ರಾಂ ಅಜೆಕಾರು
* ಪ್ರತಿಕೂಲ ಹವಾಮಾನದ ಪ್ರಭಾವ:
ಡಿಸೆಂಬರ್ನಿಂದ ಜನವರಿ ತನಕ ಮಳೆ ಸುರಿದ ಪರಿಣಾಮ ಈ ಬಾರಿ ಫಸಲು ಕುಂಠಿತವಾಗಿದೆ. ಚಳಿಯ ಜೊತೆ ಶುಷ್ಕ ವಾತಾವರಣ, ಬಿಸಿಲು ಇದ್ದರೆ ಮಾತ್ರ ಗೇರು, ಮಾವು, ಹಲಸು ಮರಗಳು ಹೂ ಬಿಡಲು ಪೂರಕವಾಗಿದೆ. ಇಬ್ಬನಿ, ಮೋಡ ಮುಸುಕಿದ ವಾತಾವರಣವಿದ್ದರೆ ಹೂ ಬಿಡಲು ಸಾಧ್ಯವಿಲ್ಲ.* ಒಂದು ತಿಂಗಳು ವಿಳಂಬಈ ಬಾರಿ ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ ಮೊದಲ ವಾರದಲ್ಲಿ ಮಾವು, ಹಲಸು ಮರಗಳು ಹೂ ಬಿಟ್ಟಿದ್ದು ಒಂದು ತಿಂಗಳ ಬಳಿಕ ಫಸಲು ಕಟ್ಟಲು ಆರಂಭವಾಗಿದೆ. ಆದರೆ ಮೋಡ ಮುಸುಕಿದ ವಾತಾವರಣವಿದ್ದು ಹೆಚ್ಚಿನ ಪ್ರಮಾಣದಲ್ಲಿ ಹೂವುಗಳು ಕರಟಿ ಹೋಗುತ್ತಿವೆ. ಹೂ ಒಂದು ತಿಂಗಳು ವಿಳಂಬವಾಗಿದ್ದರೂ ಕೂಡ ಫಸಲು ನಿಲ್ಲಲು ಯೋಗ್ಯವಾದ ವಾತಾವರಣ ನಿರ್ಮಾಣವಾಗಿಲ್ಲ. ಏಪ್ರಿಲ್ನಲ್ಲಿ ಮಳೆ ಬಂದರೆ ಫಸಲು ಕ್ಷೀಣಿಸಬಹುದು.* ಒಟ್ಟು ಬೆಳೆ
ಮಾವು ಹಾಗೂ ಗೇರು ಮರಗಳು ತಡವಾಗಿ ಹೂ ಬಿಟ್ಟಿದ್ದರೂ ನುಸಿ ಪೀಡೆ ಬೆಳೆಗಾರರನ್ನು ಹೈರಾಣವಾಗಿಸಿದೆ. ಬಿಸಿಲಿನ ಜೊತೆ ಮೋಡ ಮುಸುಕಿದ ವೇಳೆಯಲ್ಲಿ ಸೂರ್ಯಾಸ್ತ ಮಾನ ಹಾಗೂ ಸೂರ್ಯೋದಯದ ಸಂದರ್ಭ ಟಿ ಆಕಾರದ ಸೊಳ್ಳೆಯು ಸಂತಾನೋತ್ಪತ್ತಿ ನಡೆಸುತ್ತದೆ. ಈ ವೇಳೆ ಹೂವಿನ ಕಾಂಡದ ರಸವನ್ನು ಹೀರಿ ಹೂವನ್ನು ಬಾಡುವಂತೆ ಮಾಡುತ್ತದೆ.* ನುಸಿ ಪೀಡೆಗೆ ಔಷಧವೇನು?ಮೊನೋಪೊಟಸ್ಗಿಂತಲೂ ಕರಾಟೆ ಎಂಬ ಔಷಧ ಬಳಕೆಗೆ ಗೇರು ಕೃಷಿಕರು ಆಸಕ್ತಿ ತೋರುತ್ತಿದ್ದಾರೆ. 100 ಲೀ. ನೀರಿಗೆ 125 ಮಿಲಿ ಕರಾಟೆ ಔಷಧದ ಬಳಕೆ ಹಾಗೂ ಇದರ ಜತೆಗೆ 15:15:15 ಎನ್ನುವ ಔಷಧಿಯನ್ನು 100 ಲೀ.ಗೆ ಅರ್ಧ ಕೆ.ಜಿ.ಯಂತೆ ಬಳಕೆ ಮಾಡಿದರೆ ಟಿ-ಸೊಳ್ಳೆ ಕಾಟವನ್ನು ಸ್ವಲ್ಪಮಟ್ಟಿಗೆ ತಪ್ಪಿಸಬಹುದು.ಈ ಬಾರಿ ಶೇ.30ರಷ್ಟು ಹಣ್ಣಿನ ಕೊರತೆ ಉಡುಪಿ ಜಿಲ್ಲೆಯಲ್ಲಿ ಆಗಬಹುದು. ಜನವರಿಯಲ್ಲಿ ಸುರಿದ ಮಳೆ, ಪ್ರತಿಕೂಲ ಹವಾಮಾನವೇ ತಡವಾಗಿ ಹೂ ಬಿಡಲು ಕಾರಣವಾಗಿದೆ. ಜೂನ್ನಲ್ಲಿ ಹಣ್ಣುಗಳ ಕೊಯ್ಲು ಮಾಡಿದರೂ ಗುಣಮಟ್ಟದ ಹಣ್ಣುಗಳ ಕೊರತೆಯಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಬಿಸಿ ಹೆಚ್ಚಾದಂತೆ ಮಳೆ ಬರುವಿಕೆಯ ಸಾಧ್ಯತೆ ಹೆಚ್ಚು.
-----