ಕುಕನೂರು:
ಕಳೆದ ಒಂದು ವಾರದಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ಕುರಿತು ಗ್ರಾಮಸ್ಥರು ಸಂಬಂಧಿಸಿದವರಿಗೆ ತಿಳಿಸಿದರೂ ಇಂದು, ನಾಳೆ ಎಂದು ದಿನದೂಡಿದ್ದಾರೆ.
ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಳೆಕೊಪ್ಪ ಗ್ರಾಮಕ್ಕೆ ಬರುವ ನೀರಿನ ಮೂಲಗಳಾದ ಬನ್ನಿಕೊಪ್ಪ ಸಂಪ್ ಹೌಸ್ ಮೋಟಾರ್, ಬೋರ್ವೆಲ್, ಎಲ್ ಆ್ಯಂಡ್ ಟಿ ನೀರಿನ ಸರಬರಾಜು ಯಂತ್ರ ಕೆಟ್ಟ ಪರಿಣಾಮ ಐದಾರು ದಿನದಿಂದ ಹನಿ ನೀರು ಸಹ ಗ್ರಾಮಕ್ಕೆ ಬಂದಿಲ್ಲ. ಇದರಿಂದ ನೀರಿನ ಸಮಸ್ಯೆ ತಲೆದೋರಿದೆ.ಗ್ರಾಪಂ ಅಧ್ಯಕ್ಷನಿಗೆ ತರಾಟೆ:
ಸ್ಥಳದಲ್ಲಿಯೇ ಮೋಟಾರ್ ದುರಸ್ತಿ ಮಾಡುವವರಿಗೆ ದೂರವಾಣಿ ಕರೆ ಮಾಡಿ ಯಂತ್ರ ದುರಸ್ತಿ ಮಾಡಿಸಿದ್ದಾರೆ. ಗ್ರಾಮಸ್ಥರು ಸೋಮವಾರ ನೀರು ಬಂದರೆ ಸರಿ. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಐದಾರು ದಿನಗಳಿಂದ ಗ್ರಾಮಕ್ಕೆ ನೀರು ಪೂರೈಕೆಯಾಗಿಲ್ಲ. ಈ ಬಗ್ಗೆ ಗ್ರಾಪಂಗೆ ತಿಳಿಸಿದರೂ ಸ್ಪಂದಿಸಿಲ್ಲ. ತಕ್ಷಣ ಗ್ರಾಮಕ್ಕೆ ನೀರು ಪೂರೈಸುವ ಜತೆಗೆ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
ಮಾಳೆಕೊಪ್ಪ ಗ್ರಾಮಸ್ಥರುನೀರಿನ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬರುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿ ಯಂತ್ರಗಳ ದುರಸ್ತಿ ಮಾಡಿಸಿದ್ದೇನೆ. ಸೂಚಿಸಿದ್ದೇನೆ. ಸೋಮವಾರದಿಂದ ನೀರು ಸರಬರಾಜು ಆಗಲಿದೆ. ಬನ್ನಿಕೊಪ್ಪದಿಂದ ಬಹುಗ್ರಾಮ ಕುಡಿಯುವ ನೀರಿನ ಸಂಪ್ನಿಂದ ಮಾಳೆಕೊಪ್ಪಕ್ಕೆ ಪ್ರತ್ಯೇಕವಾಗಿ ನೀರು ಸರಬರಾಜು ಮಾಡುವಂತೆ ತಾಲೂಕು ಪಂಚಾಯಿತಿಗೆ ಸಹ ಬರೆಯುತ್ತೇನೆ.ನಾಗರಾಜ ವೆಂಕಟಾಪುರ ಗ್ರಾಪಂ ಅಧ್ಯಕ್ಷ ಬನ್ನಿಕೊಪ್ಪ ಗ್ರಾಮ