ಕನಕಗಿರಿ:
ಧಾರ್ಮಿಕ ಹಾಗೂ ಐತಿಹಾಸಿಕ ಪ್ರಸಿದ್ಧಿಯಾದ ಕನಕಗಿರಿಯಲ್ಲಿ ಕೆಲ ರೆಸಾರ್ಟ್ಗಳು ಅಕ್ರಮವಾಗಿ ನಡೆಯುತ್ತಿದ್ದು, ಅಕ್ರಮ ಚಟುವಟಿಕೆ ನಡೆಯುತ್ತಿವೆ. ಇದರಿಂದ ಪಟ್ಟಣದ ಗೌರವ ಹರಾಜಾಗುತ್ತಿದೆ. ಜಂಗಲ್ ರೆಸಾರ್ಟ್ನಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಕಾನೂನು ಬಾಹಿರವಾಗಿ ಆತನ ಶವ ಸಾಗಣೆ ಮಾಡಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿದ ಮಟ್ಕಾ, ಅಕ್ರಮ ಮರಳು ಸಾಗಣೆಗೆ ಪೊಲೀಸರೇ ಬೆಂಗಾವಲಾಗಿರುವ ಆರೋಪಗಳಿವೆ. ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಹುಲಿಹೈದರ ಗ್ರಾಮದಲ್ಲಿ ಪಿಯು ಕಾಲೇಜ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು. ಕನಕಗಿರಿ ಬಸ್ ನಿಲ್ದಾಣದಲ್ಲಿನ ಇಂದಿರಾ ಕ್ಯಾಂಟೀನ್, ಪಟ್ಟಣದಲ್ಲಿ ಸಬ್ ರೆಜಿಸ್ಟ್ರಾರ್ ಕಚೇರಿ ಆರಂಭಿಸಬೇಕು. ಜೆಸ್ಕಾಂ ಎಇಇ ಕಚೇರಿ ಮಂಜೂರು ಬಗ್ಗೆ ಸ್ಪಷ್ಟನೆ ನೀಡಬೇಕು. ಕನಕಗಿರಿ ಧೂಳು ಮುಕ್ತ ಮಾಡಬೇಕು. ಶೀಘ್ರ ಕನಕಗಿರಿ ಉತ್ಸವದ ದಿನಾಂಕ ನಿಗದಿಪಡಿಸಬೇಕು. ಕಿರಿದಾಗಿರುವ ಹುಲಿಹೈದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಪಂಪಾಪತಿ ಅಕ್ಕಸಾಲಿ, ಆದೇಶ, ಶೇಖರಪ್ಪ, ಮಹೇಶ, ಆಂಜನೇಯ ಬಿ, ಬಸವರಾಜ, ವೀರೇಶ, ಹನುಮನಗೌಡ ಇದ್ದರು.