ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ಜಗತ್ತು ಎಂದಿಗೂ ಶಾಂತಿಯುತ ಸ್ಥಳವಲ್ಲ, 21ನೇ ಶತಮಾನದಲ್ಲಿಯೂ ಏನಾದರೂ ಒಂದು ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ನಮ್ಮ ಹೋರಾಟ, ಯುದ್ಧ, ಘರ್ಷಣೆಗಳು ಮತ್ತು ಅವ್ಯವಸ್ಥೆಗಳು ಇನ್ನೂ ಮುಗಿದಿಲ್ಲ. ತಪ್ಪುಗಳನ್ನು ಪುನರಾವರ್ತಿಸುತ್ತಲೇ ಇರುತ್ತೇವೆ. ಆದರೆ ಈ ಸಂದರ್ಭದಲ್ಲಿ ಪರಸ್ಪರ ಸಂವಾದ ನಡೆಸಿ, ಬಿರುಕುಗಳನ್ನು ತುಂಬಬಹುದು, ಆಗಿರುವ ಗಾಯಗಳನ್ನು ಗುಣಪಡಿಸಬಹುದು, ಉತ್ತಮ ನಾಳೆಯನ್ನು ಸೃಷ್ಟಿಸಬಹುದು, ಒಂದು ಜಗತ್ತು ಒಂದು ಕುಟುಂಬದ ಧ್ಯೇಯವು ಇದೇ ಆಗಿದೆ ಎಂದು ವಿವರಿಸಿದರು.ಜಾಗತಿಕ ನಾಯಕತ್ವ ಪ್ರಶಸ್ತಿ
''''ಬೈನ್ ಕ್ಯಾಪಿಟಲ್ ಇಂಡಿಯಾ'''' ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಮಿತ್ ಚಂದ್ರ ಅವರಿಗೆ ''''''''ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ'''''''' ಪುರಸ್ಕಾರ ನೀಡಿ ಗೌರವಿಸಲಾಯಿತು. ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುತ್ತಿರುವ ''''''''ಡಾ ಎಸ್ ಆರ್ ಚಂದ್ರಶೇಖರ್ ಇನ್ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಟ್ರಸ್ಟ್ಗೆ ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ ನೀಡಿ ಗೌರವಿಸಲಾಯಿತು.ಟ್ರಸ್ಟ್ನ ಅಧ್ಯಕ್ಷರಾದ ಲಯನ್ ವಿವಿ ಕೃಷ್ಣಾ ರೆಡ್ಡಿ, ಟ್ರಸ್ಟಿಗಳಾದ ವಿಎಸ್ ಶಾಂತವರ್ಧನ್, ಡಿಎಲ್ ಸುರೇಶ್ ಬಾಬು ಪ್ರಶಸ್ತಿ ಸ್ವೀಕರಿಸಿದರು. ಲಿಥುವೇನಿಯಾ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಲೆವಾ ಕ್ರಿವಿಕೈಟ್ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಲಿಥುವೇನಿಯಾದ ಪ್ರತಿನಿಧಿಗಳಾದ ಐಸ್ಟೆ ಕೈರೈಟೀನ್, ರಿಕಾರ್ಡಸ್ ಕೈರೈಟೀಸ್, ಲಾಟ್ವಿಯಾ ದೇಶದ ಪ್ರತಿನಿಧಿ ಎಲಿನಾ ಲೆಡಿನಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.