ಹುಬ್ಬಳ್ಳಿ:
ಮೇಯರ್ ಸ್ಥಾನವು ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ ಸ್ಥಾನವೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಮೇಯರ್ ಸ್ಥಾನಕ್ಕೆ ಉಮೇಶಗೌಡ ಕೌಜಗೇರಿ, ಬೀರಪ್ಪ ಖಂಡೇಕರ್, ರಾಮಣ್ಣ ಬಡಿಗೇರ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಬೀರಪ್ಪ ಹಾಗೂ ಕೌಜಗೇರಿ 3 ಬಾರಿ ಸದಸ್ಯರಾದವರು. ಬಡಿಗೇರ ನಾಲ್ಕನೆಯ ಬಾರಿಗೆ ಪಾಲಿಕೆಗೆ ಆಯ್ಕೆಯಾದವರು. ಹಿಂದೆ ಎರಡು ಬಾರಿ ಮೇಯರ್ ಹುದ್ದೆಗೆ ಅರ್ಹರಾಗಿದ್ದರೂ ಅವರಿಗೆ ಆಗ ತಪ್ಪಿತ್ತು. ಹೀಗಾಗಿ ಅವರ ಬಗ್ಗೆ ಪಕ್ಷದಲ್ಲಿ ಸಿಂಪಥಿ ಇದೆ. ಖಂಡೇಕರ್ ಕೂಡ ಭಾರೀ ಪ್ರಯತ್ನ ನಡೆಸಿದ್ದಾರೆ. ಖಂಡೇಕರ್ ಮತ್ತು ಬಡಿಗೇರ ಮಧ್ಯೆ ಫೈಪೋಟಿ ಜೋರಾಗಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಪಟ್ಟ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉಪಮೇಯರ್ ಹುದ್ದೆಗೆ ದುರ್ಗಮ್ಮ ಬಿಜವಾಡ ಹಾಗೂ ಚಂದ್ರಿಕಾ ಮೇಸ್ತ್ರಿ ಮಧ್ಯ ಪೈಪೋಟಿ ಇದೆ. ಬಿಜವಾಡ ಮುಂಚೂಣಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಯ್ಕೆಗಾಗಿ ಮೀಟಿಂಗ್?:ಮೇಯರ್- ಉಪಮೇಯರ್ ಸ್ಥಾನಗಳ ಆಯ್ಕೆಗಾಗಿ ಬಿಜೆಪಿ ಕೋರ್ ಕಮೀಟಿ ಸಭೆಯೂ ನಗರದ ಖಾಸಗಿ ಹೋಟೆಲ್ನಲ್ಲಿ ತಡರಾತ್ರಿವರೆಗೂ ನಡೆದಿದೆ. ಜಿಲ್ಲೆಯ ಮಟ್ಟಿಗೆ ಹೈಕಮಾಂಡ್ ಎನಿಸಿರುವ ಕೇಂದ್ರ ಸಚಿವರೂ ಆಗಿರುವ ಪ್ರಹ್ಲಾದ ಜೋಶಿ ಅವರ ನೇತೃತ್ವದಲ್ಲಿ ಸಭೆ ನಡೆದಿದೆ. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಧಾರವಾಡ ವಿಭಾಗದ ಪ್ರಭಾರಿ ಲಿಂಗರಾಜ ಪಾಟೀಲ, ಎಂಎಲ್ಸಿ ಎಸ್.ವಿ. ಸಂಕನೂರ ಸಭೆ ನಡೆಸಿದ್ದಾರೆ.
ವಾಸ್ತವ್ಯ ಅಲ್ಲೇ:
ಒಟ್ಟಿನಲ್ಲಿ ಮಹಾನಗರದ ಪ್ರಥಮ ಪ್ರಜೆ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಶನಿವಾರ ತೆರೆ ಬೀಳಲಿದೆ.
82 ಸದಸ್ಯ ಬಲ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, ಮೂವರು ಎಐಎಂಐಎಂ, 6 ಜನ ಪಕ್ಷೇತರ ಹಾಗೂ ಒಬ್ಬರು ಜೆಡಿಎಸ್ ಸದಸ್ಯರಿದ್ದಾರೆ. ಒಬ್ಬ ಸಂಸದ, ನಾಲ್ವರು ಶಾಸಕರು, ಮೂರು ಎಂಎಲ್ಸಿ ಹೀಗೆ ಎಂಟು ಜನಪ್ರತಿನಿಧಿಗಳು ಸೇರಿದಂತೆ 90 ಮತಗಳಿವೆ. ಎಲ್ಲರೂ ಪಾಲ್ಗೊಂಡರೆ 46 ಮತಗಳು ಬೇಕಾಗುತ್ತವೆ. ಜೆಡಿಎಸ್ನೊಂದಿಗೆ ಹೈಕಮಾಂಡ್ ಮಟ್ಟದಲ್ಲೇ ಬಿಜೆಪಿ ಮೈತ್ರಿ ಇರುವ ಕಾರಣ ಈ ಸಲ ಸಹಜವಾಗಿ ಅವರು ಬಿಜೆಪಿಗೆ ಮತಚಲಾಯಿಸಲಿದ್ದಾರೆ. ಇನ್ನು ಪಕ್ಷೇತರ 6 ಜನರಲ್ಲಿ ಈಗಾಗಲೇ ಮೂವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇನ್ನು ಬಿಜೆಪಿಯಲ್ಲಿ ಮೂವರು ಎಂಎಲ್ಸಿ, ಇಬ್ಬರು ಶಾಸಕರು, ಒಬ್ಬರು ಸಂಸದರು ಸೇರಿದಂತೆ 6 ಜನ ಅಂದರೆ 48 ಮತಗಳಾಗುತ್ತವೆ. ಹೀಗಾಗಿ ಬಿಜೆಪಿಗೆ ಸ್ಪಷ್ಟಬಹುಮತ ಇದೆ. ಮತ್ತೊಮ್ಮೆ ಬಿಜೆಪಿ ಬಾವುಟ ಹಾರುವುದು ಖಚಿತವಾಗಿದೆ.
ಧೋಂಗಡಿಗೆ ಮತ ಹಾಕಲು ಅವಕಾಶ: