರ ದೂರು

ಕನ್ನಡಪ್ರಭ ವಾರ್ತೆ ,ನರಸಿಂಹರಾಜಪುರ

ಸೀತೂರು ಗ್ರಾಮದ ಅಜ್ರವಳ್ಳಿ ರಸ್ತೆಯಲ್ಲಿ ಮದ್ಯದಲ್ಲೇ ಜಲ ಎದ್ದು ರಸ್ತೆಯೆಲ್ಲಾ ಕೆಸರು ಗದ್ದೆಯಂತಾಗಿದ್ದು ಅಜ್ರವಳ್ಳಿಯ 12 ಮನೆಗಳ ವಾಹನವು ಕಳೆದ 15 ದಿನದಿಂದ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಆ ಭಾಗದ ಗ್ರಾಮಸ್ಥರು ದೂರಿದ್ದಾರೆ.

ಸೀತೂರು ಗ್ರಾಮದ ಅಜ್ರವಳ್ಳಿ, ಮಾವಿನ ಹಿತ್ತಲು ಹೋಗಬೇಕಾದರೆ ನಾಗರಮಕ್ಕಿ-ಯಡಗೆರೆ ರಸ್ತೆಯಿಂದ 2 ಕಿ.ಮೀ.ದೂರ ಸಾಗಬೇಕು.ಈ ಭಾಗದಲ್ಲಿ 12 ಮನೆಗಳಿವೆ. ಬಾರೀ ಮಳೆಯಾದ ವರ್ಷದಲ್ಲಿ ಅಜ್ರವಳ್ಳಿ ಸಮೀಪದ ರಸ್ತೆ ಮದ್ಯೆ ಜಲ ಏಳುತ್ತದೆ. ಈ ವರ್ಷ ಭಾರೀ ಮಳೆ ಸುರಿದಿದ್ದರಿಂದ ರಸ್ತೆಯಲ್ಲಿ ಜಲ ಎದ್ದಿದ್ದು ಅಂದಾಜು 600 ಮೀ, ಉದ್ದದ ರಸ್ತೆ ತುಂಬಾ ಕೆಸರು ಮಯವಾಗಿದೆ. ಯಾವುದೇ ವಾಹನ ಈ ಕೆಸರು ದಾಟಿ ಹೋಗಲು ಸಾದ್ಯವಾಗುತ್ತಿಲ್ಲ. ಕಳೆದ 15 ದಿನದಿಂದ ಈ 12 ಮನೆ ಯವರು ತಮ್ಮ ವಾಹನಗಳನ್ನು ಅರ್ಧ ಕಿ.ಮೀ.ದೂರದಲ್ಲಿ ತಾತ್ಕಾಲಿಕ ಶೆಡ್ ಮಾಡಿ ಅಲ್ಲಿ ವಾಹನ ನಿಲ್ಲಿಸಿ ಮನೆಗೆ ನಡೆದು ಕೊಂಡು ಹೋಗುತ್ತಿದ್ದಾರೆ. ಈ ಕೆಸರಿನಲ್ಲಿ ವಾಹನ ಹೋದರೆ ಅಲ್ಲೇ ಸಿಕ್ಕಿ ಹಾಕಿಕೊಳ್ಳುತ್ತದೆ.

ಈ ಜಾಗದಲ್ಲಿ ಪದೇ ಪದೆ ಜಲ ಏಳುವುದರಿಂದ ಕನಿಷ್ಠ ಜಲ ಏಳುವ ಜಾಗದ 600 ಮೀಟರ್‌ ಉದ್ದದ ರಸ್ತೆಗೆ ಕಾಂಕ್ರಿಟ್ ಹಾಕಬೇಕು ಎಂಬುದು ಈ ಭಾಗದ 12 ಮನೆಗಳವರ ಬೇಡಿಕೆ. ಸಂಬಂಧಪಟ್ಟವರು ಗಮನ ಹರಿಸಿ ಜಲ ಏಳುತ್ತಿರುವ ರಸ್ತೆಗೆ ಕಾಂಕ್ರಿಟ್ ಹಾಕಿಸಿ 12 ಮನೆಯವರಿಗೆ ಅನುಕೂಲ ಮಾಡಬೇಕು ಎಂದು ಆ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ